Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಔಷಧಿ ಅಂಗಡಿಗಳ ಮುಂದೆ ಕ್ಯೂ ನಿಲ್ಲುವುದನ್ನು ತಪ್ಪಿಸಿ, ಗಿಡಮರ ಬೆಳಸಿ ಆರೋಗ್ಯ ಕಾಪಾಡಿಕೊಳ್ಳಿ : ಸಿದ್ದರಾಜು

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜು. 07 :  ನಗರದ ಬ್ಯಾಂಕ್ ಕಾಲೋನಿಯ ಶ್ರೀ ಮುರುಘ ರಾಜೇಂದ್ರ ಆಟದ ಮೈದಾನದಲ್ಲಿ ಟಾರ್ಗೆಟ್ ಗ್ರೂಪ್ ಚಿತ್ರದುರ್ಗದ ವತಿಯಿಂದ, 8ವರ್ಷದ ಸಂಭ್ರಮಾಚರಣೆ ನಿಮಿತ್ತ 81ವಿವಿಧ ಜಾತಿಯ ಸಸಿಗಳನ್ನು ಬ್ಯಾಂಕ್ ಕಾಲೋನಿ ನಿವಾಸಿಗಳ ಸಹಯೋಗದಲ್ಲಿ ಜು. 7ರಂದು ನೆಡಲಾಯಿತು.

ಸದರಿ ಕಾರ್ಯಕ್ರಮದಲ್ಲಿ ಟಾರ್ಗೆಟ್ ಗ್ರೂಪ್‍ನ ಮುಖ್ಯಸ್ಥರಾದ ಸಿದ್ದರಾಜು ಮಾತಾಡುತ್ತಾ ಜನರು ಔಷಧಿ ಅಂಗಡಿಗಳ ಮುಂದೆ ಕ್ಯೂ ನಿಲ್ಲುತ್ತಾರೆ, ಎಲ್ಲಾ ಕಡೆ ಗಿಡಗಳು ಚೆನ್ನಾಗಿ ಬೆಳೆಸಿದಲ್ಲಿ ಆರೋಗ್ಯ ಸಮಸ್ಯೆ ನಿವಾರಣೆ ಯಾಗಿ ಔಷಧಿ ಅಂಗಡಿಗಳ ಮುಂದೆ ಕ್ಯೂ ನಿಲ್ಲುವುದು ತಪ್ಪುತ್ತದೆ ಎಂದರು.

ಬ್ಯಾಂಕ್ ಕಾಲೋನಿ ನಿವಾಸಿ ಪರಿಸರ ಪ್ರೇಮಿ ನಾಗರಾಜ್ ಸಂಗಮ್ ಈ ಹಿಂದೆ ಚಿತ್ರದುರ್ಗ ಜಿಲ್ಲೆ ಯಲ್ಲಿ ಡಿ. ಸಿ. ರವರಾಗಿದ್ದ  ಅಮರನಾರಾಯಣ ರವರು ಇಡೀ ಬ್ಯಾಂಕ್ ಕಾಲೋನಿಯಲ್ಲಿ 500 ಗಿಡಗಳನ್ನು ನಾಟಿ ಮಾಡಿದ್ದೂ ಅವುಗಳು ಈಗ ಹೆಮ್ಮರವಾಗಿವೇ ಎಂದು ಜ್ಞಾಪನ ಮಾಡಿದರು,

ಗಿಡ ಬೆಳೆದಲ್ಲಿ ನಮ್ಮ ಅರೋಗ್ಯ ಕ್ಕೆ ಬೇಕಾದ ಒಳ್ಳೆಯ ಗಾಳಿ ಸಿಗಲಿದೆ, ಎಲ್ಲರೂ ಪರಿಸರ ಬೆಳೆಸಲು ಮುಂದಾಗಿ ಪ್ರತಿ ಮನೆಯ ಮುಂದೆ ಒಂದು ಗಿಡ ತಪ್ಪದೆ ಬೆಳೆಸಲು ಕರೆ ನೀಡಿದರು ಅಲ್ಲದೆ ಟಾರ್ಗೆಟ್ ಗ್ರೂಪ್ ಇಲ್ಲಿಯ ವರೆಗೆ ನಗರದಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಗಿಡಗಳನ್ನು ವಿವಿಧ ಕಡೆ ಹಾಕಿದ್ದು ಅವುಗಳನ್ನು ನಾವು ನೀರು ಹಾಕಿ ಪೋಶಿಸಬೇಕಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ, ನಾಗರಾಜ್ ಸಂಗಮ್, ಕಿರಣ್ ಶಂಕರ್, ರಾಜಶೇಖರ್, ತಿಪ್ಪೇಸ್ವಾಮಿ, ವರ್ಷ, ಅಧಿಕಾರಿ ಮಹನಂದಿ, ಚಂದ್ರಹಾಸ, ರೇಣುಕಮ್ಮ, ಮತ್ತು ನಾಗರಾಜ್ ಹೇಮಂತ್ ಇತರು ಹಾಗೂ ಟಾರ್ಗೆಟ್ ಗ್ರೂಪ್‍ನ ಸದಸ್ಯರು ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...