ಸುದ್ದಿಒನ್, ಚಿತ್ರದುರ್ಗ, ಜುಲೈ. 28 : ಅವಿಭಕ್ತ ಕುಟುಂಬಗಳು ಮರೆಯಾಗಿ ಪೂರ್ವಜರ ಹೆಸರುಗಳೇ ಜ್ಞಾಪಕವಿರದ ಈ ಕಾಲದಲ್ಲಿ ಒಡಹುಟ್ಟಿದವರ ನಡುವಿನ ಸಂಬಂಧಗಳೇ ಶಿಥಿಲವಾಗುತ್ತಿರುವ ಈ ಸಂದರ್ಭದಲ್ಲಿ, ಈ ರೀತಿಯ ವಂಶಸಂಗಮ ಕಾರ್ಯಕ್ರಮವನ್ನು ಏರ್ಪಡಿಸಿ ಮುಂದಿನ ಪೀಳಿಗೆಗೆ ವಂಶಸ್ಥರ ಪೂರ್ಣ ಪರಿಚಯದೊಂದಿಗೆ ಅವಿನಾಭಾವ ಸಂಬಂಧಗಳು ಮುಂದುವರೆಯಬೇಕೆಂಬ ಆಶಯದೊಂದಿಗೆ ಈ ಕಾರ್ಯಕ್ರಮವನ್ನು ಏರ್ಪಡಿಸಿರುವುದು ಶ್ಲಾಘನೀಯ ಸಂಗತಿ ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರಾದ ಪೂಜ್ಯ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.
ನಗರದ ವೈಭವ ಗಾರ್ಡನ್ ಸಭಾಂಗಣದಲ್ಲಿ ಜುಲೈ 25 ಮತ್ತು 26 ರಂದು ನಡೆದ ಚಿಂತಕುಂಟೆ ವಂಶಸ್ಥರ ನಾಲ್ಕನೆಯ ವಂಶಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಚಿಂತಕುಂಟೆ ವಂಶಸ್ಥರು ತಮ್ಮ ಐದು ತಲೆಮಾರಿನ ವಂಶಾವಳಿಯ ವಂಶವೃಕ್ಷ ಕಿರು ಹೊತ್ತಿಗೆಯನ್ನು ಹೊರತಂದಿರುವ ವಿಚಾರವು ಅಪೂರ್ವ ಸಂಗತಿಯಾಗಿದೆ,
ಇವರ ವಿವಿಧ ತಲೆಮಾರಿನ ಕುಟುಂಬಸ್ಥರನ್ನು ನೋಡುವುದೇ ಸಂತಸವಾಗುತ್ತದೆ, ಈ ಕಾರ್ಯಕ್ರಮಗಳು ಇದೇ ರೀತಿ ಮುಂದುವರೆಯಲಿ ಎಂದು ಹಾರೈಸಿ ಆಶೀರ್ವದಿಸಿದರು.
ಚಿಂತಕುಂಟೆ ವಂಶಸ್ಥರಾದ ತುಮಕೂರಿನ ಸಿ ಎಸ್ ಬಸವರಾಜು ಮತ್ತು ಅವರ ಸಹೋದರರು, ಸಹೋದರಿಯರು ಹಾಗೂ ಆಂಧ್ರಪ್ರದೇಶ ಮತ್ತು ಕರ್ನಾಟಕದ ಎಲ್ಲ ವಂಶಸ್ಥರೊಂದಿಗೆ ಪರಸ್ಪರ ಸೌಹಾರ್ದ ಸಂಬಂಧ ವೃದ್ದಿಗೆ ಮಾತುಕತೆ ನಡೆಸಿ, ಭೋಜನಕೂಟ ಏರ್ಪಡಿಸಿ ಸಂಭ್ರಮಿಸಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











