Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

8 ಜನರಲ್ಲಿ ಬಿಗ್ ಬಾಸ್ ಮನೆಯಿಂದ ಹೊರಗೆ ಬರೋದು ಯಾರು..?

Facebook
Twitter
Telegram
WhatsApp

 

ಬಿಗ್ ಬಾಸ್ ಸೀಸನ್ 10 ರಿಯಾಲಿಟಿ ಶೋ ಒಂದು ವಾರಗಳನ್ನು ಪೂರೈಸಿದೆ. ಆಟ – ಹೊಂದಾಣಿಕೆಯೆಲ್ಲಾ ಮುಗಿದು ಈಗ ವಾರದ ಕತೆ ಕಿಚ್ಚನ ಜೊತೆಗೆ ಸಮಯ ಬಂದು ನಿಂತಿದೆ. ಮನೆಯಲ್ಲಿ ಸಮರ್ಥರು ಹಾಗೀ ಅಸಮರ್ಥರು ಎಂಬ ಪಟ್ಟಿ ಮಾಡಲಾಗಿದೆ. ಆಟಗಳು, ಸೌಲಭ್ಯಗಳು ಇಬ್ಬರಿಗೂ ಡಿಫ್ರೆಂಟ್ ಆಗಿರಲಿದೆ. ಇದೀಗ ಮೊದಲ ವಾರದಲ್ಲಿ ಹೊರಗೆ ಬರುವ ಸ್ಪರ್ಧಿ ಯಾರು ಎಂಬ ಕುತೂಹಲ ಸಹಜವಾಗಿಯೇ‌ ಇದೆ.

 

ಈಗಾಗಲೇ ಮನೆಯವರಿಂದಾನೇ ಮೈಕೆಲ್, ನೀತು, ತನಿಷಾ, ಸಿರಿ, ಸಂತೋಷ್ ಹಳ್ಳಿಕೆರೆ, ಡ್ರೋನ್ ಪ್ರತಾಪ್, ಸ್ನೇಕ್ ಶ್ಯಾಮ್, ಕಾರ್ತೀಕ್ ನಾಮಿನೇಟ್ ಆಗಿದ್ದಾರೆ. ವೋಟ್ ಮೂಲಕ ಜನ ಎಲ್ಲರನ್ನು ರಕ್ಷಿಸಬಹುದು. ಆದರೆ ಒಬ್ಬರಂತು‌ ಮನೆಯಿಂದ ಹೊರಗೆ ಬರಲೇಬೇಕಾಗಿದೆ. ಈ ಎಂಟು ಜನರಲ್ಲಿ ಇಂದು ಒಬ್ಬರು ಮನೆಯಿಂದ ಹೊರಗೆ ಬರಲಿದ್ದಾರೆ.

ಕಥೆ ಶುರುವಾಗುವ ಮುನ್ನವೇ ಮುಗಿಯುವುದು ಯಾರ ಪಾಲಿಗೆ ಎಂಬ ಪ್ರೋಮೋವನ್ನು ಕಲರ್ಸಗ ಕನ್ನಡ ರಿಲೀಸ್ ಮಾಡಿದೆ. ಇಂದು ಕಿಚ್ಚನ ಪಂಚಾಯ್ತಿಯಲ್ಲಿ ಸಖತ್ ಕ್ಲಾಸ್ ನಡೆಯಲಿದೆ. ಸಮರ್ಥರು ಎನಿಸಿಕೊಂಡವರ ನಡವಳಿಕೆ ನೋಡುಗರಿಗೇನೆ ಅಸಹ್ಯ ಎನಿಸಿದೆ. ಅದರಲ್ಲೂ ಡ್ರೋನ್ ಪ್ರತಾಪನನ್ನು ನಡೆಸಿಕೊಂಡ ರೀತಿಯೂ ಸರಿ ಇಲ್ಲ. ಅವನನ್ನು ನಗಿಸುವ ಪ್ರಯತ್ನ ಎಂದು ಹೇಳುವ ತುಕಾಲಿ ಸಂತು, ಮುಂದೆ ಒಂದು ಹಿಂದೆ ಒಂದು ಮಾತನಾಡುತ್ತಾರೆ. ಡ್ರೋನ್ ಬಗ್ಗೆ, ಇಬ್ಬರು ಸಂತೋಷ್, ಸ್ನೇಹಿತ್ ಬಹಳ ಕೆಟ್ಟದಾಗಿಯೇ ಮಾತನಾಡುತ್ತಾರೆ. ಈ ಎಲ್ಲಾ ವಿಚಾರಗಳಿಗೂ ಕಿಚ್ಚನಿಂದ ಖಂಡಿತ ಸಲಹೆ ಸೂಚನೆಗಳು ಸಿಗಲಿವೆ. ಹಾಗೇ ಕೊನೆಯಲ್ಲಿ ಮನೆಯಿಂದ ಹೊರ ಬರುವುದು ಯಾರು ಎಂಬುದು ತಿಳಿಯಲಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೆಚ್ ಡಿ ರೇವಣ್ಣಗೆ ಬಿಗ್ ರಿಲೀಫ್..!

ಬೆಂಗಳೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. 42ನೇ ಎಸಿಎಂಎಂ ಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ. ಯುವತಿಯ ಕಿಡ್ನ್ಯಾಪ್ ಪ್ರಕರಣ ಸಂಬಂಧ ಜೈಲು ಪಾಲಾಗಿದ್ದ ರೇವಣ್ಣ ಅವರು ಮಧ್ಯಂತರ

ಚಿತ್ರದುರ್ಗದಲ್ಲಿ ಹೊಸ ಡಯಾಲಿಸಿಸ್ ಕೇಂದ್ರ ಪ್ರಾರಂಭ : ನೊಂದಾಯಿತ ರೋಗಿಗಳಿಗೆ ಉಚಿತ ಸೇವೆ

ಚಿತ್ರದುರ್ಗ. ಮೇ.20: ನಗರದ ಜಿಲ್ಲಾಸ್ಪತ್ರೆಯಲ್ಲಿ ಫೆಬ್ರುವರಿ 5 ರಿಂದ ಅಂತರಾಷ್ಟ್ರೀಯ ಗುಣಮಟ್ಟದ 15 ಹೊಸ ಡಯಾಲಿಸೀಸ್ ಯಂತ್ರಗಳೊಂದಿಗೆ ಡಯಾಲಿಸೀಸ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಎಲ್ಲಾ ನೊಂದಾಯಿತ ರೋಗಿಗಳಿಗೆ ಉಚಿತವಾಗಿ ಹಾಗೂ ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕಾವಾದ ಡಿಸ್ಪೋಸಿಬಲ್

error: Content is protected !!