Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಯಾರೋ ಮಾಡಿದ ತಪ್ಪಿಗೆ ಕರ್ನಾಟಕವನ್ನೇಕೆ ದೂಷಿಸಲಿ..? : ತಮಿಳು ನಟ ಸಿದ್ಧಾರ್ಥ್

Facebook
Twitter
Telegram
WhatsApp

 

ಚೆನ್ನೈ: ಕರ್ನಾಟಕದಲ್ಲಿ ಕಾವೇರಿಯ ಕಾವು ಹೆಚ್ಚಾಗಿತ್ತು. ಮೊದಲೇ ಮಳೆಯಿಲ್ಲದೆ ರೈತ ಕಂಗಲಾಗಿದ್ದಾನೆ. ಹೀಗಿರುವಾಗ ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ರೈತರು, ಕನ್ನಡಪರ ಸಂಘಟನೆಯವರು ಎರಡು ಬಾರಿ ಬಂದ್ ಮಾಡಿದ್ದರು. ಇದೆ ವೇಳೆ ತಮಿಳು ನಟ ಸಿದ್ಧಾರ್ಥ್ ತನ್ನ ಸಿನಿಮಾ ಪ್ರಚಾರಕ್ಕೆಂದು ಬಂದಿದ್ದಾಗಲೂ ಆತನ ಸುದ್ದಿಗೋಷ್ಟಿಯನ್ನೇ ನಿಲ್ಲಿಸಿದ್ದರು. ಇದಕ್ಕೆ ಶಿವಣ್ಣ ಕೂಡ ನಟ ಸಿದ್ಧಾರ್ಥ್ ಅವರಿಗೆ ಕ್ಷಮೆಯಾಚಿಸಿದ್ದರು.

ಇದೀಗ ನಟ ಸಿದ್ಧಾರ್ಥ್ ಮಾತನಾಡಿದ್ದು, ಯಾರೋ ಹತ್ತು ಮಂದಿ ಗೂಂಡಾಗಳು ಮಾಡಿದ ತಪ್ಪಿಗೆ ಕರ್ನಾಟಕವನ್ನೇಕೆ ದೂರಬೇಕು ಎಂದಿದ್ದಾರೆ. ನನ್ನನ್ನು ತಡೆದವರು ಯಾರೋ ಗೂಂಡಾಗಳು. ಕರ್ನಾಟಕ ಬಹಳಷ್ಟು ಪ್ರೀತಿ ಕೊಟ್ಟಿದೆ. ಈ ಸಂಬಂಧ ಈಗಾಗಲೇ ಶಿವರಾಜ್ ಕುಮಾರ್, ಪ್ರಕಾಶ್ ರೈ ಕ್ಷಮೆ ಕೇಳಿದ್ದಾರೆ. ಆದರೆ ಅವರು ಕ್ಷಮೆ ಕೇಳುವ ಅಗತ್ಯವಿರಲಿಲ್ಲ. ಈಗ ಯಾರೋ ಅಟ್ಯಾಕ್ ಮಾಡಿದರೆ ನಾನು ತಮಿಳುನಾಡನ್ನು ದೂಷಿಸುವುದಕ್ಕೆ ಆಗುತ್ತಾ ಎಂದಿದ್ದಾರೆ.

ಅಂದು ಕರ್ನಾಟಕದಲ್ಲಿ ಪ್ರೆಸ್ ಮೀಟ್ ಮಾಡುವಾಗ ಹಲವರು ಆ ಪ್ರೆಸ್ ಮೀಟ್ ಗೆ ನುಗ್ಗಿ, ನಿಲ್ಲಿಸಿದ್ದರು. ಸಿದ್ಧಾರ್ಥ್ ಎಷ್ಟೇ ಹೇಳಿದರೂ ಕೇಳುವುದಕ್ಕೆ ತಯಾರಿರಲಿಲ್ಲ. ತಮಿಳು ನಟ ಎಂಬ ಒಂದೇ ಒಂದು ಕಾರಣಕ್ಕೆ ಈ ರೀತಿಯ ಸಮಸ್ಯೆ ಆಗಿತ್ತು. ಕೊನೆಗೆ ನಟ ಸಿದ್ಧಾರ್ಥ್ ಕೈಮುಗಿದು ಹೊರ ನಡೆದಿದ್ದರು. ಆ ಬಳಿಕ ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದೀಗ ನಟ ಸಿದ್ಧಾರ್ಥ್ ಮತ್ತೆ ಕರ್ನಾಟಕದ ಮೇಲಿನ ಪ್ರೀತಿ ಬಗ್ಗೆ ಮಾತನಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ವಿಡಿಯೋ ಕೇಸ್ : ದೇಹದ ಆರೋಗ್ಯ ಮಾತ್ರವಲ್ಲ ಸಮಾಜದ ಆರೋಗ್ಯವನ್ನು ಸುಧಾರಿಸಬೇಕು ಡಾ. ಮಂಜುನಾಥ್

ರಾಮನಗರ: ರಾಜ್ಯದಲ್ಲಷ್ಟೇ ಅಲ್ಲ ದೇಶದಲ್ಲೂ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದೆ. ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ತನಿಖೆಗೆ ಕಾಯುತ್ತಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರುವ ಸಾಹಸ ಮಾಡುತ್ತಿಲ್ಲ.

ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಡಿ.ಟಿ. ಶ್ರೀನಿವಾಸ್ ಅವರನ್ನು ಬೆಂಬಲಿಸಿ : ಶಾಸಕ ಟಿ. ರಘುಮೂರ್ತಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮೇ. 18 : ಜನಪರ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಸರ್ವರಿಗೂ ಅನುಕೂಲವಾಗುವಂತೆ ರೂಪಿಸುವ ಯೋಜನೆಗಳು

ಬೆಂಗಳೂರು ಸೇರಿದಂತೆ ಹಲವೆಡೆ ಜೋರು ಮಳೆ : ಆರ್ಸಿಬಿ ಮ್ಯಾಚ್ ನೋಡುವ ಆಸೆ ಕಿತ್ತುಕೊಂಡನಾ ವರುಣರಾಯ..!

ಇಂದು ಬೆಳಗ್ಗೆಯಿಂದಾನೇ ಮೋಡಕವಿದ ವಾತಾವರಣ ಮನೆ ಮಾಡಿತ್ತು. ಮಧ್ಯಾಹ್ನದ ವೇಳೆಗೆ ಬೆಂಗಳೂರು ನಗರದಾದ್ಯಂತ ಜೋರು ಮಳೆಯಾಗಿದೆ. ವಿಜಯನಗರ, ರಾಜಾಜಿನಗರ, ಕಾರ್ಪೋರೇಷನ್ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಆದರೆ ಈ ಮಳೆಯಿಂದ ಇಂದು ಆರ್ಸಿಬಿ ಮ್ಯಾಚ್

error: Content is protected !!