Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಿಗ್ ಬಾಸ್ ಫಿನಾಲೆ ಟಿಕೆಟ್ ಪಡೆದೇ ಬಿಟ್ಟರು ನಮ್ರತಾ..!

Facebook
Twitter
Telegram
WhatsApp

ಇವತ್ತು ಟಿಕೆಟ್ ಟು ಫಿನಾಲೆ ಟಾಸ್ಕ್ ಕಡೆಯ ದಿನವಾಗಿದೆ. ಕಡೆಯ ಟಾಸ್ಕ್ ನಲ್ಲಿ ತುಕಾಲಿಗೆ ಅವಕಾಶ ನೀಡಲಾಗಿತ್ತು. ಬಾಕ್ಸ್ ಗಳನ್ನು ಕಡ್ಡಿಯಲ್ಲಿ ಬ್ಯಾಲೆನ್ಸ್ ಮಾಡಿ, ಬಾಕ್ಸ್ ಒಳಗಿಂದ ತಂದು ಮೇಲೆ ನೇತಾಕಬೇಕಿತ್ತು. ಇದರಲ್ಲಿ ವಿನಯ್, ವರ್ತೂರು, ಸಂಗೀತಾ ಅವರನ್ನು ಆಯ್ಕೆ ಮಾಡಿಕೊಂಡಿದ್ದರು ತುಕಾಲಿ. ಆದರೆ ಪ್ರತಾಪ್ ಗೆ ವಿಶೇಷ ಅಧಿಕಾರ ಸಿಕ್ಕಾಗ ಸಂಗೀತಾ ಅವರನ್ನು ತೆಗೆದಿದ್ದರು. ಯಾಕಂದ್ರೆ ಅಂಕ ಹತ್ತಿರವಿದೆ. ಈ ಆಟದಲ್ಲಿ ಗೆದ್ದರೆ ಸಂಗೀತಾ ಮುಂದೆ ಬಿಡುತ್ತಾರೆ ಅಂತ.

 

ಟಾಸ್ಕ್ ಶುರು ಮಾಡುವುದಕ್ಕೂ ಮುನ್ನ ಬಿಗ್ ಬಾಸ್ ಉಳಿದ ಸದಸ್ಯರಿಗೆ ಒಂದು ಅವಕಾಶ ನೀಡಿತ್ತು. ಗೆಲ್ಲುವ ಸದಸ್ಯನನ್ನು ಗುರುತಿಸಿದರೆ ಅವರಿಗೆ 40 ಮಾರ್ಕ್ಸ್ ಸಿಗುತ್ತದೆ ಎಂದು ಘೋಷಣೆ ಮಾಡಿತ್ತು. ಅದರಂತೆ ತನಿಷಾ, ಕಾರ್ತಿಕ್, ನಮ್ರತಾ ವಿನಯ್, ಸಂಗೀತಾ ಹೆಸರನ್ನು ಗುರುತಿಸಿದ್ದರು. ಆದರೆ ಸಂಗೀತಾ ಅವರು ಪ್ರತಾಪ್ ಹೆಸರನ್ನೇ ಬರೆದಿದ್ದರು. ಹೀಗಾಗಿ 40 ಅಂಕಗಳು ಸಿಕ್ಕಿದೆ.

 

ಫಿನಾಲೆ ಟು ಟಾಸ್ಕ್ ನಲ್ಲಿ ತುಕಾಲಿ 140, ತನಿಷಾ- 140, ಕಾರ್ತಿಕ್ – 170, ವಿನಯ್ – 180, ಸಂತೋಷ್ – 200, ನಮ್ರತಾ – 210, ಸಂಗೀತಾ – 300, ಪ್ರತಾಪ್ – 420 ಅಂಕಗಳು ಬಂದಿದೆ. ಈ ಅಂಕಗಳ ಆಧಾರದ ಮೇಲೆ ಮೂರು ಜನರನ್ನು ಬಿಗ್ ಬಾಸ್ ಆಯ್ಕೆ ಮಾಡಿದೆ. ಹೆಚ್ಚು ಅಂಕ ಪಡೆದವರು ನೇರವಾಗಿ ಫಿನಾಲೆ ಕಡೆಗೆ ಹೆಜ್ಜೆ ಹಾಕಲಿದ್ದಾರೆ. ಮುಂದಿನ ವಾರದ ಎಲಿಮಿನೇಷನ್ ನಿಂದ ಕೂಡ ಪಾರಾಗುತ್ತಾರೆ. ಇನ್ನೊಂದು ವಾರ ಕಳೆದರೆ ಫಿನಾಲೆಗೆ ಕಾಲಿಡಲಿದ್ದಾರೆ. ಟಿಕೆಟ್ ಟು ಫಿನಾಲೆಯಲ್ಲಿ ಸಂಗೀತಾ, ಪ್ರತಾಪ್ ಜೊತೆಗೆ ನಮ್ರತಾ ಕೂಡ ಟಿಕೆಟ್ ಪಡೆದಿದ್ದಾರೆ. ಇದು ನಮ್ರತಾಗೆನೇ ನಂಬುವುದಕ್ಕೆ ಆಗಲಿಲ್ಲ. ಮನೆಯಲ್ಲಿ ಉಳಿದವರೆಲ್ಲಾ ಶುಭ ಕೋರಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟ : ಮುಖ್ಯಮಂತ್ರಿ ಸಿದ್ದರಾಮಯ್ಯ

  ಬೆಳಗಾವಿ , ಮೇ 05 : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ನೀಡಿದರೆ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಹೇಳುತ್ತಿದ್ದು, ಈ ಚುನಾವಣೆ ಎರಡನೇ ಸ್ವಾತಂತ್ರ್ಯ

ರೇವಣ್ಣ ಬಂಧನದ ಬೆನ್ನಲ್ಲೇ ದೂರು ನೀಡಲು ಬಂದ ಮೂವರು ಸಂತ್ರಸ್ತೆಯರು : ಮತ್ತಷ್ಟು ಸಂಕಷ್ಟ..!

ಬೆಂಗಳೂರು: ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ ಆರೋಪದ ಹಿನ್ನೆಲೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯೊಬ್ಬರು ದೂರು ನೀಡಿರುವುದು ಹಾಗೂ ಇನ್ನೊಬ್ಬ ಸಂತ್ರಸ್ತೆಯ ಮಗ ಕಿಡ್ನ್ಯಾಪ್ ಪ್ರಕರಣದಲ್ಲಿ ದೂರು

ಭಾಷಣದಲ್ಲಿ ಯಡವಟ್ಟು : ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಕುಮಾರಸ್ವಾಮಿ ದೂರು.. ಎಫ್ಐಆರ್ ದಾಖಲು..!

ಹುಬ್ಬಳ್ಳಿ: ಧಾರವಾಡ ಲೋಕಸಭಾ ಚುನಾವಣಾ ಕ್ಷೇತ್ರಕ್ಕೆ ಬಿಜೆಪಿ ಅದ್ಯಾವಾಗ ಮತ್ತೆ ಪ್ರಹ್ಲಾದ್ ಜೋಶಿ ಅವರಿಗೇನೆ ಟಿಕೆಟ್ ಕೊಟ್ಟಿತೇ ಅಂದಿನಿಂದಾನೇ ದಿಂಗಾಲೇಶ್ವರ ಸ್ವಾಮೀಜಿಗೆ ಬೇಸರ ಉಂಟಾಗಿತ್ತು. ಅಭ್ಯರ್ಥಿಯನ್ನು ಬದಲಾಯಿಸಿ ಎಂದು ಮನವಿ ಕೂಡ ಅಭ್ಯರ್ಥಿಯ ಬದಲಾವಣೆ

error: Content is protected !!