ಬೆಂಗಳೂರು.ಆಗಸ್ಟ್.10: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 59ನೇ ಸೆಷನ್ಸ್ ಕೋರ್ಟ್ 14ನೇ ಸಾಕ್ಷಿಯ ಪಾಟೀಸವಾಲಿಗೆ ಆರೋಪಿಗಳಿಗೆ ಅನುಮತಿ ನೀಡಿದೆ.
ಪ್ರಕರಣದ 14ನೇ ಸಾಕ್ಷಿಯ ಪಾಟೀಸವಾಲು ನಡೆಸಲು ಆರೋಪಿಗಳ ಪರ ವಕೀಲರಿಗೆ ನ್ಯಾಯಾಲಯ ಸಮ್ಮತಿ ಸೂಚಿಸಿದ್ದು, ಪ್ರಸ್ತುತ ಸಾಕ್ಷಿಯ ಪಾಟೀಸವಾಲು ಪ್ರಕ್ರಿಯೆ ಕೋರ್ಟ್ನಲ್ಲಿ ಮುಂದುವರಿದಿದೆ. ಪ್ರಕರಣದ ಸೂಕ್ಷ್ಮತೆಯನ್ನು ಪರಿಗಣಿಸಿ, ವಿಚಾರಣೆ ನಡೆಯುತ್ತಿರುವ ಕೋರ್ಟ್ ನಲ್ಲಿ ಸಂಬಂಧಪಟ್ಟವರನ್ನು ಹೊರತುಪಡಿಸಿ ಉಳಿದವರನ್ನು ಹೊರಗೆ ಕಳುಹಿಸಲು ಕೋರ್ಟ್ ಸಿಬ್ಬಂದಿಗೆ ಸೂಚಿಸಲಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 59ನೇ ಸೆಷನ್ಸ್ ಕೋರ್ಟ್ ಇಂದು ಮಧ್ಯಾಹ್ನ 3 ಗಂಟೆಗೆ ಪ್ರಮುಖ ಆದೇಶ ನೀಡುವ ನಿರೀಕ್ಷೆಯಿದೆ.








