ಇಬ್ಬರು ನಾಯಕರು ಮುಖಾಮುಖಿಯಾಗಿದ್ದೆ ತಪ್ಪಾ : ಬಿಎಸ್ವೈ, ಸಿದ್ದು ಭೇಟಿಗೆ ವಿ ಸೋಮಣ್ಣ ಪ್ರತಿಕ್ರಿಯೆ

suddionenews
1 Min Read

ಮೈಸೂರು: ಉತ್ತರ ಕರ್ನಾಟಕದತ್ತ ಪಯಣ ಬೆಳೆಸಿದ್ದ ಮಾಜಿ ಸಿಎಂ ಗಳಾದ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಏರ್ಪೋರ್ಟ್ ನಲ್ಲಿ ಮುಖಾ ಮುಖಿಯಾಗಿದ್ದರು. ಈ ವೇಳೆ ರಾಜ್ಯಸಭಾ ಚುನಾವಣೆಯ ಬಗ್ಗೆ ಚರ್ಚಿಸಿದ್ದಾರೆಂದು ಗುಲ್ಲೆದ್ದಿತ್ತು. ಇದೀಗ ಆ ಬಗ್ಗೆ ಸಚಿವ ವಿ ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಇಬ್ಬರು ನಾಯಕರು ಸೌಹಾರ್ಧಯುತವಾಗಿ ಭೇಟಿ ಮಾಡಿದ್ದಾರೆ. ಇಬ್ಬರು ಆಕಸ್ಮಿಕವಾಗಿಯೂ ಭೇಟಿಯಾಗಬಾರದಾ ಎಂದು ಪ್ರಶ್ನಿಸಿದ್ದಾರೆ. ಅವರಿಬ್ಬರ ಆಕಸ್ಮಿಕ ಭೇಟಿಯನ್ನು ಯಾರೋ ವಿಡಿಯೋ ಮಾಡಿ, ಅದನ್ನು ಹೊರಗಡೆ ಬಿಟ್ಡಿದ್ದಾರೆ.

ಇಬ್ಬರು ನಾಯಕರು ರಾಜ್ಯಸಭಾ ಚುನಾವಣೆ ವಿಚಾರವನ್ನು ಮಾತನಾಡಿಲ್ಲ. ಸಿದ್ದರಾಮಯ್ಯ, ಯಡಿಯೂರಪ್ಪ ಭೇಟಿಗೆ ಬೇರೆ ಅರ್ಥ ಕಲ್ಪಿಸಬೇಡಿ. ಇಬ್ಬರು ಕೂಡ ಒಳ್ಳೆಯ ನಾಯಕರು. ಕೆಲವರ ನಂಬಿಕೆಗಳಿಗೆ ಅಪಮಾನ ಮಾಡುವುದು ಸರಿಯಲ್ಲ. ಹಾದಿ ಬೀದಿ ಜಗಳವಾಗಬಾರದು ಸುಖಾಂತ್ಯವಾಗಬೇಕು ಎಂದು ವಿ ಸೋಮಣ್ಣ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *