ದಾವಣಗೆರೆ: ಎಲ್ಲಾ ಜಾತಿಗಳಲ್ಲೂ ಉಪಜಾತಿಗಳು ಅನ್ನೋದು ಹೆಚ್ಚಾಗಿನೆ ಇದಾವೆ. ಜಾತಿಗಣತಿ ಕೂಡ ಆರಂಭವಾಗಿದ್ದು, ಈ ವೇಳೆ ಉಪಜಾತಿ ಹೇಳುವುದಕ್ಕಿಂತ ಪ್ರಮುಖ ಜಾತಿಯನ್ನ ಹೇಳುವುದರಿಂದ ಜನಸಂಖ್ಯೆ ಹೆಚ್ಚಾಗಿ ತೋರಿಸಲಾಗುತ್ತದೆ. ವೀರಶೈವ ಲಿಂಗಾಯತರು ಕೂಡ ಈಗ ಅದೇ ತೀರ್ಮಾನವನ್ನು ಕೈಗೊಂಡಿದ್ದಾರೆ.
ದಾವಣಗೆರೆಯ ರೇಣುಕಾ ಮಂದಿರದಲ್ಲಿ ಮೂರು ದಿನಗಳ ಕಾಲ ವೀರಶೈವ ಲಿಂಅಗಯತ ಶಿವಾಚಾರ್ಯರ ಶೃಂಗಸಭೆ ನಡೆದಿದೆ. ಈ ಸಮಾರೋಪ ಸಮಾರಂಭದಲ್ಲಿ 12 ನಿರ್ಣಯಗಳನ್ನ ಅಂಗೀಕರಿಸಲಾಗಿದೆ. ಅದರಲ್ಲಿ ಜಾತಿಗಣತಿಗೆಂದು ಬಂದಾಗ ಉಪಜಾತಿ ಹೇಳದೆ ಕೇವಲ ವೀರಶೈವ ಎಂದು ಹೇಳಬೇಕು ಎಂಬುದು ಕೂಡ ಒಂದು.
ಇದೆ ವೇಳೆ ಸಮ್ಮೇಳನದಲ್ಲಿ ಮಾತನಾಡಿದ ರಂಭಾಪುರಿ ಶ್ರೀಗಳು, ಸಮಾಜಕ್ಕೆ ಒಳ್ಳೆಯದಾಗಲಿ ಎಂದು ವೀರಶೈವ ಧರ್ಮ ಸ್ಥಾಪನೆ ಆಗಿದೆ. ಆಧುನಿಮ ಕಾಲದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ರಾಜಕೀಯ ಪ್ರವೇಶವಾಗಿದೆ. ರಾಜಕೀಯ ಕ್ಷೇತ್ರ ಕಲುಷಿತವಾಗಿದೆ. ಧಾರ್ಮಿನ ಕ್ಷೇತ್ರ ಹೊರತಾಗಿಲ್ಲ. ಸಂಸ್ಕಾರ, ಸಂಸ್ಕೃತಿ ಕೊಟ್ಟಿದ್್ಉ ವೀರಶೈವ ಧರ್ಮ. ವೀರಶೈ ಸಮುದಾಯದಲ್ಲಿ ನೂರಾರು ಒಳಪಂಗಡಗಳಿವೆ. ಕೆಲ ಒಳಪಂಗಡಗಳಿಗೆ ಮಾತ್ರ ರಾಜಕೀಯದಲ್ಲಿ ಅವಕಾಶ ಸಿಕ್ಕಿವೆ. ಈಗ ಜಾತಿಗೊಂದು ಮಠಗಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಪಂಚಪೀಠಗಳು ದೃತಿಗೆಡಬೇಕಾಗಿಲ್ಲ. ಸಮುದಾಯದ ಬಲವರ್ಧನೆ ಪಂಚಪೀಠಗಳಿಂದ ಮಾತ್ರ ಸಾಧ್ಯ.
ವೀರಶೈವ ಲಿಂಗಾಯಾತ ಮಠಾಧೀಶರನ್ನು ಒಂದೇ ವೇದಿಕೆಗೆ ತರುವ ಸಂಕಲ್ಪ ಇದಾಗಿದೆ. ಎಲ್ಲಾ ಪೀಠಾಚಾರ್ಯ ಹಾಗೂ ಶಿವಾಚಾರ್ಯ ಒಂದಾದರೆ, ವೀರಶೈವ ಲಿಂಗಾಯತರನ್ನು ಒಂದು ಮಾಡುವುದು ಕಷ್ಟವಲ್ಲ. ವೀರಶೈವ ಬೇರೆ ಲಿಂಗಾಯತವೇ ಬೇರೆ ಎಂಬ ಸಂದೇಶ ಸಾರಿದರು. ವೀರಶೈವ, ಲಿಂಗಾಯತ ಬೇರೆ ಎಂದವರು ಚುನಾವಣೆಯಲ್ಲಿ ಸೋತರು. ಈಗ ಪಂಚಪೀಠಗಳು ಒಂದಾಗಿವೆ. ಇದು ಕ್ಷಣಿಕ ಖುಷಿ ಆಗಬಾರದು ಎಂದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.















