Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

IVF ಮೂಲಕ ತಾಯಿಯಾಗಿದ್ದ ನಟಿ ಭಾವನ ಮಗು ನಿಧನ..!

---Advertisement---

ಬೆಂಗಳೂರು : ಮದುವೆಯಾಗದೆ ಐವಿಎಫ್ ಮೂಲಕ ಗರ್ಭಿಣಿಯಾಗುವ ಮೂಲಕ ನಟಿ ಭಾವನ ರಾಮಣ್ಣ ಸಾಕಷ್ಟು ಸುದ್ದಿಯಾಗಿದ್ದರು. ಈ ಬೆನ್ನಲ್ಲೇ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಈ ಮೊದಲೇ ಅವಳಿ ಜವಳಿ ಮಕ್ಕಳು ಎಂಬುದು ಮೊದಲೇ ತಿಳಿದಿತ್ತು. ತಾನ್ಯಾಕೆ ಐವಿಎಫ್ ಮೂಲಕ ಗರ್ಭೀಣಿಯಾದೆ ಎಂಬ ವಿಚಾರವನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದರು. ಶಾಸ್ತ್ರೋಕ್ತವಾಗಿ ಸೀಮಂತವನ್ನು ಮಾಡಿಕೊಂಡಿದ್ದರು. ಇದೀಗ ಮಗು ನಿಧನವಾಗಿದೆ ಎನ್ನಲಾಗಿದೆ.

ಕಳೆದ ವಾರವಷ್ಟೇ ಭಾವನೆಗೆ ಇಬ್ಬರು ಹೆಣ್ಣು ಮಕ್ಕಳ ಜನನವಾಗಿತ್ತು. ಅದರಲ್ಲಿ ಒಂದು ಮಗು ಅಸುನೀಗಿದೆ ಎನ್ನಲಾಗಿದೆ. ತಿಂಗಳು ಪೂರ್ತಿಯಾಗುವುದಕ್ಕೂ ಮುನ್ನವೇ ಸಮಸ್ಯೆ ಕಾಣಿಸಿಕೊಂಡಿತ್ತಂತೆ. ಹೀಗಾಗಿ ಎಂಟು ತಿಂಗಳಿಗೇನೆ ಹೆರಿಗೆ ಮಾಡಿಸಲಾಗಿದೆ. ವೈದ್ಯರ ಸಲಹೆಯಂತೆಯೇ ಭಾವನಾ ಎಲ್ಲಾ ಚಿಕಿತ್ಸೆಯನ್ನು ಪಡೆದುಕೊಂಡಿದ್ದರು. ಆದರೂ ಭಾವನಾರ ಒಂದು ಮಗು ಉಳಿದಿಲ್ಲ. ಇದರಿಂದ ಸಹಜವಾಗಿಯೇ ಆ ತಾಯಿ ಮನಸ್ಸಿಗೆ ನೋವಾಗಿರುತ್ತದೆ.

ಸದ್ಯ ಒಂದು ಹೆಣ್ಣು ಮಗು ಹಾಗೂ ತಾಯಿ ಭಾವನಾ ಸುರಕ್ಷಿತವಾಗಿದ್ದಾರೆ. ಎರಡು ಕೂಡ ಹೆಣ್ಣು ಮಕ್ಕಳೇ ಜನಿಸಿದ್ದವು. ಆದರೆ ಈಗ ಒಂದೇ ಮಗು ಉಳಿದಿದೆ. ಐವಿಎಫ್ ಮೂಲಕ ಗರ್ಭಿಣಿಯಾದ ಬಳಿಕ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ಮಾಡ್ತಾ ಇದ್ರು. ಮಾಮೂಲಿಯ ಜೀವನಕ್ಕೆ ಸಂಬಂಧಿಸಿದಂತೆ ಯೋಗ ಮಾಡ್ತ, ಪುಸ್ತಕಗಳನ್ನು ಓದುತ್ತಾ, ಮಕ್ಕಳ ಆರೋಗ್ಯದ ಕಡೆಗೂ ಗಮನ ಹರಿಸಿದ್ದರು. ಆದರೆ ವಿಧಿ ಹುಟ್ಟುತ್ತಲೇ ಒಂದು ಮಗುವನ್ನ ಕರೆದುಕೊಂಡು ಹೋಗಿದೆ. ಸದ್ಯ ತಾಯಿಯಾಗಿರುವ ಭಾವನ, ತನ್ನೊಂದೆ ಮಗುವಿನ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ಒಂದು ಮಗುವಿನ ಸಾವು ನೋವನ್ನ ಕೊಟ್ಟರು, ಉಳಿದ ಮಗುವಿನ ಆರೋಗ್ಯದತ್ತ ಗಮನ ಹರಿಸಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment