Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವರ್ತೂರು ಪ್ರಕಾಶ್ ಸ್ನೇಹಿತೆ ಕೇವಲ ಬೆಂಗಳೂರಲ್ಲ, ಶಿವಮೊಗ್ಗದ ಜ್ಯುವೆಲ್ಲರಿ ಶಾಪ್ ಗೂ ಕನ್ನ..!

---Advertisement---

ಬೆಂಗಳೂರು: ವರ್ತೂರು ಸ್ನೇಹಿತೆ ಶ್ವೇತಾ ಗೌಡ ವಂಚನೆ ಮಾಡಿರುವುದು ದಿನೇ ದಿನೇ ಬಯಲಾಗುತ್ತಲೇ ಇದೆ‌. ಬೆಂಗಳೂರೊನ ಕಮರ್ಷಿಯಲ್ ಸ್ಟ್ರೀಟ್ ಹ್ಯುವೆಲ್ಲರಿ ಶಾಪ್ ಗೆ ಲಕ್ಷಾಂತರ ರೂಪಾಯಿ ವಂಚಿಸಿ ಅರೆಸ್ಟ್ ಆಗಿದ್ದಾರೆ. ಈಗ ಶಿವಮೊಗ್ಗದ ಜ್ಯುವೆಲ್ಲರಿ ಶಾಪ್ ಗೂ ಕನ್ನ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಶಿವಮೊಗ್ಗದ ಸುಭಾಷ್ ನಗರದಲ್ಲಿ ಪ್ರಗತಿ ಎಂಬ ಜ್ಯುವೆಲ್ಲರಿ ಶಾಪ್ ಇದೆ. ಆ ಶಾಪ್ ಮಾಲೀಕನಿಂದ 20 ಲಕ್ಷಕ್ಕೂ ಅಧಿಕ ಮಿತ್ತದ ಜ್ಯುವೆಲ್ಲರಿ ಪಡೆದು ಮೋಸ ಮಾಡಿದ್ದಾರೆ. ಈ ಸಂಬಂಧ ಬಾಲರಾಜ್ ದೂರು ಕೂಡ ನೀಡಿದ್ದಾರೆ. ಒಂದು ಸಲ ಪ್ರಗತಿ ಜ್ಯುವೆಲ್ಲರಿ ಮಾಲೀಕ ಬಾಲರಾಜ್ ಶೇಟ್ ಅವರನ್ನ ಸಂಜಯ್ ಬಾಫ್ನಾ ಮೂಲಕ ಭೇಟಿಯಾಗಿದ್ದಳಂತೆ. ಕೋಟಿ ಕೋಟಿ ಚಿನ್ನದ ವ್ಯವಹಾರ ಮಾಡುತ್ತೇನೆ. 250 ಗ್ರಾಮನ ಆಂಟಿಕ್ ಒಡವೆಯನ್ನ ಮಾಡಿಕೊಡಿ ಎಂದು ಕೇಳಿದ್ದಳಂತೆ. ಆದರೆ ಚಿನ್ನಾಭರಣ ಬೇಕು ಅಂತ ಹೇಳಿದವಳು ಮತ್ತೆ ಭೇಟಿಯಾಗಲು ಸಿಕ್ಕಿರಲಿಲ್ಲವಂತೆ. ಬಳಿಕ ಚಿನ್ನಾಭರಣವನ್ನು ಬಾಲರಾಜ್ ಶೇಟ್ ಕಳಯಹಿಸಿಕೊಟ್ಟಿದ್ದರಂತೆ. ಆಗಲೂ ಯಾರೂ ಚಿನ್ನಾಭರಣ ತೆಗೆದುಕೊಂಡಿರಲಿಲ್ಲವಂತೆ. ಶ್ವೇತಾಗೆ ಚಿನ್ನಾಭರಣದ ಫೋಟೋ ಕಳುಹಿಸಿದ್ದರಂತೆ.

ಆಗ ಈ ಒಡವೆಗಳು ನನಗೆ ಬೇಕು ಎಂದು ಹಠ ಮಾಡಿದ್ದರಂತೆ ಶ್ವೇತಾ. ಚಿನ್ನ ಪಡೆದು 9 ಲಕ್ಷಕ್ಕೆ ಎರಡು ಚೆಕ್ ಕೊಟ್ಟು ಉಳಿದ 4 ಲಕ್ಷದ 75 ಸಾವಿರ ರೂಪಾಯಿಯನ್ನು ಆರ್ಜಿಎಸ್ ಮಾಡುತ್ತೇನೆಂದು ಹೋದವಳದ್ದು ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಚೆಕ್ ಕೂಡ ಬೌನ್ಸ್ ಆಗಿವೆ. ಇದಾದ ಮೇಲೆ ಶ್ವೇತಾಳನ್ನ ಸಂಪರ್ಕ ಮಾಡಲು ಪ್ರಯತ್ನಿಸಿದರು ಪ್ರಯೋಜನವಾಗಿಲ್ಲ. ಅಷ್ಟರಲ್ಲಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಅರೆಸ್ಟ್ ಮಾಡಿದ್ದ ಸುದ್ದಿ ಬಂದಿದೆ. ಈಗ ಬಾಲರಾಜ್ ಕೂಡ ಪೊಲೀಸ್ ಕಂಪ್ಲೈಂಟ್ ನೀಡಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment