Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಇತ್ತಿಚೆಗೆ ಕಾರು ಖರೀದಿಸಿದ್ದ ತುಕಾಲಿ ಸಂತೋಷ್ : ಅಪಘಾತದಿಂದ ಆಟೋ ಚಾಲಕ ಸಾವು..!

---Advertisement---

 

ಕಾಮಿಡಿ ಪಾತ್ರಗಳ ಮನರಂಜಿಸಿದ್ದ ತುಕಾಲಿ ಸಂತೋಷ್ ಬಿಗ್ ಬಾಸ್ ಸೀಸನ್ 10 ಸ್ಪರ್ಧಿಯಾಗಿಯೂ ಜನ ಮನ ಗೆದ್ದಿದ್ದರು. ತಮ್ಮ ಹಾಸ್ಯದಿಂದಾನೇ ಫಿನಾಲೆ ತಲುಪಿದ್ದರು. ಬಳಿಕ ಕಲರ್ಸ್ ಕನ್ನಡದ ರಿಯಾಲಿಟಿ ಶೋ ಮೂಲಕವೇ ತಮ್ಮ ಜರ್ನಿ ಮುಂದುವರೆಸಿದ್ದಾರೆ. ಈ ಎಲ್ಲಾ ಯಶಸ್ಸಿನ ಅಲೆಯಲ್ಲಿರುವಾಗಲೇ ಇತ್ತೀಚೆಗೆ ಹೊಸ ಕಾರೊಂದನ್ನು ಖರೀದಿ ಮಾಡಿದ್ದರು. ಆ ಕಾರಿನ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕಿಯಾ ಶೋರೂಮಿನ ಗಾಡಿ ಅದಾಗಿತ್ತು. ಇದೀಗ ಅದೇ ಕಾರು ಅಪಘಾತಕ್ಕೆ ಈಡಾಗಿದೆ.

ತುಕಾಲಿ ಸಂತೋಷ್ ಕಾರು ಗುದ್ದಿ ಆಟೋ ಚಾಲಕ ಸಾವನ್ನಪ್ಪಿರುವ ಘಟನೆ ನಡೆದಿರುವುದು ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ. ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ತುಕಾಲಿ ಸಂತೋಷ್ ಅವರು ಕಾರಿನಲ್ಲಿ ಬರುವಾಗ ಈ ಘಟನೆ ನಡೆದಿದೆ.

ತುಕಾಲಿ ಸಂತೋಷ್ ಮೂಲತಃ ಹೊಳೆನರಸೀಪುರದವರು. ಯಾವುದೋ ಕೆಲಸಕ್ಕೆಂದು ತುಮಕೂರಿಗೆ ಹೋಗಿದ್ದರು. ತುಮಕೂರಿನಿಂದ ಹೊಳೆನರಸೀಪುರಕ್ಕೆ ಬರುವ ಹಾದಿಯಲ್ಲಿ ಈ ಘಟನೆ ನಡೆದಿದೆ. ತುಮಕೂರಿನಿಂದ ಕುಣಿಗಲ್ ತಲುಪಿದ್ದಾರೆ. ಅಲ್ಲಿಂದ ಕುರುಡಿಹಳ್ಳಿಗೆ ತೆರಳುತ್ತಿದ್ದಾಗ, ಆಟೋ ಚಾಲಕನಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಸೇರಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತುಕಾಲಿ ಸಂತೋಷ್ ಕಾರು ಯಾರು ಓಡಿಸುತ್ತಿದ್ದರು, ಅಪಘಾತವಾಗಲೂ ಆದ ಪ್ರಮಾದವೇನು ಎಂಬುದರ ಯಾವ ಮಾಹಿತಿಯೂ ಇನ್ನು ಲಭ್ಯವಾಗಿಲ್ಲ. ಆಟೋ ಚಾಲಕ ಮಾತ್ರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ಮೊಕದ್ದಮೆ ದಾಖಲಿಸಕೊಂಡು ತನಿಖೆ ನಡೆಸುತ್ತಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment