Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸರ್ಕಾರ ಡಿನ್ನರ್ ಕೂಟದಲ್ಲಿ ಮುಳುಗಿದೆ : ಚಿತ್ರದುರ್ಗದಲ್ಲಿ  ಆರ್. ಅಶೋಕ್ ಹೇಳಿಕೆ

---Advertisement---

ಸುದ್ದಿಒನ್, ಚಿತ್ರದುರ್ಗ, ನವೆಂಬರ್.26 : ವಿಪಕ್ಷ ನಾಯಕ ಆರ್ ಅಶೋಕ್ ಇಂದು ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ಬರ ಅಧ್ಯಯನ ನಡೆಸಿದ್ದಾರೆ. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಮಳೆ ಇಲ್ಲದೆ ಬರದಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಬರ ಸಮೀಕ್ಷೆ ಮಾಡಬೇಕು, ಮಾಡಿದ್ರು ಕೂಡ ಅದು ಅರೆಬೆಂದ ಸಮೀಕ್ಷೆ ಆಗಿದೆ. ಸರ್ಕಾರ ಯಾವುದೋ ಒಂದು ಆಪ್ ಬಿಟ್ಟಿದೆ. ಅದರಲ್ಲಿ ರೈತರ ಮಾಹಿತಿಯೇ ಇಲ್ಲ. ಸರ್ಕಾರ ಕಾಟಾಚಾರಕ್ಕೆ ಸಮೀಕ್ಷೆ ಮಾಡಿದೆ. ಪಕ್ಕದ ಆಂಧ್ರದಲ್ಲಿ ಹೊಸ ತಳಿ ಬಂದಿದೆ
ಆ ತಳಿಯನ್ನು ರೈತರಿಗೆ ಪರಿಚಯ ಮಾಡಬೇಕು ಎಂದರು.

ರಾಜ್ಯದಲ್ಲಿ ಬರ ಬಂದಿದೆ ಮಂತ್ರಿಗಳು ಪತ್ತೆ ಇಲ್ಲ, ಇತ್ತ ಮುಖ್ಯಮಂತ್ರಿಗಳು ಎಲ್ಲರೂ ಸಮೃದ್ಧಿ ಆಗಿದ್ದೇವೆ ಎಂದು ಪ್ರಚಾರ ಕೊಟ್ಟಿದ್ದಾರೆ. ರೈತರು ಎಲ್ಲಿ ನೆಮ್ಮದಿಯಾಗಿ ಇದ್ದಾರೆ.

ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿ ಇದ್ದಾರೆ ಎಂದು ಪ್ರಶ್ನೆ ಹಾಕಿದರು. ಸಿಎಂ ಇಳಿತಾರೋ, ಸಿಎಂ ಏರುತ್ತಾರೋ ಗೊತ್ತಿಲ್ಲ.
ಗ್ರಾಮ ಪಂಚಾಯಿತಿ ಎಲೆಕ್ಷನ್ ಅದಂಗೆ ಆಗಿದೆ. ಗೃಹ ಸಚಿವ ಡಾ ಜಿ ಪರಮೇಶ್ವರ್ ಮನೆಯಲ್ಲಿ ಡಿನ್ನರ್ ಕೂಟ ಮಾಡ್ತಾರೆ. ಸರ್ಕಾರ ಡಿನ್ನರ್ ಕೂಟದಲ್ಲಿ ಮುಳುಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

 

ಕೆಲವರು ಅಸಮಾಧಾನದಿಂದ ದುಬೈಗೆ ಹೋಗಿದ್ದಾರೆ. ಕೆಲವರು ಪರಿಹಾರ ನೀಡಿಲ್ಲ ಅಂದ್ರೆ ರಾಜೀನಾಮೆ ಅಂತ ಹೇಳ್ತಾರೆ
ಡಿಕೆಶಿ ಸಿಎಂ ಮಾಡಿ ಅಂತ ಹೇಳ್ತಾರೆ. ಅವರಲ್ಲೇ ಇಷ್ಟೆಲ್ಲಾ ಗೊಂದಲ ಇದೆ ಜನರ ಕಷ್ಟ ಇನ್ನೆಲ್ಲಿ ತಿಳಿಯುತ್ತೆ. ಸರ್ಕಾರದಲ್ಲಿ ಮುಕ್ತಿ ಕ್ಯಾಬಿನೆಟ್ ಆಗಿದೆ. ಕೇಸ್ ಇದ್ದವರಿಗೆ ಮುಕ್ತಿ ಕೊಡುವ ಕೆಲಸ ಮಾಡ್ತಿದೆ. ಬಳ್ಳಾರಿಯ ನಾಗೇಂದ್ರಗೆ ಮುಕ್ತಿ ಕೊಟ್ಬಿಡಿ, ಅವ್ರ ಮೇಲೆ 25 ಸಿಬಿಐ ಕೇಸ್ ಇದೆ ಮುಕ್ತಿ ಕೊಡಿ
ಮುಕ್ತಿಯ ಕ್ಯಾಬಿನೆಟ್ ಅಂತ ಬೋರ್ಡ್ ಹಾಕಿ, ಇತ್ತ ಗಣಿಧಣಿ ಜನಾರ್ದನ್ ರೆಡ್ಡಿಗೂ ಮುಕ್ತಿ ಕೊಡಿಸುವಂತೆ ಹೇಳಿದ್ದಾರೆ ಎಂದು ಮಾತಿನೂದ್ದಕ್ಕೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment