Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಳೆ ನಿಯಮ ಮುರಿಯುತ್ತಿರುವುದನ್ನು ನೋಡಲು ಖುಷಿಯಾಗುತ್ತಿದೆ : ಕಂಗನಾ ಮೆಸೇಜ್ ನ ಅರ್ಥವೇನು ಗೊತ್ತಾ..?

Facebook
Twitter
Telegram
WhatsApp

ಮುಂಬಯಿ : ಸದ್ಯ ಬಾಲಿವುಡ್ ನಲ್ಲಿ ಕತ್ರೀನಾ ಮತ್ತು ವಿಕ್ಕಿ ಕೌಶಲ್ ಮದುವೆಯದ್ದೇ ಸದ್ದು. ರಾಜಸ್ತಾನದ ಹೊಟೇಲ್ ಒಂದರಲ್ಲಿ ಈ ಜೋಡಿಯ ಮದುವೆ ಅದ್ದೂರಿಯಾಗಿ ನಡೀತಾ ಇದೆ. ಇವರಿಬ್ಬರ ಹೆಸರನ್ನು ಹೇಳದೆ ಕಂಗನಾ ಒಂದು ಸ್ಟೇಟ್ಮೆಂಟ್ ನೀಡಿದ್ದಾರೆ. ಶ್ರೀಮಂತ ಮಹಿಳೆಯರು ತನಗಿಂತ ವಯಸ್ಸಿನಲ್ಲಿ ಚಿಕ್ಕವರನ್ನು ಮದುವೆಯಾಗುವುದನ್ನು ನೋಡಿದ್ರೆ ಖುಷಿಯಾಗುತ್ತೆ ಎಂದಿದ್ದಾರೆ. ವಿಕ್ಕಿ ಹಾಗೂ ಕತ್ರೀನಾ ಹೆಸರು ಬಳಸದೆ ಈ ಬಗ್ಗೆ ಹೇಳಿದ್ರು ಅವರ ಅಭಿಮಾನಿಗಳು ಈ ಮಾತು ಅವರಿಗಾಗಿಯೇ ಎಂದು ಗೆಸ್ ಮಾಡಿದ್ದಾರೆ.

ಇನ್ನು ಕಂಗನಾ ಯಾವುದೇ ವಿಚಾರವಾಗಲಿ ಆ ಬಗ್ಗೆ ತನಗನ್ನಿಸಿದ್ದನ್ನು ಹೇಳುತ್ತಾನೆ ಬಂದಿದ್ದಾರೆ. ಇದೀಗ ಮದುವೆ ಬಗ್ಗೆಯೂ ಮಾತನಾಡಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಸ್ ನಲ್ಲಿ ಈ ಬಗ್ಗೆ ಬರೆದಿರುವ ಕಂಗನಾ, ಈ ಹಿಂದೆ ಯಶಸ್ವಿ ಪುರುಷನು ತನಗಿಂತ ಚಿಕ್ಕ ವಯಸ್ಸಿನ ಮಹಿಳೆಯನ್ನೇ ಮದುವೆಯಾಗುತ್ತಿದ್ದ. ಇದನ್ನೇ ಚಿಕ್ಕ ವಯಸ್ಸಿನಿಂದಲೂ ಕೇಳುತ್ತಾ ಬೆಳೆದಿದ್ದೇವೆ. ಇನ್ನು ಮಹಿಳೆಯರು ಚಿಕ್ಕ ವಯಸ್ಸಿನ ಹುಡುಗನಿರಲಿ ಸ್ವಲ್ಪ ವಯಸ್ಸು ದಾಟಿದ ಮೇಲೆ ಮದುವೆಯಾಗುವುದೇ ಅಸಾಧ್ಯವಾಗುತ್ತಾ ಇತ್ತು. ಆದ್ರೆ ಈಗ ಆ ಎಲ್ಲಾ ನಿಯಮಗಳು ಬದಲಾಗಿವೆ. ಯಶಸ್ವಿ ಮಹಿಳೆಯು ತನಗಿಂತ ಚಿಕ್ಕವಯಸ್ಸಿನ ಹುಡುಗನನ್ನ ಮದುವೆಯಾಗುವುದನ್ನು ನೋಡಿದ್ರೆ ತುಂಬಾನೆ ಖೂಷಿಯಾಗುತ್ತೆ ಎಂದಿದ್ದಾರೆ.

ವಿಕ್ಕಿ ಕೌಶಲ್ ವಯಸ್ಸಿನಲ್ಲಿ ಕತ್ರೀನಾ ಕೈಫ್ ಗಿಂತ 5 ವರ್ಷ ಚಿಕ್ಕವರು. ಅವರಿಬ್ಬರ ಮದುವೆ ಗ್ರ್ಯಾಂಡ್ ಆಗಿ ರಾಜಸ್ಥಾನದಲ್ಲಿ ನೆರವೇರುತ್ತಿದೆ. ಅಷ್ಟೇ ಅಲ್ಲ ಈ ಇಬ್ಬರ ಮದುವೆ ದೃಶ್ಯಕ್ಕಾಗಿ ಅಮೇಜಾನ್ ಪ್ರೈಮ್ ಬರೋಬ್ಬರಿ 80 ಕೋಟಿ ಕೊಟ್ಟು ಅನುಮತಿ ಪಡೆದಿದೆ. ಓಟಿಟಿಯಲ್ಲಿ ಅವರಿಬ್ಬರ ಮದುವೆ ಸಮಾರಂಭ ನೋಡೋಕೆ ಅಭಿಮಾನಿಗಳಿಗೆ ಅವಕಾಶವಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅವಕಾಶ ಸಿಗದೆ ಅಲ್ಲು ಅರ್ಜುನ್ ಕೂಡ ನೊಂದಿದ್ದರು.. ಇಂದು ಪ್ಯಾನ್ ಇಂಡಿಯಾ ನಟ..!

ಇಂದು ಸ್ಟಾರ್ ನಟರಾಗಿರುವ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಳ್ಳುವ ನಟ-ನಟಿಯರ ಹಿಂದೆಯೂ ಸಾಕಷ್ಟು ಪರಿಶ್ರಮ ಅಡಗಿದೆ. ಆರಂಭದಲ್ಲಿ ಅವಕಾಶಕ್ಕಾಗಿ ಪರಿತಪಿಸಿದ್ದಾರೆ. ಅವಕಾಶ ಸಿಗದೆ ಅವಮಾನ ಎದುರಿಸಿದ್ದಾರೆ. ಅದರಲ್ಲಿ ಇಂದು ತೆಲುಗು ಇಂಡಸ್ಟ್ರಿಯ ಟಾಪ್ ಒನ್

ರಾಜ್ಯದ ಗಮನ ಸೆಳೆಯಲು ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾರೆ : ಕುಮಾರಸ್ವಾಮಿಗೆ ಡಿಕೆಶಿ ಟಾಂಗ್

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ನಿನ್ನೆಯಿಂದ ಡಿಸಿಎಂ ಡಿಕೆ ಶಿವಕುಮಾರ್ ಅವರ ಹೆಸರು ಓಡಾಡುತ್ತಿದೆ. ಅವರೇ ಪೆನ್ ಡ್ರೈವ್ ಹಂಚಿರುವುದು ಅಂತ ಜೆಡಿಎಸ್ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ. ಕುಮಾರಸ್ವಾಮಿ ಅವರಿಗೆ

ವಿಶ್ವ ರೆಡ್‍ಕ್ರಾಸ್ ದಿನಾಚರಣೆ | ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಚಿತ್ರದುರ್ಗ ಮೇ. 08 :  ವಿಶ್ವ ರೆಡ್‍ಕ್ರಾಸ್ ದಿನಾಚರಣೆಯ ಅಂಗವಾಗಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಚಿತ್ರದುರ್ಗ ಶಾಖೆ ಹಾಗೂ ಎಸ್.ಜಿ.ಸುರಕ್ಷಾ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜು ಸಂಯುಕ್ತಾಶ್ರಯದಲ್ಲಿ ಮೇ. 8 ರ ಇಂದು ಕಾಲೇಜಿನಲ್ಲಿ

error: Content is protected !!