ಬಾಗಲಕೋಟೆ; ಕೋಡಿಮಠದ ಶ್ರೀಗಳ ಭವಿಷ್ಯ ಸಾಕಷ್ಟು ಸಲ ಸತ್ಯವಾಗಿದೆ. ಇದೀಗ ರಾಜ್ಯದ, ರೋಗದ, ರಾಜಕೀಯದ ಭವಿಷ್ಯವನ್ನ ನುಡಿದಿದ್ದಾರೆ.
ಸಂಕ್ರಾಂತಿವರೆಗೂ ಯಾವ ಬದಲಾವಣೆ ದೋಷ ಕಾಣಿಸ್ತಾ ಇಲ್ಲ. ಭವಿಷ್ಯದಲ್ಲಿ ಎರಡು ಒಂದು ಯುಗಾದಿ ಭವಿಷ್ಯ ಮತ್ತೊಂದು ಸಂಕ್ರಾಂತಿ ಭವಿಷ್ಯ. ಯುಗಾದಿಯಲ್ಲಿ ಬರುವಂತ ಭವಿಷ್ಯ ಅಂದ್ರೆ ಮಳೆ, ಬೆಳೆ, ಪ್ರಾಕೃತಿಕ ದೋಷಗಳು, ಭೂಮಿ ವಿಚಾರದಲ್ಲಿ ಹೇಳಬಹುದು. ಸಂಕ್ರಾಂತಿಯಲ್ಲಿ ಹೇಳಬಹುದಾದ ಭವಿಷ್ಯ ಬಂದು ರಾಜರಿಗೆ, ದೊಡ್ಡ ದೊಡ್ಡ ವ್ಯಾಪಾರಸ್ಥರಿಗೆ, ಹಡಗುಗಳಲ್ಲಿ ಬರುವವರಿಗೆ ಬರುತ್ತದೆ. ಸಂಕ್ರಾಂತಿ ಭವಿಷ್ಯದಲ್ಲಿ ರಾಜರ ಭವಿಷ್ಯ ಹೇಳಬಹುದು. ಇಲ್ಲಿಯವರೆಗೂ ರಾಜರಿಗೆ ಯಾವುದೇ ಬದಲಾವಣೆ ಇಲ್ಲ. ನಿಖರವಾಗಿ ಹೇಳಬೇಕು ಅಂದ್ರೆ ಅಂದು ನೋಡಿ ಹೇಳಬೇಕು. ಹಾಲುಮತದವರಿಗೆ ಅಧಿಕಾರ ಸಿಕ್ಕಿದೆ, ಬಿಡಿಸಿಕೊಳ್ಳುವುದು ಕಷ್ಟ. ಅವರಾಗಿಯೇ ಬಿಡುವವರೆಗೂ ಕಾಯಬೇಕು. ಹಿಂದೆಲ್ಲ ವಿಜಯನಗರ ಸಾಮ್ರಾಜ್ಯ ಕಟ್ಟಿದವರು. ಹಾಲು ಕೆಟ್ಟರು ಹಾಲುಮತ ಕೆಡಲ್ಲ ಅನ್ನೋದಿದೆ. ಅವರಿಗೆ ಅಧಿಕಾರ ಸಿಕ್ಕಿದೆ. ಈಗ ಅವರು ಬಿಡೋದು ಕಷ್ಟ.
ಇದೇ ವೇಳೆ ಮಾರಾಣಾಂತಿಕ ಕಾಯಿಲೆಗಳೇನಾದರೂ ಕಾಡುತ್ತವೆಯಾ ಎಂಬುದಕ್ಕೆ ಉತ್ತರಿಸಿ, ಅಪಾಯವಿದೆ. ಪ್ರಾಕೃತಿಕವಾಗಿ ಜಗತ್ತಿನಾದ್ಯಂತ ಅಪಾಯವಿದೆ. ಸೂಳಯ ಮಗನುಟ್ಟಿ ಆಳುವನು ಮುನಿಪುರವಾ. ಯುದ್ಧವಿಲ್ಲದ ಮಡಿಯೇ ಪುರವೆಲ್ಲಾ ಕೂಳಾದಿತು. ಇದರ ಅರ್ಥವನ್ನ ಕಾಲ ಬಂದಾಗ ಹೇಳುತ್ತೇನೆ. ಯುದ್ಧಭೀತಿ, ಅದರಿಂದ ಬರುವ ನೋವುಗಳು. ಒಂದು ರೋಗ ಬರುತ್ತೆ, ಐದು ವರ್ಷ ಇರುತ್ತೆ ಅಂತ ಹೇಳಿದ್ದೆ. ಮತ್ತೊಂದು ಮಾರಾಣಾಂತಿಕ ರೋಗ ಬರುತ್ತೆ. ನಾನು ಭವಿಷ್ಯವನ್ನ ಹೇಳಲ್ಲ, ರೂಪಿಸುತ್ತೇನೆ. ಕೊರೊನಾ ಮೊದಲೇ ಹೇಳಿದೆ ನಾನು. ಮದ್ದಿಲ್ಲದ ವ್ಯಾದಿ ಬರುತ್ತೆ, ಜನ ಸಾಯ್ತಾರೆ ಅಂತ. ಆಳುವವರು ಎಚ್ಚೆತ್ತುಕೊಳ್ಳಬೇಕು. ಈಗಲೂ ಅಂಥದ್ದೊಂದು ರೋಗ ಬರುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.






