ಬೆಂಗಳೂರು : ಇರಾನ್ – ಇಸ್ರೇಲ್ ವಾರ್ ನಿಂದಾಗಿ ಹಲವು ದೇಶಗಳು ಸಮಸ್ಯೆಯನ್ನ ಎದುರಿಸುತ್ತಿವೆ. ಅದರಲ್ಲಿ ಭಾರತವೂ ಕೂಡ ಒಂದು. ಅದರಲ್ಲೂ ರಾಜ್ಯದಲ್ಲೂ ಯುದ್ಧದ ಬಿಸಿ ತಟ್ಟಿದೆ. ಗ್ಯಾಸ್ ಸಮಸ್ಯೆಗಂತು ಮುಕ್ತಿ ಸಿಕ್ಕಿಲ್ಲ. ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯ ನಡುವೆ, ಅಡುಗೆ ಎಣ್ಣೆಗೂ ಸಮಸ್ಯೆಯಾಗುವ ಸಾಧ್ಯತೆ ಕಾಣಿಸ್ತಾ ಇದೆ. ಇದೀಗ ನಂದಿನಿ ಉತ್ಪನ್ನಗಳಲ್ಲೂ ಏರಿಕೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಬಮುಲ್ ಅಧ್ಯಕ್ಷ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಏನು ಸಮಸ್ಯೆ ಆಗ್ತಾ ಇದೆ, ಏನು ಸಮಸ್ಯೆ ಆಗ್ತಾ ಇಲ್ಲ ಅನ್ನೋದು ಕೇಂದ್ರ ಸರ್ಕಾರಕ್ಕೆ ಗೊತ್ತು. ಒಟ್ಟಾರೆಯಾಗಿ ಇದೇ ರೀತಿಯ ಪರಿಸ್ಥಿತಿ ಮುಂದುವರೆಯಿತು ಅಂದ್ರೆ ಬಹಳ ದೊಡ್ಡ ಪರಿಣಾಮವನ್ನ ನಾವೂ ಎದುರಿಸಬೇಕಾಗುತ್ತದೆ. ಜೊತೆಗೆ ಬೆಲೆ ಏರಿಕೆಯ ಬಿಸಿ ಇಡೀ ಭಾರತ ದೇಶಕ್ಕೆ ತಟ್ಟುತ್ತದೆ. ಈಗಾಗಲೇ ತಟ್ಟಿದೆ ಕೂಡ. ಎಲ್ಲಾ ಪ್ರಾಡಕ್ಟ್ ಗಳ ಮೇಲೂ ಕೂಡ ಹೆಚ್ಚಳವಾಗಿದೆ. ಇನ್ನು ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡು ಬೆಲೆ ಏರಿಕೆ ಮಾಡುತ್ತಿದ್ದಾರೆ.

ಹೊಟೇಲ್ ಗಳಲ್ಲೂ ಹಾಗೇ ಆಗಿದೆಯಲ್ಲ. ನಾವೂ ಇಂಪೋರ್ಟ್ ಮಾಡ್ತಾ ಇರುವಂತ ವಸ್ತುಗಳ ಮೇಲೆ ಪರಿಣಾಮ ಬೀರಿದೆ. ನಮ್ಮ ಹಾಲು ಒಕ್ಕೂಟಕ್ಕೂ ಸಂದೇಶವನ್ನ ಕೊಟ್ಟಿದ್ದಾರೆ. ಗ್ಯಾಸ್ ಬಳಕೆ ಮಾಡ್ತಾ ಇದ್ದೀರಾ ಅದರಲ್ಲಿ 55% ಉಪಯೋಗಿಸಿ. ಒಂದ್ವೇಳೆ 100% ಬೇಕು ಅಂದ್ರೆ 30% ಅಡಿಷನಲ್ ಕಾಸು ನೀಡಿ ಅಂತ. ಅದರ ಅರ್ಥ ಬೆಲೆ ಏರಿಕೆಗೆ ನಾಂದಿ ಹಾಡಿದಂತೆಯೇ ಸರಿ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ ದರ ಏರಿಕೆಯದ್ದೆ ಚಿಂತೆ ಎಂದು ಹೇಳುವ ಮೂಲಕ ಮುಂದಿನ ದಿನಗಳಲ್ಲಿ ನಂದಿನಿ ಉತ್ಪನ್ನಗಳ ಮೇಲೂ ದರ ಏರಿಕೆಯ ಸುಳಿವು ಕೊಟ್ಟಿದ್ದಾರೆ.












