ಮೈಸೂರು: ಸದ್ಯ ಧರ್ಮಸ್ಥಳದ ಮಾಸ್ಕ್ ಮ್ಯಾನ್ ಚಿನ್ನಯ್ಯ ಈಗ ಎಸ್ಐಟಿ ಅಧಿಕಾರಿಗಳ ವಶದಲ್ಲಿದ್ದು ವಿಚಾರಣೆ ನಡೆಯುತ್ತಿದೆ. ಇದರ ನಡುವೆ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ಮೇಲೆ ಹೌಹಾರಿದ್ದಾರೆ. ಚಿನ್ನಯ್ಯನನ್ನು ಕರೆತಂದಿದ್ದೆ ಕಾಂಗ್ರೆಸ್ ನವರು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಅವರಿಗೆ ಇಷ್ಟೆಲ್ಲಾ ಮಾಡುವುದಕ್ಕೆ ದುಡ್ಡು ಎಲ್ಲಿಂದ ಬರುತ್ತೆ..? ಯಾರು ಕೊಡೋದು ಇವರಿಗೆ..? ಎಲ್ಲಾ ವಿಚಾರವನ್ನು ರಾಜಕೀಯವಾಗಿ ನೋಡಬಾರದು. ಇವರು ರಾಜಕೀಯಕ್ಕೋಸ್ಕರ ಮಾಡ್ತಾ ಇದ್ದಾರೆ. ಅದರಲ್ಲಿ ಸತ್ಯ ಏನಿಲ್ಲ. ಅಸತ್ಯ ಅಷ್ಟೆ ಇರೋದು ಎಂದಿದ್ದಾರೆ.
ಇದೆ ವೇಳೆ ಸೌಜನ್ಯ ಕೇಸ್ ಮತ್ತೆ ಓಪನ್ ಆಗುತ್ತಾ ಎಂಬ ಪ್ರಶ್ನೆಗೆ, ಸಿಬಿಐ ಯಾರ ಅಧೀನದಲ್ಲಿ ಇರೋದು. ಸೆಂಟ್ರಲ್, ಅವರು ತನಿಖೆ ಮಾಡಿ ವರದಿ ಕೊಟ್ಟಿದ್ದಾರೆ. ಈಗ ಸುಪ್ರೀಂ ಕೋರ್ಟ್ ಗೆ ಹೋಗಿ ಅಂತ ಯಾರು ಹೇಳ್ತಾ ಇರೋದು. ಇವರೇ. ಆದ್ದರಿಂದ ಏನಂತ ಹೇಳೋದು. ಸೌಜನ್ಯ ಕೇಸ್ ಯಾರ ಮೇಲೆ ಆರೋಪ ಮಾಡ್ತಾ ಇರೋದು..? ಇವರು ಯಾರ ಪರ..? ಒಂದು ಕಡೆ ಸೌಜನ್ಯ ಪರ ಅಂತ ಹೇಳ್ತಾರೆ, ಇನ್ನೊಂದು ಕಡೆ ವೀರೇಂದ್ರ ಹೆಗ್ಡೆ ಅವರ ಪರ ಅಂತ ಹೇಳ್ತಾರೆ. ಯಾರ ಪರ ಇವರು ಎಂದು ಪ್ರಶ್ನೆ ಮಾಡಿದ್ದಾರೆ.
ಚಿನ್ನಯ್ಯನ ಕರೆದುಕೊಂಡು ಬಂದಿರುವುದೇ ಕಾಂಗ್ರೆಸ್ ಅಂತಿದ್ದಾರೆ ಬಿಜೆಪಿ ಅವರು ಎಂದಾಗ, ಇವರದ್ದೆಲ್ಲಾ ಕೇಳ್ತಿರಲ್ಲ. ವಿರೋಧ ಪಕ್ಷದ ನಾಯಕನಾದ ಕೂಡಲೇ ಎಲ್ಲವನ್ನು ಕೇಳ್ಬೇಕಾ..? ಅಸೆಂಬ್ಲಿಯಲ್ಲಿ ಏನು ಹೇಳಿದ್ರು, ಅಶೋಕ್, ಸುನೀಲ್ ಚರ್ಚೆ ಮಾಡಿದ್ದಾರೆ. ದಿನಕ್ಕೊಂದು ಹೇಳುವುದಕ್ಕೆ ಹೋಗಬಾರದು. ಅಸತ್ಯದ ಮೇಲೆ ಚರ್ಚೆ ಮಾಡಿದ್ರೆ ಹೀಗೆ ಆಗೋದು ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















