ದಾವಣಗೆರೆ ಜಿಲ್ಲಾಧಿಕಾರಿ ಮನೆಗೆ ಬಾಂಬ್ ಬೆದರಿಕೆ..!

1 Min Read

ದಾವಣಗೆರೆ: ಕಳೆದ‌ ಕೆಲವು ದಿನಗಳ ಹಿಂದಷ್ಟೇ ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಹಾಕಿದ್ದರು. ಆದರೆ ಈಗ ನೋಡಿದ್ರೆ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಹಾಕುವ ಬೆದರಿಕೆಯನ್ನು ಹಾಕಿದ್ದಾರೆ. ಇದು ದಾವಣಗೆರೆ ಮಂದಿಯ ಆತಂಕಕ್ಕೆ ಕಾರಣವಾಗಿತ್ತು. ನಿಜಲಿಂಗಪ್ಪ ಬಡಾವಣೆಯಲ್ಲಿ ಜಿಲ್ಲಾಧಿಕಾರಿ ಅವರ ಮನೆ ಇದೆ.

112ಗೆ ಕಾಲ್ ಮಾಡಿದ್ದ ಕಿಡಿಗೇಡಿ, ಜಿಲ್ಲಾಧಿಕಾರಿ ಜಿಎಂ ಗಂಗಾಧರಸ್ವಾಮಿ ಅವರ ಸರ್ಕಾರಿ ನಿವಾಸವನ್ನು ಸ್ಪೋಟ ಮಾಡುವುದಾಗಿ ಹೇಳಿದ್ದಾನೆ. ಈ ಕರೆ ಬಂದ ತಕ್ಷಣ ಬಡಾವಣೆ ಠಾಣೆ ಪೊಲೀಸರು ಅಲರ್ಟ್ ಆಗಿದ್ದಾರೆ. ಮೊದಲು ಜಿಲ್ಲಾಧಿಕಾರಿ ಮನೆ ಇರುವ ನಿಜಲಿಂಗಪ್ಪ ನಿವಾಸಕ್ಕೆ ದೌಡಾಯಿಸಿದ್ದಾರೆ. ಜೊತೆಗೆ ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದರು. ಬಡಾವಣೆ ಠಾಣೆಯ ಪಿಐ ಗಾಯಿತ್ರಿ ಅವರು ಸಿಬ್ಬಂದಿಯೊಂದಿಗೆ ಜಿಲ್ಲಾಧಿಕಾರಿ ಮನೆಗೆ ಆಗಮಿಸಿ ಪರಿಶೀಲನೆ ನಡೆಸಿದರು. ಡಿಸಿ ನಿವಾಸದ ಪ್ರತಿಯೊಂದು ಮೂಲೆ ಮೂಲೆ ಪರಿಶೀಲನೆ ನಡೆಸಿದರು ಯಾವುದೇ ಸ್ಟೋಟಕ ಸಿಗದ ಹಿನ್ನಲೆ ವಾಪಸ್‌ ತೆರಳಿದರು. ಅದರಲ್ಲೂ ಕರೆ ಮಾಡಿದ 45 ನಿಮಿಷದಲ್ಲಿ ಮನೆಯನ್ನು ಸ್ಪೋಟ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಇದರಿಂದಾಗಿ ಪೊಲೀಸರು ಕೂಡ ಸ್ವಲ್ಪ ಗಾಬರಿಯಾಗಿದ್ದರು. ಹೀಗಾಗಿಯೇ ಓಡೋಡಿ ಬಂದರು. ಬೇಗ ಬೇಗ ಪರಿಶೀಲನೆ ಮಾಡುವ ಪ್ರಯತ್ನ ಮಾಡಿದರು. ಏನು ಸಿಗದೆ ಇದ್ದಾಗ, ಸಮಾಧಾನದಿಂದ ಅಲ್ಲಿಂದ ಹೋಗಿದ್ದಾರೆ. ಕಳೆದ ತಿಂಗಳು ಜಿಲ್ಲಾಧಿಕಾರಿ ಕಚೇರಿ ಹಾಗೂ ನ್ಯಾಯಾಲಯಕ್ಕೂ ಬಾಂಬ್ ಬೆದರಿಕೆ ಹಾಕುವುದಾಗಿ ಯಾರೋ ಹೇಳಿದ್ದರು. ಈ ತಿಂಗಳಲ್ಲೂ ಆ ರೀತಿಯ ಬೆದರಿಕೆ ಕರೆಗಳು ಬಂದಿವೆ. ಹೀಗಾಗಿ ಪೊಲೀಸರು ಗಂಭೀರವಾಗಿ ಈ ಪ್ರಕರಣವನ್ನು ತೆಗೆದುಕೊಂಡಿದ್ದು, ಆತನ ಹುಡುಕಾಟದಲ್ಲಿದ್ದಾರೆ.

Share This Article