Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಿಗ್ ಬಾಸ್ ಫಿನಾಲೆ ಟಿಕೆಟ್ ಪಡೆದೇ ಬಿಟ್ಟರು ನಮ್ರತಾ..!

Facebook
Twitter
Telegram
WhatsApp

ಇವತ್ತು ಟಿಕೆಟ್ ಟು ಫಿನಾಲೆ ಟಾಸ್ಕ್ ಕಡೆಯ ದಿನವಾಗಿದೆ. ಕಡೆಯ ಟಾಸ್ಕ್ ನಲ್ಲಿ ತುಕಾಲಿಗೆ ಅವಕಾಶ ನೀಡಲಾಗಿತ್ತು. ಬಾಕ್ಸ್ ಗಳನ್ನು ಕಡ್ಡಿಯಲ್ಲಿ ಬ್ಯಾಲೆನ್ಸ್ ಮಾಡಿ, ಬಾಕ್ಸ್ ಒಳಗಿಂದ ತಂದು ಮೇಲೆ ನೇತಾಕಬೇಕಿತ್ತು. ಇದರಲ್ಲಿ ವಿನಯ್, ವರ್ತೂರು, ಸಂಗೀತಾ ಅವರನ್ನು ಆಯ್ಕೆ ಮಾಡಿಕೊಂಡಿದ್ದರು ತುಕಾಲಿ. ಆದರೆ ಪ್ರತಾಪ್ ಗೆ ವಿಶೇಷ ಅಧಿಕಾರ ಸಿಕ್ಕಾಗ ಸಂಗೀತಾ ಅವರನ್ನು ತೆಗೆದಿದ್ದರು. ಯಾಕಂದ್ರೆ ಅಂಕ ಹತ್ತಿರವಿದೆ. ಈ ಆಟದಲ್ಲಿ ಗೆದ್ದರೆ ಸಂಗೀತಾ ಮುಂದೆ ಬಿಡುತ್ತಾರೆ ಅಂತ.

 

ಟಾಸ್ಕ್ ಶುರು ಮಾಡುವುದಕ್ಕೂ ಮುನ್ನ ಬಿಗ್ ಬಾಸ್ ಉಳಿದ ಸದಸ್ಯರಿಗೆ ಒಂದು ಅವಕಾಶ ನೀಡಿತ್ತು. ಗೆಲ್ಲುವ ಸದಸ್ಯನನ್ನು ಗುರುತಿಸಿದರೆ ಅವರಿಗೆ 40 ಮಾರ್ಕ್ಸ್ ಸಿಗುತ್ತದೆ ಎಂದು ಘೋಷಣೆ ಮಾಡಿತ್ತು. ಅದರಂತೆ ತನಿಷಾ, ಕಾರ್ತಿಕ್, ನಮ್ರತಾ ವಿನಯ್, ಸಂಗೀತಾ ಹೆಸರನ್ನು ಗುರುತಿಸಿದ್ದರು. ಆದರೆ ಸಂಗೀತಾ ಅವರು ಪ್ರತಾಪ್ ಹೆಸರನ್ನೇ ಬರೆದಿದ್ದರು. ಹೀಗಾಗಿ 40 ಅಂಕಗಳು ಸಿಕ್ಕಿದೆ.

 

ಫಿನಾಲೆ ಟು ಟಾಸ್ಕ್ ನಲ್ಲಿ ತುಕಾಲಿ 140, ತನಿಷಾ- 140, ಕಾರ್ತಿಕ್ – 170, ವಿನಯ್ – 180, ಸಂತೋಷ್ – 200, ನಮ್ರತಾ – 210, ಸಂಗೀತಾ – 300, ಪ್ರತಾಪ್ – 420 ಅಂಕಗಳು ಬಂದಿದೆ. ಈ ಅಂಕಗಳ ಆಧಾರದ ಮೇಲೆ ಮೂರು ಜನರನ್ನು ಬಿಗ್ ಬಾಸ್ ಆಯ್ಕೆ ಮಾಡಿದೆ. ಹೆಚ್ಚು ಅಂಕ ಪಡೆದವರು ನೇರವಾಗಿ ಫಿನಾಲೆ ಕಡೆಗೆ ಹೆಜ್ಜೆ ಹಾಕಲಿದ್ದಾರೆ. ಮುಂದಿನ ವಾರದ ಎಲಿಮಿನೇಷನ್ ನಿಂದ ಕೂಡ ಪಾರಾಗುತ್ತಾರೆ. ಇನ್ನೊಂದು ವಾರ ಕಳೆದರೆ ಫಿನಾಲೆಗೆ ಕಾಲಿಡಲಿದ್ದಾರೆ. ಟಿಕೆಟ್ ಟು ಫಿನಾಲೆಯಲ್ಲಿ ಸಂಗೀತಾ, ಪ್ರತಾಪ್ ಜೊತೆಗೆ ನಮ್ರತಾ ಕೂಡ ಟಿಕೆಟ್ ಪಡೆದಿದ್ದಾರೆ. ಇದು ನಮ್ರತಾಗೆನೇ ನಂಬುವುದಕ್ಕೆ ಆಗಲಿಲ್ಲ. ಮನೆಯಲ್ಲಿ ಉಳಿದವರೆಲ್ಲಾ ಶುಭ ಕೋರಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ವಿಡಿಯೋ ಕೇಸ್ : ದೇಹದ ಆರೋಗ್ಯ ಮಾತ್ರವಲ್ಲ ಸಮಾಜದ ಆರೋಗ್ಯವನ್ನು ಸುಧಾರಿಸಬೇಕು ಡಾ. ಮಂಜುನಾಥ್

ರಾಮನಗರ: ರಾಜ್ಯದಲ್ಲಷ್ಟೇ ಅಲ್ಲ ದೇಶದಲ್ಲೂ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದೆ. ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ತನಿಖೆಗೆ ಕಾಯುತ್ತಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರುವ ಸಾಹಸ ಮಾಡುತ್ತಿಲ್ಲ.

ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಡಿ.ಟಿ. ಶ್ರೀನಿವಾಸ್ ಅವರನ್ನು ಬೆಂಬಲಿಸಿ : ಶಾಸಕ ಟಿ. ರಘುಮೂರ್ತಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮೇ. 18 : ಜನಪರ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಸರ್ವರಿಗೂ ಅನುಕೂಲವಾಗುವಂತೆ ರೂಪಿಸುವ ಯೋಜನೆಗಳು

ಬೆಂಗಳೂರು ಸೇರಿದಂತೆ ಹಲವೆಡೆ ಜೋರು ಮಳೆ : ಆರ್ಸಿಬಿ ಮ್ಯಾಚ್ ನೋಡುವ ಆಸೆ ಕಿತ್ತುಕೊಂಡನಾ ವರುಣರಾಯ..!

ಇಂದು ಬೆಳಗ್ಗೆಯಿಂದಾನೇ ಮೋಡಕವಿದ ವಾತಾವರಣ ಮನೆ ಮಾಡಿತ್ತು. ಮಧ್ಯಾಹ್ನದ ವೇಳೆಗೆ ಬೆಂಗಳೂರು ನಗರದಾದ್ಯಂತ ಜೋರು ಮಳೆಯಾಗಿದೆ. ವಿಜಯನಗರ, ರಾಜಾಜಿನಗರ, ಕಾರ್ಪೋರೇಷನ್ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಆದರೆ ಈ ಮಳೆಯಿಂದ ಇಂದು ಆರ್ಸಿಬಿ ಮ್ಯಾಚ್

error: Content is protected !!