ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಮಂಡ್ಯ; ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿತ್ತು. ತನ್ನ ವೃದ್ಧ ತಾಯಿಯನ್ನ ನಡು ರಸ್ತೆಯಲ್ಲಿ ಬಿಟ್ಟು ಹೋಗಿದ್ದರು. ಅದು ಕಾಡು ಪ್ರದೇಶದ ರೀತಿ ಇತ್ತು. ಆ ತಾಯಿಗೆ ವಯಸ್ಸೇನು ಕಡಿಮೆ ಇಲ್ಲ. ಎದ್ದು ಓಡಾಡುವುದಕ್ಕೂ ಶಕ್ತಿ ಇಲ್ಲ. ಕೆಲಸ ಮಾಡುವ ವಯಸ್ಸು ಅಲ್ಲ. ಹೀಗಿರುವಾಗ ಆ ಜೀವ ಆಹಾರಕ್ಕೇನು ಮಾಡುತ್ತೆ, ಮಳೆ ಗಾಳಿ ಬಂದ್ರೆ ಹೇಗೆ ತಡೆದುಕೊಳ್ಳುತ್ತೆ ಎಂಬ ಸಣ್ಣ ಯೋಚನೆಯೂ ಇಲ್ಲದ ಕ್ರೂರ ಮಗ ರಸ್ತೆಯಲ್ಲಿ ಬಿಟ್ಟು ಹೋಗಿದ್ದ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಸದ್ಯ ಅಜ್ಜಿಯ ರಕ್ಷಣೆಯನ್ನು ಮಾಡಲಾಗಿದೆ.
ಅಜ್ಜಿಯನ್ನು ಕಂಡ ಸ್ಥಳೀಯರು ಆಹಾರ ನೀಡಿದ್ದಾರೆ. ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಲಾಗಿದ್ದು, ಅವರು ವೃದ್ಧೆಯನ್ನು ರಕ್ಷಣೆ ಮಾಡಿದ್ದಾರೆ. ಮಂಡ್ಯದ ಮೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪಾಪ ಆತಂಕಗೊಂಡಿದ್ದ ಆ ವೃದ್ದೆ ಸದ್ಯಕ್ಕೆ ನಿರಾಳರಾಗಿದ್ದಾರೆ.
ಆ ವೃದ್ದೆಗೆ ಏನಿಲ್ಲ ಅಂದ್ರು 70-80 ವರ್ಷ ವಯಸ್ಸಾಗಿದೆ. ತನಗೇನೆ ಕಷ್ಟವಾದರೂ ಹೆತ್ತ ಮಕ್ಕಳಿಗೆ ಕಷ್ಟವಾಗಬಾರದು ಅಂತ ಸಾಕಿ ಸಲಹಿರುತ್ತಾರೆ. ಆದರೆ ವಯಸ್ಸಾದ ಮೇಲೆ, ತಾಯಿ ಭಾರವಾಗಿ ಬಿಡುತ್ತಾಳಾ..? ಅದರಲ್ಲೂ ಅಷ್ಟು ವಯಸ್ಸಾದ ಮೇಲೆ ಹೀಗೆ ಹೊರ ಹಾಕಿದರೆ ಅಂಥ ಮಕ್ಕಳನ್ನು ಹೆರುವಿದಾದರೂ ಯಾಕೆ ಎಂಬ ಪ್ರಶ್ನೆ ಸಾರ್ವಜನಿಕರನ್ನ ಕಾಡಿದೆ. ಆತನಿಗೂ ವಯಸ್ಸಾಗುತ್ತೆ, ಇದಕ್ಕಿಂತ ಕೆಟ್ಟ ಸ್ಥಿತಿ ಬರಬಹುದು ಎಂದು ಹಿಡಿ ಶಾಪ ಹಾಕಿದ್ದಾರೆ. ಆದರೂ ಆ ಮಗನಿಗೆ ಕೊಂಚವಾದರೂ ಮನುಷ್ಯತ್ವ ಇರಬೇಕಿತ್ತು.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್