Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ವೈ.ಟಿ.ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಆರ್. ಗಂಗಾಧರ್ ಆಯ್ಕೆ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ,(ಜು.22) :  ಜಿಲ್ಲಾ ವಕೀಲರ ಅಧ್ಯಕ್ಷರಾಗಿ ನೂತನ ಅಧ್ಯಕ್ಷರಾಗಿ ವೈ.ಟಿ. ತಿಪ್ಪೇಸ್ವಾಮಿ, ಉಪಾಧ್ಯಕ್ಷರಾಗಿ ಜಿ.ಎಂ.ಅನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಆರ್. ಗಂಗಾಧರ್ ಆಯ್ಕೆಯಾಗಿದ್ದಾರೆ.

ಜಿಲ್ಲಾ ವಕೀಲರ ಸಂಘದ ಚುನಾವಣೆ  ವಕೀಲರ ಭವನದಲ್ಲಿ  ಶಾಂತಿಯುತವಾಗಿ ಜರುಗಿತು.  ಮಳೆಯ ನಡುವೆಯೂ ಶೇ 90 ರಷ್ಟು ಮತದಾನವಾಗಿದೆ. ರಾಜ್ಯಸಭಾ ಮಾಜಿ ಸದಸ್ಯರು ಹಾಗೂ ಸರಸ್ವತಿ ಕಾನೂನು ಕಾಲೇಜು ಅಧ್ಯಕ್ಷರಾದ ಹೆಚ್. ಹನುಮಂತಪ್ಪ, ಕಾನೂನು ಪದವಿ ಪಡೆದಿರುವ ಛಲವಾದಿ ಗುರುಪೀಠದ ಶ್ರೀ ಬಸವನಾಗೀದೇವ ಮಹಾಸ್ವಾಮೀಜಿ ಸೇರಿದಂತೆ ಅನೇಕ ಹಿರಿಯರು, ವಿಶೇಷ ಚೇತನರು ಮತಚಲಾಯಿಸಿದರು.  ಒಟ್ಟು 863 ಮತಗಳಿಗೆ 765 ಮತಚಲಾವಣೆಯಾಗಿದೆ.

ಚಿತ್ರದುರ್ಗ ಜಿಲ್ಲಾ ವಕೀಲರ ಅಧ್ಯಕ್ಷರಾಗಿ ನೂತನ ಅಧ್ಯಕ್ಷರಾಗಿ ವೈಟಿ ತಿಪ್ಪೇಸ್ವಾಮಿ (ವೈಟಿಎಸ್) ಅವರು 304 ಮತಗಳನ್ನು ಪಡೆದು ಜಯಶೀಲರಾದರು. ಕಣದಲ್ಲಿದ್ದ  ಕೆ.ಮಂಜುನಾಥ ರೆಡ್ಡಿ (ಕೆಎಂಆರ್) 262 ಮತಗಳನ್ನು, ಹೆಚ್.ಎಸ್. ಮಹೇಶ್ವರಪ್ಪ (ಹೆಚ್ ಎಸ್.ಎಂ.ಪಿ) 174 ಮತಗಳನ್ನು ಟಿ.ಚಂದ್ರಣ್ಣ 13 ಮತ್ತು ಟಿ. ಬೊಮ್ಮಯ್ಯ 18 ಮತಗಳನ್ನು ಪಡೆದಿದ್ದಾರೆ.

ಉಪಾಧ್ಯಕ್ಷರಾಗಿ ಜಿ.ಎಂ.ಅನಿಲ್ ಕುಮಾರ್ ಅವರು  399 ಮತಗಳನ್ನು ಪಡೆದು ಜಯಶೀಲರಾದರು.  ಕಣದಲ್ಲಿದ್ದ ಎಂ.ಕೆ.ಲೋಕೇಶ್ 228, ಕಿರಣ್ ಜೈನ್ 29, ಎಂ.ತಿಪ್ಪೇಸ್ವಾಮಿ 109, ಕಣದಿಂದ ಹಿಂದೆ ಸರಿದಿದ್ದ ಎಂ.ಸಿ.ನರಹರಿ 06 ಮತಗಳನ್ನು ಪಡೆದಿದ್ದಾರೆ.

ಪ್ರಧಾನ ಕಾರ್ಯದರ್ಶಿ ಹುದ್ದೆಗಾಗಿ ನಾಲ್ವರು ಕಣದಲ್ಲಿದ್ದರು. ಆರ್. ಗಂಗಾಧರ್ 388 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ. ಹಾಲಿ ಉಪಾಧ್ಯಕ್ಷರಾಗಿದ್ದ ಜಿ.ಸಿ. ದಯಾನಂದ್ 174, ಹೆಚ್. ಓ ಜಗದೀಶ್ 112, ಸಿ.ಎಸ್.ರವೀಂದ್ರ 77 ಮತಗಳನ್ನು ಪಡೆದಿದ್ದಾರೆ.

ಖಜಾಂಚಿ ಹುದ್ದೆಗೆ ಬಿ.ಇ. ಪ್ರದೀಪ್  535 ಮತಗಳನ್ನು ಪಡೆದು ಆಯ್ಕೆ ಯಾಗಿದ್ದಾರೆ. ಪ್ರತಿಸ್ಪರ್ಧಿಗಳು ಡಿ.ವೆಂಕಟೇಶ್  210 ಮತ ಪಡೆದಿದ್ದಾರೆ.

ಜಂಟಿ ಕಾರ್ಯದರ್ಶಿಯಾಗಿ ಗಿರೀಶ್ ಬಿ. ಮಲ್ಲಾಪುರ 354 ಮತಗಳನ್ನು ಪಡೆದು ಆಯ್ಕೆಯಾದರು. ಕಣದಲ್ಲಿದ್ದ ಆರ್. ಗೋಪಾಲ್  160, ಹೆಚ್. ಸೋಮಶೇಖರ್ ರೆಡ್ಡಿ   296. ಮತ ಪಡೆದಿದ್ದಾರೆ.

ಚುನಾವಣೆಗೂ ಮುನ್ನ ವಕೀಲರ ಸಂಘದ ಅಧ್ಯಕ್ಷರಾದ ಸಿ.ಶಿವುಯಾದವ್ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಭೆ ನಡೆಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೊಳಲ್ಕೆರೆ | ಸ್ನೇಹ ಪಬ್ಲಿಕ್ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

ಸುದ್ದಿಒನ್, ಹೊಳಲ್ಕೆರೆ, ಜುಲೈ. 26 : ನಮ್ಮ ರಾಷ್ಟ್ರಧ್ವಜವು ಗಾಳಿಯಿಂದ ಹಾರುತ್ತಿಲ್ಲ ಬದಲಾಗಿ ಅದು ಹಾರುತ್ತಿರುವುದು ಈ ದೇಶಕ್ಕಾಗಿ ಮಡಿದ ವೀರ ಯೋಧರ ಸೈನಿಕರ ಉಸಿರಿನಿಂದ ಎಂದು ಸಂಸ್ಥೆಯ ಕಾರ್ಯದರ್ಶಿ ಜಿ.ಎಸ್. ವಸಂತ್ ಹೇಳಿದರು.

ಖ್ಯಾತ ನಿರೂಪಕಿ ದಿವ್ಯಾ ಆಲೂರು ತಂದೆ‌ ನಿಧನ : ತಾವೇ ಅಂತ್ಯಸಂಸ್ಕಾರ ಮಾಡಿ ಹೇಳಿದ್ದೇನು..?

ಬೆಂಗಳೂರು : ಪೋಷಕರ ಅಂತ್ಯ ಸಂಸ್ಕಾರದ ವಿಚಾರದಲ್ಲಿ ಈಗಲೂ ಮನಸ್ಥಿತಿ ಎಲ್ಲಾ ಕಡೆಯಲ್ಲೂ ಬದಲಾಗಿಲ್ಲ. ತಮಗೆ ಗಂಡು ಮಕ್ಕಳು ಇಲ್ಲದೆ ಇದ್ದರು, ಅಣ್ಣತಮ್ಮಂದಿರಿಗೆ ಇರುವ ಗಂಡು ಮಕ್ಕಳಿಂದಾನೇ ಅಂತ್ಯ ಸಂಸ್ಕಾರ ನಡೆಸುತ್ತಾರೆ. ಸತ್ತವರಿಗೆ ಅಂತ್ಯ

ಖ್ಯಾತ ನಿರೂಪಕಿ ದಿವ್ಯಾ ಆಲೂರು ತಂದೆ‌ ನಿಧನ : ತಾವೇ ಅಂತ್ಯಸಂಸ್ಕಾರ ಮಾಡಿ ಹೇಳಿದ್ದೇನು..?

ಪೋಷಕರ ಅಂತ್ಯ ಸಂಸ್ಕಾರದ ವಿಚಾರದಲ್ಲಿ ಈಗಲೂ ಮನಸ್ಥಿತಿ ಎಲ್ಲಾ ಕಡೆಯಲ್ಲೂ ಬದಲಾಗಿಲ್ಲ. ತಮಗೆ ಗಂಡು ಮಕ್ಕಳು ಇಲ್ಲದೆ ಇದ್ದರು, ಅಣ್ಣತಮ್ಮಂದಿರಿಗೆ ಇರುವ ಗಂಡು ಮಕ್ಕಳಿಂದಾನೇ ಅಂತ್ಯ ಸಂಸ್ಕಾರ ನಡೆಸುತ್ತಾರೆ. ಸತ್ತವರಿಗೆ ಅಂತ್ಯ ಸಂಸ್ಕಾರ ಮಾಡಬೇಕಾದವರು

error: Content is protected !!