Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿಜಯ್ ರಾಘವೇಂದ್ರ – ಸ್ಪಂದನಾಗೆ ಮದುವೆ ವಾರ್ಷಿಕೋತ್ಸವದ ದಿನ : ಪತ್ನಿ ಇಲ್ಲದ ನೋವಲ್ಲಿ ಚಿನ್ನಾರಿ ಮುತ್ತ ಭಾವುಕ ಪೋಸ್ಟ್…!

Facebook
Twitter
Telegram
WhatsApp

 

ಬೆಂಗಳೂರು: ಹಾರ್ಟ್ ಅಟ್ಯಾಕ್ ನಿಂದಾಗಿ ಸ್ಪಂದನಾ ವಿದೇಶದಲ್ಲಿ ನಿಧನರಾದರು. ಬೆಂಗಳೂರಿಗೆ ಮೃತದೇಹ ತಂದು ಎಲ್ಲಾ ಕಾರ್ಯಗಳನ್ನು ಮುಗಿಸಿದ್ದು ಆಗಿದೆ. ಸ್ಪಂದನಾ, ವಿಜಯ್ ರಾಘವೇಂದ್ರ ಅವರನ್ನ ತುಂಬಾ ಆವರಿಸಿಬಿಟ್ಟಿದ್ದಾರೆ. ಪತ್ನಿಯ ಅಗಲಿಕೆಯ ನೋವಲ್ಲಿಯೇ ಹನ್ನೊಂದನೇ ದಿನದ ಕಾರ್ಯ ಮುಗಿದ ಮೇಲೆ ಒಂದು ಪೋಸ್ಟ್ ಹಾಕಿದ್ದರು. ನಾನೆಂದು ನಿನ್ನವ.. ಕೇವಲ ನಿನ್ನವ ಎಂದು. ಇಂದು ವಿವಾಹ ವಾರ್ಷಿಕೋತ್ಸವದ ದಿನ. ಆದ್ರೆ ಅದನ್ನ ಸಂಭ್ರಮಿಸುವ ಸಂತಸ ವಿಜಯ್ ಗಿಲ್ಲ. ವಿಧಿ ಸಂತಸಕ್ಕೂ ಮುನ್ನವೇ ಸ್ಪಂದನಾರನ್ನ ಕರೆದುಕೊಂಡು ಹೋಗಿದೆ.

ಪತ್ನಿ ಎಂದರೆ ಅದೆಷ್ಟು ಪ್ರೀತಿ ಅನ್ನೋದನ್ನ ವಿಜಯ್ ರಾಘವೇಂದ್ರ ಅದಾಗಲೇ ಸಾಕಷ್ಟು ಸಲ ಹೇಳಿದ್ದಾರೆ. ಅವರ ಸೋಷಿಯಲ್ ಮೀಡಿಯಾ ನೋಡಿದರೂನು ಅವರಿಬ್ಬರ ನಡುವೆ ಅದೆಷ್ಟು ಅಗಾಧ ಪ್ರೀತಿ ಇತ್ತು ಅನ್ನೋದು ತಿಳಿಯುತ್ತೆ. ಇಬ್ಬರ ಪ್ರೀತಿ ಸಂಕೇತವಾಗಿ ಮುದ್ದಾದ ಮಗ ಶೌರ್ಯನಿದ್ದಾನೆ. ಶೌರ್ಯನ ಬಗ್ಗೆ ಗಂಡ – ಹೆಂಡತಿಗೆ ಅಪಾರವಾದ ಕನಸಿತ್ತು. ಆ ಕನಸಿಗೆ ಈಗ ವಿಜಯ್ ರಾಘವೇಂದ್ರ ಒಬ್ಬರೇ ಹೆಗಲ ಕೊಡಬೇಕಿದೆ. ಸ್ಪಂದನಾ ಇಂದು ಇದ್ದಿದ್ದರೆ, 16ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನ ಅದ್ದೂರಿಯಾಗಿ ಆಚರಿಸುತ್ತಾ ಇದ್ದರು. ಸ್ಪಂದನಾ ನೆನಪಲ್ಲಿ ವಿಜಯ್ ರಾಘವೇಂದ್ರ ಭಾವುಕರಾಗುವಂತ ಪೋಸ್ಟ್ ಹಂಚಿಕೊಂಡಿದ್ದಾರೆ.

https://www.instagram.com/reel/CwZYJmtM0yV/?igshid=MzRlODBiNWFlZA==

“ಇಣುಕು ನೋಟ ಬೀರಿ ಹೋದೆ ಬದುಕಿನ ಅಂಗಳದಲ್ಲಿ. ಎಲ್ಲೆ ಮೀರಿ ಒಲವ ನೀಡಿದೆ‌ ಎದೆಯ ಅಂತರಾಳದಲಿ. ಬದುಕನ್ನು ಕಟ್ಟಿ ಸರ್ವಸ್ವವಾದೆ. ಉಸಿರಲಿ ಬೆರೆತು ಜೀವಂತವಾದೆ. ಮುದ್ದಾದ ನಗುವಿನಲ್ಲಿದ್ದ ಶಕ್ತಿ ಪರ್ವತದಷ್ಟು. ಮರೆಯದೆ, ತೊರೆಯದೆ ಎದೆಗೊತ್ತಿ ಪ್ರೀತಿಸುವೆ. ಶೌರ್ಯನಲ್ಲಿ ನಾನಿನ್ನ ಬಿಗಿದಪ್ಪುವಷ್ಟು” ಎಂದು ತಮ್ಮದೇ ಧ್ವನಿಯಲ್ಲಿ ಒಂದು ವಿಡಿಯೋ ಮಾಡಿ ಹಾಕಿದ್ದಾರೆ.

 

Facebook
Twitter
Telegram
WhatsApp
suddionenews

suddionenews

Leave a Comment

Top Stories

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಜೂನ್ 3 ರಂದು ಮತದಾನ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ. ಮೇ.03: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4615 ಮತದಾರರು ಇದ್ದು , ಜೂನ್ 3 ರಂದು ಮತದಾನ ಜರುಗಲಿದೆ ಎಂದು ಆಗ್ನೇಯ

ಚಿತ್ರದುರ್ಗದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿದ ಏಕನಾಥೇಶ್ವರಿ ಅಮ್ಮನವರ ಮೆರವಣಿಗೆ ಮತ್ತು ಗ್ರಾಮ ದೇವತೆ ಬರಗೇರಮ್ಮನವರ ಮೆರವಣಿಗೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 03 : ಏಕನಾಥೇಶ್ವರಿ ಅಮ್ಮನ ಮೆರವಣಿಗೆ ನಗರದ ರಾಜಬೀದಿಗಳಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಕೋಟೆ

ನೇಹಾ ಹತ್ಯೆ ವೇಳೆ ನೆರವಿಗೆ ಧಾವಿಸಿದ ಜೋಶಿ ವಿರುದ್ಧ ಪ್ರಚಾರ ಮಾಡ್ತಿದ್ದೀರಾ ಎಂದು ಕೇಳಿದ್ದಕ್ಕೆ ನೇಹಾ ತಂದೆ ಏನಂದ್ರು..?

ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ನಡೆದಿದ್ದು, ಈಗ ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯವೂ ನಡೆಯುತ್ತಿದೆ. ಹುಬ್ಬಳ್ಳಿ ಧಾರವಾಢ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನೋದ್ ಸೂಟಿ ಸ್ಪರ್ಧೆ ಮಾಡಿದ್ದು ಅದಕ್ಕೆ ವಿರುದ್ಧ

error: Content is protected !!