ಹಾಸ್ಟೇಲ್ ಹುಡುಗರಿಗೆ ರಮ್ಯಾ ನೋಟೀಸ್ ಬಗ್ಗೆ ಶಿವಣ್ಣ ಏನಂದ್ರು..?

1 Min Read

 

 

ಈಗಾಗಲೇ ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿ ಯಶಸ್ವಿ‌ ಪ್ರದರ್ಶನ ಕಾಣುತ್ತಾ ಇದೆ. ಆದರೆ ರಿಲೀಸ್ ಗೂ ಮುನ್ನ ನಟಿ ರಮ್ಯಾ ಸಿನಿಮಾದ ಮೇಲೆ ಸ್ಟೇ ತಂದಿದ್ದರು. ಒಂದು ಕೋಟಿ ಪರಿಹಾರಕ್ಕೆ ಡಿಮ್ಯಾಂಡ್ ಇಟ್ಟಿದ್ದರು. ಎಲ್ಲವು ಸರಿಯಾಗಿ ಸಿನಿಮಾ ಕೂಡ ರಿಲೀಸ್ ಆಗಿದೆ.

ರಮ್ಯಾ‌ ನೋಟೀಸ್ ವಿಚಾರವಾಗಿ ಶಿವಣ್ಣ ಮಾತನಾಡಿದ್ದು, ಅಪ್ಪಾಜಿ ಹೇಳಿಕೊಟ್ಟಿರೋದು ಒಂದೇ. ಸಿನಿಮಾಗಳಿಗೆ ಬೆಂಬಲ ನೀಡಬೇಕು ಅಂತ. ಸಿನಿಮಾ ಚೆನ್ನಾಗಿಲ್ಲ ಅಂದ್ರು ಚೆನ್ನಾಗಿದೆ ಅಂತಾನೇ ಹೇಳ್ತೀನಿ. ಯಾಕಂದ್ರೆ ಯಾವುದೋ ಒಂದು ಅಂಶ ಅವರಿಗೆ ಸ್ಪೂರ್ತಿ ಸಿಗಬಹುದು. ಅಭಿಮಾನಿಗಳೇ ಮನೆ ದೇವ್ರು ಅಂತ ಅಪ್ಪಾಜಿ‌ ಹೇಳಿ ಆಗಿದೆ.

ಯಾರ ಬಗ್ಗೆಯೂ ಏನು ಕಮೆಂಟ್ ಮಾಡುವುದು ಬೇಡ. ಅದು ಬರುವುದಕ್ಕೂ ಮುನ್ನವೂ ಒಳ್ಳೆಯದ್ದೇ ಆಗಿದೆ. ಒಳ್ಳೆಯದ್ದನ್ನು ಮಾಡಿದಾಗ ಒಳ್ಳೆಯದ್ದು ಆಗುತ್ತೆ. ಅಭಿಮಾನಿ ದೇವರುಗಳು ಇದ್ದಾಗ ಸಿನಿಮಾ ಕೈ ಹಿಡಿಯುತ್ತೆ. ಅವರ ಬಗ್ಗೆ ಮಾತಾಡೋದು ಬೇಡ.

 

ನಾವೂ ಏನು ಮಾಡುವುದಕ್ಕೆ ಆಗದೆ ಇದ್ದರು ಒಳ್ಳೆಯದ್ದೇ ಮಾಡೋಣಾ. ಸಿನಿಮಾ ಚೆನ್ನಾಗಿ ಓಡುತ್ತಿದೆ ಓಡಲಿ. ನಂಗೆ ತುಂಬಾ ಖುಷಿ ಇದೆ. ಕಾಲೇಜು ಸ್ಟೋರಿ ಅಂದ್ರೇನೆ ಹಾಗೆ. ಆನಂದ್, ಅಪ್ಪು, ಕಿರಿಕ್ ಪಾರ್ಟಿ ಹೀಗೆ ಎಲ್ಲಾ ಸಿನಿಮಾಗಳು ಚೆನ್ನಾಗಿ ಮೂಡುತ್ತೆ. ಆ ಮೆಮೋರೀಸ್ ನ ಮರೆಯೋದಕ್ಕೆ ಆಗಲ್ಲ. ನಾವೂ ವಾಪಸ್ ಆಗ್ತೀವಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *