ದಾವಣಗೆರೆ : ಇಂದು ದಾವಣಗೆರೆಗೆ ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಿದ್ದು, ಅಲ್ಪಸಂಖ್ಯಾತರಿಗೆ ಅತೃಪ್ತಿ ಇರುವ ಕಾರಣ ಸಮಾಧಾನ ಮಾಡಲು ಪ್ರಯತ್ನಿಸ್ತೀರಾ ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾವೂ ಯಾರಿಗೆ ಅಸಮಾಧಾನವಿದೆ, ಆ ಅಸಮಾಧಾನವನ್ನು ಹೋಗಲಾಡಿಸುವುದಕ್ಕೆ ಪ್ರಯತ್ನ ಮಾಡ್ತೇವೆ ಎಂದಿದ್ದಾರೆ.
ಎರಡು ಕಡೆ ಗೆಲ್ಲುವ ವಿಶ್ವಾಸ 100% ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲೂ ಇದನ್ನೇ ಹೇಳಿದ್ರು ಅವರು. ಬಸವರಾಜ್ ಬೊಮ್ಮಾಯಿ ಮಗ, ಕುಮಾರಸ್ವಾಮಿ ಮಗ ಅವರನ್ನೇ ಸೋಲಿಸಲಿಲ್ವಾ ನಾವೂ. ಈಗ ಹೇಳಿಕೊಳ್ಳಬೇಕು ಹೇಳ್ತಾರೆ. ನಾವೂ ನುಡಿದಂತೆ ನಡೆದಿದ್ದೇವೆ. ಎಲ್ಲಾ ಐದು ಗ್ಯಾರಂಟಿ ಯೋಜನೆಗಳನ್ನು ಸಹ ಜಾರಿ ಮಾಡಿದ್ದೇವೆ. ಈ ರಾಜ್ಯದ ಜನ ನಮ್ಮ ಪರ ಇದ್ದಾರೆ. ಕಳೆದ ಬೈ ಎಲೆಕ್ಷನ್ ನಲ್ಲೂ ಇದನ್ನ ಸಾಬೀತು ಮಾಡಿದ್ದೇವೆ. ರೈತರು, ಹಿಂದುಳಿದವರು, ಬಡವರು, ಅಲ್ಪಸಂಖ್ಯಾತರು ಎಲ್ಲರೂ ಕೂಡ ನಮ್ಮ ಪರ ಇದ್ದಾರೆ. ಬಿಜೆಪಿಯವರು ಗೆಲ್ಲೋದೆ ಇಲ್ವಲ್ಲ.

ನಾವೂ ಅಧಿಕಾರದಲ್ಲಿದ್ದೀವಿ. ಈ ಚುನಾವಣೆಯಲ್ಲೂ ಗೆಲ್ತೀವಿ ಅಂತ ಇದ್ದೀವಿ. ಅಲ್ಪಸಂಖ್ಯಾತರಿಗೆ ಮನವೊಲಿಕೆ ಮಾಡುವಂತ ಕೆಲಸವನ್ನು ಮಾಡ್ತೀವಿ. ಯಾರಿಗೆ ಅಸಮಾಧಾನವಿದೆ ಅದನ್ನ ಹೋಗಲಾಡಿಸುತ್ತೀವಿ ಎಂಬ ಮಾತನ್ನ ಹೇಳಿದ್ದಾರೆ. ಸದ್ಯ ದಾವಣಗೆರೆಯಲ್ಲಿ ಅಲ್ಪಸಂಖ್ಯಾತರಿಗೆ ಈ ಬಾರಿಯ ಟಿಕೆಟ್ ಸಿಗಬೇಕು ಎಂದು ಸಚಿವ ಜಮೀರ್ ಅಹ್ಮದ್ ಅವರು ಕೂಡ ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೂ ಕಡೆ ಗಳಿಗೆಯಲ್ಲಿ ಶಾಮನೂರು ಕುಟುಂಬಕ್ಕೇನೆ ಟಿಕೆಟ್ ಸಿಕ್ಕಿದೆ. ಈ ಸಂಬಂಧ ಅಲ್ಲಿನ ಅಲ್ಪಸಂಖ್ಯಾತರು ಬೇಸರದಲ್ಲಿದ್ದು, ಬಂಡಾಯವೆದ್ದಿದ್ದಾರೆ. ಸ್ವತಂತ್ರವಾಗಿ ಸ್ಪರ್ಧೆ ಮಾಡುವ ನಿರ್ಧಾರ ಮಾಡಿದ್ದಾರೆ. ಇದೊಇಗ ದಾವಣಗೆರೆಗೆ ಸಿದ್ದರಾಮಯ್ಯ ಅವರು ಎಂಟ್ರಿಯಾಗಿದ್ದು, ಯಾವ ರೀತಿ ಸಮಾಧಾನ ಮಾಡ್ತಾರೆ ಎಂಬುದನ್ನ ನೋಡಬೇಕಿದೆ.


















