Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಉತ್ತರಾಖಂಡ ಸುರಂಗ ಕುಸಿತ ಪ್ರಕರಣ : ಹೆಜ್ಜೆ ಹೆಜ್ಜೆಗೂ ವಿಘ್ನ, ಮುಂದುವರೆದ ಕಾರ್ಯಾಚರಣೆ

---Advertisement---

ಸುದ್ದಿಒನ್ :  ಉತ್ತರಾಖಂಡದ ಉತ್ತರಕಾಶಿಯಲ್ಲಿ ಕುಸಿದಿರುವ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸುವ ಪ್ರಯತ್ನಕ್ಕೆ ಪ್ರತಿ ಹಂತದಲ್ಲೂ ಹಿನ್ನಡೆಯಾಗುತ್ತಿದೆ. ಸಂತ್ರಸ್ತರು ಕಳೆದ ಎರಡು ವಾರಗಳಿಂದ ಒಳಗೆ ಸಿಲುಕಿದ್ದಾರೆ. ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ ಇನ್ನೇನು ಕೆಲವೇ ಗಂಟೆಗಳಲ್ಲಿ ಅವರೆಲ್ಲರನ್ನೂ ರಕ್ಷಿಸಲಾಗುತ್ತದೆ ಎಂದು ಭಾವಿಸಿರುವಾಗಲೇ ಅನಿರೀಕ್ಷಿತ ಅಡಚಣೆಯಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. 

ಈ ಹಿನ್ನೆಲೆಯಲ್ಲಿ ರಕ್ಷಣಾ ತಂಡಗಳು ಕಾರ್ಮಿಕರನ್ನು ರಕ್ಷಿಸಲು ಹಲವು ಕಡೆಗಳಿಂದ ಅಗೆಯುವ (Drilling) ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ.  ಕಾರ್ಯಾಚರಣೆಯು ಅಂತ್ಯಗೊಳ್ಳುತ್ತಿರುವಾಗ ಕಾರ್ಮಿಕರ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಏಕಕಾಲದಲ್ಲಿ ಗಮನಹರಿಸಲಾಗುತ್ತಿದೆ.

ಆಗರ್ ಯಂತ್ರದ ಬ್ಲೇಡ್‌ಗಳು ಅವಶೇಷಗಳಡಿ ಸಿಲುಕಿದ್ದರಿಂದ ಸೋಮವಾರದಿಂದ ಕೈಯಾರೆ ಅಗೆಯಲು  (Mannual Drilling) ಆರಂಭಿಸಿದರು. ಒಟ್ಟು 60 ಮೀಟರ್ ಸುರಂಗದೊಳಗೆ ಹೋಗಬೇಕಾದಾಗ 48 ಮೀಟರ್ ವರೆಗೂ ಕಾರ್ಯಾಚರಣೆ ಸರಾಗವಾಗಿ ಸಾಗಿತ್ತು.ಆದರೆ
ಅನಿರೀಕ್ಷಿತವಾಗಿ ಬ್ಲೇಡ್‌ಗಳು ಒಡೆದು ಡ್ರಿಲ್ಲಿಂಗ್ ಮೆಷಿನ್ ಅವಶೇಷಗಳಲ್ಲಿ ಸಿಲುಕಿಕೊಂಡಿದೆ. ಇದರಿಂದಾಗಿ ಸಮಾನಾಂತರವಾಗಿ ಕೈಯಾರೆ ಅಗೆಯಲು (Mannual Drilling) ಪ್ರಾರಂಭಿಸಿದ್ದಾರೆ.

ಇದಕ್ಕಾಗಿ ದೆಹಲಿಯಿಂದ 11 ಜನರ ತಜ್ಞರ ತಂಡವನ್ನು ಕರೆತರಲಾಗಿದೆ. 800 ಮಿ.ಮೀ ಅಗಲವಾದ ಪೈಪ್ ಮೂಲಕ ಒಳಗೆ ಹೋಗಿ ಅವಶೇಷಗಳನ್ನು ತೆಗೆಯುತ್ತೇವೆ ಎಂದು ರಕ್ಷಣಾ ತಂಡ ತಿಳಿಸಿದೆ. ಇಬ್ಬರು ಅಥವಾ ಮೂವರು ಒಳಗೆ ಹೋಗಿ ಉಪಕರಣಗಳ ಸಹಾಯದಿಂದ ಅಡ್ಡಿ ಇರುವ ತ್ಯಾಜ್ಯಗಳನ್ನು ತೆಗೆದುಹಾಕುತ್ತಾರೆ. ಹಾಗೆ ತೆಗೆದ ತ್ಯಾಜ್ಯವನ್ನು ಚಕ್ರದ ವಾಹನಗಳ ಮೂಲಕ ಹೊರತೆಗೆಯಲಾಗುತ್ತದೆ.

ಈ ಕೈಯಾರೆ ಅಗೆಯುವ (Mannual Drilling) ಕಾರ್ಯಾಚರಣೆಯು ತುಂಬಾ ಕಠಿಣವಾದದ್ದು, ಗಣಿಗಾರಿಕೆಯ ಉತ್ಖನನದಲ್ಲಿ ನುರಿತ ಈ ತಜ್ಞರು ಇಲಿಗಳು ಬಿಲಗಳನ್ನು ಅಗೆಯುವಂತೆ ಕೊರೆಯಲಾಗುತ್ತದೆ.

ಸಮತಲ ಕೊರೆಯುವ ಕಾರ್ಯಾಚರಣೆಯು ಪುನರಾವರ್ತಿತ ಅಡೆತಡೆಗಳನ್ನು ಎದುರಿಸುತ್ತಿದ್ದಂತೆ, ರಕ್ಷಣಾ ತಂಡಗಳು ಲಂಬ ಕೊರೆಯುವ ಯೋಜನೆಯನ್ನು ಜಾರಿಗೆ ತಂದವು. ಈ ಯೋಜನೆಯ ಪ್ರಕಾರ 300 ಮೀಟರ್‌ನಿಂದ ಅಡ್ಡಲಾಗಿ ಕೊರೆಯುವುದನ್ನು ಒಳಗೊಂಡಿರುತ್ತದೆ ಮತ್ತು ನಂತರ ಲಂಬವಾಗಿ 86 ಮೀಟರ್‌ಗೆ ಕೊರೆಯುತ್ತದೆ.
31 ಮೀಟರ್‌ಗಳ ಕೊರೆತ ಪೂರ್ಣಗೊಂಡಿದೆ ಎಂದು ಗಡಿ ರಸ್ತೆಗಳ ಸಂಘಟನೆಯ ಮಾಜಿ ಮುಖ್ಯಸ್ಥ ಹರ್ಪಾಲ್ ಸಿಂಗ್ ಹೇಳಿದ್ದಾರೆ.

ಲಂಬ ಕೊರೆಯುವ ವಿಧಾನದಲ್ಲಿ ಒಂದು ಪ್ರಮುಖ ಸವಾಲು ಕ್ರಸ್ಟ್ ಅಥವಾ ಸುರಂಗ ಛಾವಣಿಯ ಮೂಲಕ ಕೊರೆಯುವುದು.
ರಕ್ಷಣಾ ತಂಡಗಳು ಹೊರಪದರವನ್ನು ತಲುಪಿದ ನಂತರ, ಅವರು ಸ್ವಲ್ಪ ದೂರದವರೆಗೆ ಅಡ್ಡಲಾಗಿ ಕೊರೆಯುತ್ತಾರೆ ಮತ್ತು ಅದರ ಕೆಳಗೆ ಸಿಕ್ಕಿಬಿದ್ದ ಕಾರ್ಮಿಕರಿಗೆ ಗಾಯವಾಗದಂತೆ ಅದರ ಮೂಲಕ ಕೊರೆಯುತ್ತಾರೆ.

ಸಟ್ಲೆಜ್ ಜಲ ವಿದ್ಯುತ್ ನಿಗಮದ ತಜ್ಞರು ಭಾನುವಾರದಿಂದ ಲಂಬ ಕೊರೆಯುವಿಕೆಯನ್ನು ಕೈಗೊಂಡಿದ್ದಾರೆ.
ಬಾರ್ಕೋಟ್‌ನಿಂದ ಸುರಂಗದ ಇನ್ನೊಂದು ತುದಿಯಲ್ಲಿ ಸಿಲುಕಿರುವ ಕಾರ್ಮಿಕರನ್ನು ತಲುಪಲು ರಕ್ಷಣಾ ತಂಡಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.
ಆದರೆ ಇದು ಬಹಳ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆ. ಸುಮಾರು 480 ಮೀಟರ್ ದೂರ ಕೊರೆಯಬೇಕಿದೆ. ಇದರ ಭಾಗವಾಗಿ ನಾಲ್ಕು ಸ್ಫೋಟಗಳು ನಡೆದಿವೆ.
ಇದುವರೆಗೆ 10 ಮೀಟರ್ ಮಾತ್ರ ಕೊರೆಯಲಾಗಿದೆ. ಸುರಂಗದ ಎಡಭಾಗದಲ್ಲಿ ಮಿನಿ ಸುರಂಗವನ್ನು ನಿರ್ಮಿಸುವುದು ಮತ್ತೊಂದು ಯೋಜನೆಯಾಗಿದೆ. ಈ ಮಿನಿ ಸುರಂಗವು ಸಿಲ್ಕ್ಯಾರಾ ಸುರಂಗಕ್ಕೆ ಸಮಾನಾಂತರವಾಗಿದೆ. ವಿಶ್ವಾಸಾರ್ಹ ಮೂಲಗಳ ಪ್ರಕಾರ ಈ ಸುರಂಗ 180 ಮೀಟರ್ ಉದ್ದ ಇರಲಿದೆ. ನಿರ್ಮಾಣವು 10 ರಿಂದ 15 ದಿನಗಳನ್ನು ತೆಗೆದುಕೊಳ್ಳುತ್ತದೆ.
ಮಂಗಳವಾರದಿಂದ ಸಂಬಂಧಿಸಿದ ಕಾಮಗಾರಿಗಳು ಆರಂಭವಾಗಲಿವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...