Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಲವು ನಟಿಯರ ವಿರುದ್ಧ ರೇಣುಕಾಸ್ವಾಮಿ ತಂದೆ ಆಕ್ರೋಶ : ಯಾಕೆ ಗೊತ್ತಾ..?

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, ಜುಲೈ. 03 : ಪವಿತ್ರಾಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಗಳನ್ನು ಕಳುಹಿಸುತ್ತಿದ್ದ ಎಂದು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ಎಚ್ಚರಿಕೆ ಕೊಡಲು ಹೋಗಿ ಆ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ಕೊಲೆ ಆರೋಪದಲ್ಲಿ ದರ್ಶನ್ ಅಂಡ್ ಗ್ಯಾಂಗ್ ಜೈಲಿನಲ್ಲಿದ್ದಾರೆ. ದರ್ಶನ್ ಜೈಲಿಗೆ ಹೋದ ಮೇಲೆ ಅವರೇ ಮೇಲೆ ಹೆಚ್ಚು ಫೋಕಸ್ ಆಗಿದ್ದು. ರೇಣುಕಾಸ್ವಾಮಿ ಮಾಡಿದ ಮೆಸೇಜ್ ಮರೆತು ಹೋಗಿತ್ತು. ಬಳಿಕ ಒಬ್ಬೊಬ್ಬರಾಗಿಯೇ ನಟಿಯರು ಈ ವಿಚಾರದ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ನಮಗೂ ಅದೇ ಅಕೌಂಟ್ ನಿಂದ ಮೆಸೇಜ್ ಬಂದಿತ್ತು ಎನ್ನುತ್ತಿದ್ದಾರೆ. ಇದರ ಬಗ್ಗೆ ರೇಣುಕಾಸ್ವಾಮಿ ತಂದೆ ಆಕ್ರೋಶ ಹೊರ ಹಾಕಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡುತ್ತಾ’ ಮೆಸೇಜ್ ಹಾಕಿದ್ದಾರೆ ಹಾಕಿದ್ದಾರೆ ಅಂತ ಹೇಳುವವರು ಈ ಮೊದಲೇ ಯಾಕೆ ಪೊಲೀಸರಿಗೆ ದೂರು ನೀಡಲಿಲ್ಲ. ಆಯ್ತು ಹಾಕಿದ್ದಾರೆ ಎಂದರು ಕೂಡ ಈ ರೀತಿ ಚಿತ್ರ ಹಿಂಸೆ ಕೊಡುವುದು ಸರಿಯೇ. ಅದಕ್ಕೆ ಉತ್ತರ ಕೊಡುವುದಕ್ಕೆ ಬೇರೆ ರೀತಿ ಕಾನೂನುಗಳು ಇತ್ತು ಅಲ್ವಾ. ಪೊಲೀಸ್ ದೂರು ಕೊಟ್ಟಿದ್ದರೆ ಅವರೇ ನೋಡಿಕೊಳ್ಳುತ್ತಿದ್ದರು. ಆದರೆ ನೀವೇ ಕಾನೂನನ್ನು ಕೈಗೆ ತೆಗೆದುಕೊಂಡು, ಈ ರೀತಿ ಚಿತ್ರ ಹಿಂಸೆ ಕೊಟ್ಟು ಸಾಯಿಸಿ, ಒಂದು ಹೆಣ್ಣಿನ ಜೀವನ ಹಾಳು ಮಾಡುವಂತದ್ದು ಏನಿತ್ತು.

ಆ ರೀತಿ ಮೆಸೇಜ್ ಹಾಕಿದ್ದಾನೆ ಈ ರೀತಿ ಮೆಸೇಜ್ ಹಾಕಿದ್ದಾನೆ ಅಂತ ಈಗ ಎಲ್ಲಾ ಹೇಳ್ತಾ ಇದಾರೆ ಇದರ ಬಗ್ಗೆ ನಮಗೇನು ಗೊತ್ತಿಲ್ಲ. ಈಗ ನಮ್ಮ ಮನೆ, ಮನೆತನ ಪೂರ್ತಿ ಹಾಳಾಗಿ ಹೋಗಿದೆ. ಇದ್ದ ಮಗ ಇನ್ನಿಲ್ಲ. ಆಸರೆ ಯಾರು ಇಲ್ಲ. ವಯಸ್ಸಾದ ತಂದೆ ತಾಯಿ ಇದ್ದೀವಿ. ಅಜ್ಜಿ ಇದ್ದಾರೆ. ನೋಡಿಕೊಳ್ಳುವವರು ಯಾರು ? ಈಗ ನಿಮ್ಮ ವಯಸ್ಸಿನ ಮಗಳೇ ನಮ್ಮ‌ಮನೆಯಲ್ಲಿದ್ದಾಳೆ. ಈಗ ಗರ್ಭಿಣಿ ಬೇರೆ. ಆಕೆಯನ್ನು ನೋಡಿಕೊಳ್ಳುವುದು ಯಾರು. ಚಿತ್ರನಟಿಯರು ಈ ಕಡೆ ಇದ್ದು ಸ್ವಲ್ಪ ಯೋಚನೆ ಮಾಡಿ ಹೇಳಿ’ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಸರ್ಕಾರಿ ನೌಕರರ ಸಂಘದ ಮತದಾರರ ಪಟ್ಟಿ ಆಕ್ಷೇಪಣೆ ಸಲ್ಲಿಕೆಗೆ ಜು.10 ಕೊನೆಯ ದಿನ..!

  ಸುದ್ದಿಒನ್, ಚಿತ್ರದುರ್ಗ, ಜುಲೈ. 08 : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೈಗೊಂಡ ಸರ್ವಾನುಮತದ ನಿರ್ಣಯದಂತೆ ಚಿತ್ರದುರ್ಗ ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ ಸಂಘದ 2024ರಿಂದ

ಮನೆಗೆ ಮಗನಂತಿದ್ದ.. ಮಕ್ಕಳಿಲ್ಲದ ಕೊರಗು ಅವನಿಗೆ ಕಾಡುತ್ತಿತ್ತು : ಮೃತ ಅಳಿಯನ ಬಗ್ಗೆ ಬಿಸಿ ಪಾಟೀಲ್ ಹೇಳಿದ್ದೇನು..?

ದಾವಣಗೆರೆ: ಇಂದು ಮಾಜಿ ಸಚಿವ ಬಿ.ಸಿ.ಪಾಟೀಲ್ 40 ವರ್ಷದ ಅಳಿಯ ಪ್ರತಾಪ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಮೃತ ಅಳಿಯನ ಬಗ್ಗೆ ಮಾತನಾಡಿರುವ ಬಿ.ಸಿ.ಪಾಟೀಲ್, ಮನೆಗೆ ಮಗನಂತಿದ್ದ. ಮನೆಯ ಎಲ್ಲಾ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದ ಎಂದಿದ್ದಾರೆ.

ಚಿತ್ರದುರ್ಗ | 8 ಲಕ್ಷ ಮೌಲ್ಯದ 80 ಮೊಬೈಲ್ ಫೋನ್ ಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಪೊಲೀಸರು…!

ಸುದ್ದಿಒನ್, ಚಿತ್ರದುರ್ಗ, ಜುಲೈ.08 : ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಕಳುವಾಗಿದ್ದ 8 ಲಕ್ಷ ರೂಪಾಯಿ ಮೌಲ್ಯದ 80 ಮೊಬೈಲ್ ಫೋನ್​ಗಳನ್ನು ಇಂದು (ಜುಲೈ. 08) ಪ್ರಾಪರ್ಟಿ ರಿಟರ್ನ್‌ ಪರೇಡ್​ನಲ್ಲಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ನಗರದ ಜಿಲ್ಲಾ

error: Content is protected !!