Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯಾರೇಳಿದ್ದು ಡಿಕೆಶಿ ಕನಸಿನ ಕೂಸು ಇದು ಅಂತ..?

---Advertisement---

ತುಮಕೂರು; ಹೇಮಾವತಿ ಕೆನಾಲ್ ವಿವಾದ ಕಳೆದ ಮೂರು ದಿನದಿಂದ ಜೋರಾಗಿದೆ. ಹೇಮಾವತಿ ಕೆನಾಲ್ ಯೋಜನೆ ಉಳಿದ ಕೆಲವನ್ನು ಕೈಗೆತ್ತಿಕೊಂಡ ಬೆನ್ನಲ್ಲೇ ಬಿಜೆಪಿ ನಾಯಕರು, ಮಠಾಧೀಶರು ವಿರೋಧ ವ್ಯಕ್ತಪಡಿಸಿದರು. ಅದರಲ್ಲೂ ಇಲ್ಲಿನ ನೀರನ್ನ ರಾಮನಗರಕ್ಕೆ ತೆಗೆದುಕೊಂಡು ಹೋಗುತ್ತೇವೆಂದಾಗ ತುಮಕೂರಿನ ಜನತೆ ರೊಚ್ಚಿಗೆದ್ದಿದ್ದಾರೆ. ಇದರ ಬೆನ್ನಲ್ಲೇ ಇದು ಡಿಕೆ ಶಿವಕುಮಾರ್ ಕನಸಿನ ಕೂಸು ಎಂಬ ಮಾತು ಕೇಳಿ ಬಂದಿದೆ. ಈ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಯಾರೇಳಿದ್ದು ಇದು ಡಿಕೆ ಶಿವಕುಮಾರ್ ಕನಸಿನ ಕೂಸು ಅಂತ. ಸರ್ಕಾರದ ಯೋಜನೆ ಇದು. ನೀವೂ ಹೇಳಿಕೊಳ್ಳಬಹುದು ಇದು ನಮ್ಮ ಕನಸಿನ ಕೂಸು ಅಂತ. ರಾಜ್ಯದ ಒಂದು ಭಾಗದಲ್ಲಿ ನಡೆಯುವ ಯೋಜನೆ ಇದು. ಕುಣಿಗಲ್‌ ಒಂದೇ ಅಲ್ಲ 16 ತಾಲೂಕಿನಿಂದ ಇದೆ. ಪ್ರಶ್ನೆ ಬಂದಿರೋದು ಕುಣಿಗಲ್ ವಿಚಾರ ಮಾತ್ರ ಅಲ್ಲ. ಒಂದು ತಿಂಗಳಾಯ್ತು ಪೂಜೆ ಮಾಡಿ.

ನೀರಾವರಿ ಯೋಜನೆ ರಾತ್ರೋ ರಾತ್ರಿ ಆಗೋದಲ್ಲ. ಒಂದೊಂದು ಸಲ ವರ್ಷಾನುಗಟ್ಟಲೆ ತೆಗೆದುಕೊಳ್ಳುತ್ತದೆ. ಆಲಮಟ್ಟಿದು ಎಷ್ಟು ವರ್ಷ ತೆಗೆದುಕೊಳ್ತು. ಲಾಲ್ ಬಹದ್ದೂರ್ ಶಾಸ್ತ್ರಿ ಅವರಹ ಫೌಂಡೇಷನ್ ಹಾಕಿದ್ದು, 65ರಲ್ಲಿ ಮುಗ್ದದ್ದು ಎಷ್ಟು ವರ್ಷ ಆಯ್ತು. ಜಸ್ಟಿಫೈ ಮಾಡ್ತಾ ಇಲ್ಲ. ಆದರೆ ನೀರಾವರಿ ಯೋಜನೆಗಳ ಬಗ್ಗೆ ಆಗುವ ಕೆಲಸಗಳ ಬಗ್ಗೆ ಹೇಳಿದೆ. ಸುರೇಶ್ ಗೌಡರು ಆತಂಕಪಡುವಂತದ್ದಿಲ್ಲ. 70ರಲ್ಲಿ ಕುಣಿಗಲ್ ನೀರು ಎಕ್ಸ್ಪ್ರೆಸ್ ನಲ್ಲಿ ಆಯ್ತು ಅಂದ್ರೆ 901 ಕ್ಯೂಸೆಕ್ ನೀರು ಹೋಗ್ತಾ ಇರುತ್ತೆ. ಯಾವುದೇ ಕಾರಣಕ್ಕೂ ನಿಲ್ಲಿಸೋದಿಲ್ಲ. ಇದರಿಂದ ರಾಮನಗರಕ್ಕೆ ನೀರು ತಗೊಂಡು ಹೋಗುವುದು ಇಲ್ಲ. ಮಾಗಡಿಗೆ ಆ‌ಲೊಕೇಷನ್ ಕೊಟ್ಟಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಉದ್ಯೋಗ ಸೃಷ್ಟಿ ಹಾಗೂ ಕೌಶಲ್ಯಾಭಿವೃದ್ಧಿಗೆ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕೈಗಾರಿಕಾ ಸಹಭಾಗಿತ್ವದ “ಹೈಪರ್-ಆಕ್ಟಿವ್ ಇನ್ನೋವೇಷನ್ ಹಬ್”ಗಳ ನಿರ್ಮಾಣ ಅತ್ಯಗತ್ಯ

ತೆಳ್ಳಗಿದ್ದರೆ ಮಾತ್ರ ಫಿಟ್ ಎಂದರ್ಥವಲ್ಲ: ನಿಜವಾದ ಫಿಟ್‌ನೆಸ್‌ನ ಗುರುತುಗಳೇನು? ತಜ್ಞರ ಸಲಹೆ ಇಲ್ಲಿದೆ

ಕೂದಲು ಉದುರುವಿಕೆ ತಡೆದು, ದಟ್ಟವಾಗಿ ಬೆಳೆಯಲು ಈ ‘ಸೂಪರ್‌ಫುಡ್‌’ಗಳನ್ನು ನಿಮ್ಮ ಆಹಾರದಲ್ಲಿ ತಪ್ಪದೇ ಸೇರಿಸಿ!

ಚಿತ್ರದುರ್ಗ : ಮೊಳಕಾಲ್ಮೂರಿನಲ್ಲಿ ಭೀಕರ ರಸ್ತೆ ಅಪಘಾತ : ಸೇತುವೆಗೆ ಕಾರು ಡಿಕ್ಕಿಯಾಗಿ ಇಬ್ಬರು ಸಾವು!

ಮೊಬೈಲ್‌-ಸ್ಕ್ರೀನ್‌ಗೆ ಬ್ರೇಕ್ ನೀಡಿ: ಮಾನಸಿಕ ಆರೋಗ್ಯ ಕಾಪಾಡಲು ‘ಡಿಜಿಟಲ್ ಡಿಟಾಕ್ಸ್’ ಏಕೆ ಮುಖ್ಯ?

ನೀತಿ ಕಥೆ: ನಂಬಿಕೆದ್ರೋಹಕ್ಕೆ ಕ್ಷಮೆಯಿಲ್ಲ (ಯುವರಾಜ ಮತ್ತು ಕರಡಿಯ ಕಥೆ)

Leave a Comment