Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

8 ಜನರಲ್ಲಿ ಬಿಗ್ ಬಾಸ್ ಮನೆಯಿಂದ ಹೊರಗೆ ಬರೋದು ಯಾರು..?

---Advertisement---

 

ಬಿಗ್ ಬಾಸ್ ಸೀಸನ್ 10 ರಿಯಾಲಿಟಿ ಶೋ ಒಂದು ವಾರಗಳನ್ನು ಪೂರೈಸಿದೆ. ಆಟ – ಹೊಂದಾಣಿಕೆಯೆಲ್ಲಾ ಮುಗಿದು ಈಗ ವಾರದ ಕತೆ ಕಿಚ್ಚನ ಜೊತೆಗೆ ಸಮಯ ಬಂದು ನಿಂತಿದೆ. ಮನೆಯಲ್ಲಿ ಸಮರ್ಥರು ಹಾಗೀ ಅಸಮರ್ಥರು ಎಂಬ ಪಟ್ಟಿ ಮಾಡಲಾಗಿದೆ. ಆಟಗಳು, ಸೌಲಭ್ಯಗಳು ಇಬ್ಬರಿಗೂ ಡಿಫ್ರೆಂಟ್ ಆಗಿರಲಿದೆ. ಇದೀಗ ಮೊದಲ ವಾರದಲ್ಲಿ ಹೊರಗೆ ಬರುವ ಸ್ಪರ್ಧಿ ಯಾರು ಎಂಬ ಕುತೂಹಲ ಸಹಜವಾಗಿಯೇ‌ ಇದೆ.

 

ಈಗಾಗಲೇ ಮನೆಯವರಿಂದಾನೇ ಮೈಕೆಲ್, ನೀತು, ತನಿಷಾ, ಸಿರಿ, ಸಂತೋಷ್ ಹಳ್ಳಿಕೆರೆ, ಡ್ರೋನ್ ಪ್ರತಾಪ್, ಸ್ನೇಕ್ ಶ್ಯಾಮ್, ಕಾರ್ತೀಕ್ ನಾಮಿನೇಟ್ ಆಗಿದ್ದಾರೆ. ವೋಟ್ ಮೂಲಕ ಜನ ಎಲ್ಲರನ್ನು ರಕ್ಷಿಸಬಹುದು. ಆದರೆ ಒಬ್ಬರಂತು‌ ಮನೆಯಿಂದ ಹೊರಗೆ ಬರಲೇಬೇಕಾಗಿದೆ. ಈ ಎಂಟು ಜನರಲ್ಲಿ ಇಂದು ಒಬ್ಬರು ಮನೆಯಿಂದ ಹೊರಗೆ ಬರಲಿದ್ದಾರೆ.

ಕಥೆ ಶುರುವಾಗುವ ಮುನ್ನವೇ ಮುಗಿಯುವುದು ಯಾರ ಪಾಲಿಗೆ ಎಂಬ ಪ್ರೋಮೋವನ್ನು ಕಲರ್ಸಗ ಕನ್ನಡ ರಿಲೀಸ್ ಮಾಡಿದೆ. ಇಂದು ಕಿಚ್ಚನ ಪಂಚಾಯ್ತಿಯಲ್ಲಿ ಸಖತ್ ಕ್ಲಾಸ್ ನಡೆಯಲಿದೆ. ಸಮರ್ಥರು ಎನಿಸಿಕೊಂಡವರ ನಡವಳಿಕೆ ನೋಡುಗರಿಗೇನೆ ಅಸಹ್ಯ ಎನಿಸಿದೆ. ಅದರಲ್ಲೂ ಡ್ರೋನ್ ಪ್ರತಾಪನನ್ನು ನಡೆಸಿಕೊಂಡ ರೀತಿಯೂ ಸರಿ ಇಲ್ಲ. ಅವನನ್ನು ನಗಿಸುವ ಪ್ರಯತ್ನ ಎಂದು ಹೇಳುವ ತುಕಾಲಿ ಸಂತು, ಮುಂದೆ ಒಂದು ಹಿಂದೆ ಒಂದು ಮಾತನಾಡುತ್ತಾರೆ. ಡ್ರೋನ್ ಬಗ್ಗೆ, ಇಬ್ಬರು ಸಂತೋಷ್, ಸ್ನೇಹಿತ್ ಬಹಳ ಕೆಟ್ಟದಾಗಿಯೇ ಮಾತನಾಡುತ್ತಾರೆ. ಈ ಎಲ್ಲಾ ವಿಚಾರಗಳಿಗೂ ಕಿಚ್ಚನಿಂದ ಖಂಡಿತ ಸಲಹೆ ಸೂಚನೆಗಳು ಸಿಗಲಿವೆ. ಹಾಗೇ ಕೊನೆಯಲ್ಲಿ ಮನೆಯಿಂದ ಹೊರ ಬರುವುದು ಯಾರು ಎಂಬುದು ತಿಳಿಯಲಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...