Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮೂರು ನಮ್ಮ ಹೆಮ್ಮೆ : ಚಿತ್ರದುರ್ಗ : ಕರೆಕಲ್ಲು ಶ್ರೀರಂಗನಾಥ

---Advertisement---

ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936

 

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ತಾಳ್ಯ ಹೋಬಳಿಯ ಹೊರಕೆರೆದೇವರಪುರದ ಪಕ್ಕದ ಹನ್ನೊಂದನೇ ಹೊಸೂರು ಗ್ರಾಮದ ಪಶ್ಚಿಮಕ್ಕೆ ಇರುವ ಕರೆಕಲ್ಲು ಶ್ರೀರಂಗನಾಥ ಸ್ವಾಮಿ ದೇವಾಲಯವು ಪುರಾಣ ಪ್ರಸಿದ್ಧ ದೇವಾಲಯವಾಗಿದ್ದು ಪಾಳೇಗಾರರ ಶೈಲಿಯಲ್ಲಿ 17-18 ನೇ ಶತಮಾನದಲ್ಲಿ ಬೆಟ್ಟದ ಮೇಲೆ ನಿರ್ಮಾಣ ಮಾಡಲಾಗಿದೆ. ಬೆಟ್ಟಕ್ಕೆ ತಲುಪಲು ಸುಲಭವಾದ ಟಾರು ರಸ್ತೆ ಇದ್ದು ದೇವಾಲಯದ ಬಳಿಗೆ ವಾಹನಗಳ ಮೂಲಕ ಸಾಗಬಹುದು.

 

ಹೊರಕೆರೆದೇವರಪುರದಿಂದ 3 ಕಿ.ಮೀ ದೂರದಲ್ಲಿ ಇರುವ ಈ ದೇವಾಲಯಕ್ಕೆ ತಲುಪಲು ಸ್ವಂತ ವಾಹನದಿಂದ ಮಾತ್ರ ಸಾಧ್ಯ.
ಗರ್ಭಗೃಹ,ಸಭಾಮಂಟಪ ಹಾಗೂ ಐದು ಅಡಿ ಎತ್ತರದ ದೀಪ ಸ್ತಂಭಗಳಿರುವ ದೇವಾಲಯ ಇದಾಗಿದೆ. ದೇವಾಲಯದ ಅವರಣದಲ್ಲಿ ಆಂಜನೇಯ ಮತ್ತು ಪಾದ ದೇವರ ಗುಡಿಗಳನ್ನು ಕಾಣಬಹುದು. ಪಾದ ದೇವರ ಗುಡಿಯಲ್ಲಿರುವ ಪಾದಗಳು ಶ್ರೀ ವೆಂಕಟೇಶ್ವರ ಸ್ವಾಮಿಯದ್ದು ಎನ್ನುತ್ತಾರೆ.

 

ಗರ್ಭಗೃಹದಲ್ಲಿ ಕೀರ್ತಿ ಮುಖದ ಪ್ರಭಾವಳಿ ಇದ್ದು ಅದರ ಕೆಳಭಾಗದಲ್ಲಿ ಸರ್ಪದ ಕೆತ್ತನೆ ಇದೆ. ಮೂರು ಅಡಿ ಅಗಲ ಮೂರು ಅಡಿ ಎತ್ತರದ ಬಂಡೆ ಗಲ್ಲಿನಲ್ಲಿ ಲಕ್ಷ್ಮಿ ನರಸಿಂಹ ಶಿಲ್ಪವನ್ನು ಕಡೆಯಲಾಗಿದೆ. ಸ್ಥಳೀಯರು ಇದನ್ನು ತಿಮ್ಮಪ್ಪ ದೇವರು ಹಾಗೂ ಈ ಸ್ಥಳವನ್ನು ಕೃಷ್ಣಾಚಲ ಬೆಟ್ಟ ಎನ್ನುತ್ತಾರೆ . ಹೊರಕೆರೆದೇವರಪುರದ ದೇವಸ್ಥಾನವಾದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿಯ ಜಾತ್ರೆ ಪೂಜೆ,ಉತ್ಸವ,ಗುಂಡಿನ ಸೇವೆ. ಮುಂತಾದ ಎಲ್ಲಾ ಆಚರಣೆಗಳು ಇದೇ ಸ್ಥಳದಲ್ಲಿ ನಡೆಯುತ್ತವೆ. ಗರ್ಭಗೃಹದ ಮೇಲ್ಭಾಗದಲ್ಲಿ ದ್ರಾವಿಡ ಮಾದರಿಯ ದ್ವಿತಲ ಶಿಖರವಿದೆ.

 

ದೇವಾಲಯದ ಹಿಂಭಾಗದಲ್ಲಿ ವಿಶಾಲವಾಗಿ ಹರಡಿರುವ ಎರೇಗುಡ್ಡದ ಸಾಲು ಹಾಗೂ ಅದರ ಮೇಲ್ಭಾಗದಲ್ಲಿ ಅಳವಡಿಸಿರುವ ಗಾಳಿ ಯಂತ್ರಗಳು ನೈಸರ್ಗಿಕ ಸೌಂದರ್ಯ ಹಾಗೂ ಆಹ್ಲಾದಕರ ವಾತಾವರಣ ಸೃಷ್ಟಿಸಿದೆ. ದೇವಾಲಯದ ಮುಂಭಾಗದಿಂದ ಸುತ್ತಲ ಹತ್ತಾರು ಕಿಲೋಮೀಟರ್ ದೂರದ ಸ್ಥಳಗಳು ಅತ್ಯಂತ ಸುಂದರವಾಗಿ ಕಂಡುಬರುತ್ತವೆ. ಸುತ್ತಮುತ್ತಲ ಹತ್ತಾರು ಗ್ರಾಮಗಳ ಜನರು ಇಲ್ಲಿನ ದೇವರಿಗೆ ಮಾಂಸಹಾರ ನೈವೇದ್ಯ ಮಾಡಿ ಎಡೆ ತಯಾರಿಸಿ , ಅಡುಗೆ ಮಾಡಿಕೊಂಡು ಊಟ ಮಾಡುವ ಪದ್ಧತಿ ನಡೆದುಕೊಂಡು ಬಂದಿದೆ. ತಮ್ಮ ನೆಂಟರು ಬಂಧು ಬಳಗದವರೊಂದಿಗೆ ಇಲ್ಲಿ ಸಾಮೂಹಿಕ ಭೋಜನ ಮಾಡುವ ಪದ್ಧತಿ ಇದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...