Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಾಂತಾರ ಸಿನಿಮಾ ಸಮಾಜದ ಮುಖ್ಯವಾಹಿನಿಗೆ ಬರಲು ನಾಡಿನ ಪ್ರೇಕ್ಷಕರ ಅಭಿಮಾನವೇ ಕಾರಣ : ನಟಿ ಮಾನಸಿ ಸುಧೀರ್

Facebook
Twitter
Telegram
WhatsApp

ಸುದ್ದಿಒನ್,  ಚಳ್ಳಕೆರೆ : ತುಳು ಜನಾಂಗದ ಧಾರ್ಮಿಕ ಆರಾಧ್ಯ ದೇವರ ಮಹತ್ವ ಸಾರುವ ಕಾಂತಾರ ಸಿನಿಮಾ ಸಮಾಜದ ಮುಖ್ಯವಾಹಿನಿಗೆ ಬರಲು ನಾಡಿನ ಪ್ರೇಕ್ಷಕರ ಅಭಿಮಾನವೇ ಕಾರಣ ಎಂದು ಸಿನಿಮಾದ ನಾಯಕ ನಟ ರಿಷಭ್‍ಶೆಟ್ಟಿ ಅವರ ಅಮ್ಮನ ಪಾತ್ರ ಮಾಡಿರುವ ನಟಿ ಮಾನಸಿ ಸುಧೀರ್ ಹೇಳಿದ್ದಾರೆ.

ಚಿತ್ರದುರ್ಗದ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಪದಾಧಿಕಾರಿಗಳು ಉಡುಪಿಯಲ್ಲಿನ ತಮ್ಮ ನಿವಾಸದಲ್ಲಿ ಸೋಮವಾರ ಅಭಿನಂದಿಸಿದ ವೇಳೆ ಮಾತನಾಡಿದ್ದಾರೆ.
ತುಳು ಭಾಷೆ ಮತ್ತು ಇಲ್ಲಿನ ಸಂಸ್ಕøತಿ ಆಚರಣೆಯಲ್ಲಿನ ದೈವಭಕ್ತಿ ಕಾಂತಾರ ಸಿನಿಮಾದ ಪ್ರಧಾನ ವಸ್ತು ವಿಷಯವಾಗಿದೆ. ವಯಸ್ಸಿನಲ್ಲಿ ಚಿಕ್ಕವಳಾಗಿದ್ದರೂ ತಾಯಿ ಪಾತ್ರಕ್ಕೆ ನನ್ನ ನಟನಾ ಕೌಶಲ್ಯವನ್ನು ಗುರುತಿಸಿದ ರಿಷಭ್‍ಶೆಟ್ಟಿ ಒಪ್ಪಿಗೆಯಂತೆ ತಾಯಿ ಪಾತ್ರ ನಟಿಸಲು ಅವಕಾಶವಾಯಿತು.

ಯಾವುದೇ ಕ್ಷೇತ್ರದಲ್ಲಿ ಒಳ್ಳೆಯ ಅವಕಾಶ ಬಯಸುವುದಕ್ಕಿಂತ ಮೊದಲು ನಮ್ಮಲ್ಲಿ ಪರಿಶ್ರಮ ಮತ್ತು ಆಸಕ್ತಿ ಇರಬೇಕು. ಯೂಟ್ಯೂಬ್ ಪ್ರಸಾರಕ್ಕೆ ಸಣ್ಣ ಪ್ರಮಾಣದಲ್ಲೂ ತುಂಬಾ ಆಸಕ್ತಿಯಿಂದ ನಟನಾ ಕೌಶಲ್ಯ ರೂಢಿಸಿಕೊಂಡಿದ್ದರ ಫಲವಾಗಿ, ರಿಷಭ್‍ಶೆಟ್ಟಿಯಂತಹ ಮೇರು ನಟರು ಗುರುತಿಸಿ ನಟನೆಗೆ ಅವಕಾಶ ನೀಡಲಾಗಿದೆ. ಕಲಾವಿದರಿಗೆ ಯಾವುದೇ ಭಾಷೆ, ವರ್ಗ, ಗಡಿ ಇಲ್ಲ ಎನ್ನುವ ಭಾವನೆ ಇದೆ. ಈ ದಿಸೆಯಲ್ಲಿ ಮಧ್ಯ ಕರ್ನಾಟಕದ ಸಾಹಿತ್ಯ ಸಂಘಟನೆಯವರು ಬಂದು ಅಭಿನಂದಿಸಿರುವುದು ನನ್ನ ಕಲಾ ಬದುಕಿಗೆ ಸಾರ್ಥಕ ಅನಿಸುತ್ತದೆ ಎಂದು ಸ್ಮರಿಸಿದ್ದಾರೆ.

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷೆ ಆರ್. ದಯಾವತಿ ಪುತ್ತೂರ್ಕರ್ ಮಾತನಾಡಿ, ಬದಲಾಗುತ್ತಿರುವ ಸಮಾಜದಲ್ಲಿ ಸಿನಿಮಾ ಕತೆಗಳು ಜನರಿಗೆ ಒಪ್ಪುವುದಿಲ್ಲ. ಇಂತಹ ಕಾಲಘಟ್ಟದಲ್ಲೂ ಕಾಂತಾರ ಸಿನಿಮಾ ಕೌಟುಂಬಿಕವಾಗಿ ನೋಡುವಂತಹ ಕತೆ ಆಧಾರಿತವಾಗಿದೆ. ತಾಯಿ ಪಾತ್ರ ನಿರ್ವಹಣೆಯಲ್ಲಿ ನಿಮ್ಮ ಕಲಾ ಕೌಶಲ್ಯತೆ ಮಹಿಳಾ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಪದಾಧಿಕಾರಿಗಳಾದ ಸತ್ಯಭಾಮ, ರಂಗಲಕ್ಷ್ಮಿ, ಉಷಾರಾಣಿ, ರಶ್ಮಿ, ಪದ್ಮರಾಣಿ, ಸೌಮ್ಯಪುತ್ರನ್, ಡಾ. ಗೌರಮ್ಮ, ಶೋಭಾ, ಮಹೇಶ್ವರಿ, ಸವಿತಾ, ಟಿ. ಗೀತಾ  ಮತ್ತಿತರರು ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ : 21ನೇ ಸ್ಥಾನದಲ್ಲಿ ಚಿತ್ರದುರ್ಗ ಜಿಲ್ಲೆ

ಬೆಂಗಳೂರು: ಇಂದು 2023-24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. 76.91ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 8.59,967 ಲಕ್ಷ ವಿಧ್ಯಾರ್ಥಿಗಳು ಪರೀಕ್ಚೆ ಬರೆದಿದ್ದಾರೆ. 6,31,204 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಲಿಂಗವಾರು ಒಟ್ಟಾರೆ ಫಲಿತಾಂಶ: ಬಾಲಕರು:2,87,416(65.90%) ಬಾಲಕಿಯರು’-3,43,788(81.11%) ರಾಜ್ಯದಲ್ಲಿ

SSLC ಫಲಿತಾಂಶ ಪ್ರಕಟ: ಉಡುಪಿ ಫಸ್ಟ್.. ಯಾದಗಿರಿ ಲಾಸ್ಟ್

    ಇಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷಾ ಮಂಡಳಿಯಲ್ಲಿ ಸುದ್ದಿಗೋಷ್ಟಿ ಮೂಲಕ ಫಲಿತಾಂಶ ಪ್ರಕಟ ಮಾಡಲಾಗಿದೆ. ರಾಜ್ಯಾದ್ಯಂತ 76.91 ರಷ್ಟು ಫಲಿತಾಂಶ ಬಂದಿದೆ. ಮಂಡಳಿಯ ವೆಬ್ಸೈಟ್ ಮೂಲಕವೂ ಫಲಿತಾಂಶವನ್ನು ನೋಡಬಹುದು. ಎಸ್ಎಸ್ಎಲ್ಸಿ ಫಲಿತಾಂಶ

ಕೊತ್ತಂಬರಿ ಸೊಪ್ಪಿನ ಟೀ ಕೇಳಿದ್ದೀರಾ..? ಒಮ್ಮೆ ಮಾಡಿಕೊಂಡು ಕುಡಿಯಿರಿ : ಎಷ್ಟೆಲ್ಲಾ ಅನುಕೂಲ ಗೊತ್ತಾ ?

ಸುದ್ದಿಒನ್ : ಹಲವರಿಗೆ ಬೆಳಗ್ಗೆ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಅನೇಕ ಜನರು ಬೆಳಿಗ್ಗೆ ಹಾಲಿನಿಂದ ತಯಾರಿಸಿದ ಚಹಾ ಮತ್ತು ಕಾಫಿ ಕುಡಿಯುತ್ತಾರೆ. ಆದರೆ, ಕೆಲವರು ಗ್ರೀನ್ ಟೀ ಕುಡಿಯುತ್ತಾರೆ, ಇನ್ನು ಕೆಲವರು ಲೆಮನ್ ಟೀ

error: Content is protected !!