Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಚನಗಳು ದಿನನಿತ್ಯದ ಜೀವನದಲ್ಲಿ ಹಾಸು ಹೊಕ್ಕಾಗಿವೆ :  ಡಾ.ಶ್ರೀನಿವಾಸಶೆಟ್ಟಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜನವರಿ.23 : ವಚನಗಳು ಅಳಿಸಲ್ಲ. ದಿನನಿತ್ಯದ ಜೀವನದಲ್ಲಿ ಹಾಸು ಹೊಕ್ಕಾಗಿದೆ ಎಂದು ಡಾ.ಶ್ರೀನಿವಾಸಶೆಟ್ಟಿ ಹೇಳಿದರು.

ಗುರು ಪುಟ್ಟರಾಜ ಸಂಗೀತ ಸಭಾ ಮೈಸೂರು, ಚಿಲಿಪಿಲಿ ಸಂಗೀತ ಸಾಂಸ್ಕøತಿಕ ಕಲಾ ಅಕಾಡೆಮಿ ಇವರುಗಳ ಸಂಯುಕ್ತಾಶ್ರಯದಲ್ಲಿ ತಮಟಕಲ್ಲು ರಸ್ತೆಯಲ್ಲಿರುವ ಸರಿಗಮಪ ಸಂಗೀತ ಪಾಠಶಾಲೆಯಲ್ಲಿ ನಡೆದ ವಚನ ಗಾಯನ ಸ್ಪರ್ಧೆಯನ್ನು ತಬಲ ಬಾರಿಸುವ ಮೂಲಕ ಉದ್ಗಾಟಿಸಿ ಮಾತನಾಡಿದರು.

ಸಂಗೀತದಲ್ಲಿ ಎಲ್ಲರಿಗೂ ಆಸಕ್ತಿಯಿರುತ್ತದೆ. ಸಂಗೀತ ಹಾಡಲು ಗಂಟಲೇ ಇರಬೇಕೆಂದಿಲ್ಲ. ಆಸ್ವಾಧಿಸುವ ಕಿವಿಗಳಿದ್ದರೆ ಸಾಕು. ಹಿಂದೂಸ್ತಾನಿ ಸಂಗೀತವೆಂದರೆ ನನಗೆ ತುಂಬಾ ಇಷ್ಟ. ಸಮಾಜದಿಂದ ಎಲ್ಲಾ ತೆಗೆದುಕೊಂಡಿದ್ದೇವೆ. ಆದರೆ ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆಂದು ಯೋಚಿಸುವುದು ಮುಖ್ಯ. ಕೆ.ಆರ್.ಎಸ್. ಡ್ಯಾಂ ಕಟ್ಟುವಾಗ ಮೈಸೂರು ಮಹಾರಾಜರು ಹಾಗೂ ಅವರ ಪತ್ನಿ ಇಬ್ಬರು ಸೇರಿ ತಮ್ಮಲ್ಲಿದ್ದ ಬೆಳ್ಳಿ, ಬಂಗಾರ, ವಜ್ರ, ವೈಡೂರ್ಯಗಳನ್ನೆಲ್ಲಾ ಮಾರಿ ಸಾರ್ವಜನಿಕರಿಗೆ ಉಪಯೋಗ ಮಾಡಿದ್ದಾರೆ. ಸಂಗೀತಕ್ಕೆ ಎಲ್ಲರನ್ನು ತಲೆದೂಗಿಸುವ ಶಕ್ತಿಯಿದೆ ಎಂದರು.

ಡಾ.ಎ.ಎಲ್.ದೇಸಾಯಿ, ಭೀಮಾಶಂಕರ ಬಿದನೂರು, ಸುಜೀತ ಕುಲಕರ್ಣಿ, ರಿಜ್ವಾನ್ ಬುದ್ದಹಳ್ಳಿ, ಗಂಗಾಧರ್ ಇವರುಗಳು ವೇದಿಕೆಯಲ್ಲಿದ್ದರು. ವಚನ ಗಾಯನ ಸ್ಪರ್ಧೆಯಲ್ಲಿ ಗಗನ್ ಕೆರೆನಹಳ್ಳಿ ಪ್ರಥಮ, ಶಾಲೂಮ್ ದ್ವಿತೀಯ, ಮಾರುತಿ ಟಿ. ತೃತೀಯ ಬಹುಮಾನ ಪಡೆದುಕೊಂಡರು. ಮೈಲಾರಿ ಎಸ್.ತುರುವನೂರು, ರಿದಾ ಹಸನ್ ಇವರುಗಳು ಸಮಾಧಾನಕರ ಬಹುಮಾನ ಗಿಟ್ಟಿಸಿಕೊಂಡರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!