Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮತದಾನ ಮಾಡಿದ್ರೆ ಊಟ ಉಚಿತ ಎಂದಿದ್ದ ಹೊಟೇಲ್ ಗಳಿಗೆ ಎಚ್ಚರಿಕೆ ನೀಡಿದ ಚುನಾವಣಾ ಆಯೋಗ..!

---Advertisement---

ಬೆಂಗಳೂರು: ಮತದಾನವನ್ನು ಹೆಚ್ಚಿಸಲು, ಯುವ ಜನತೆಯನ್ನು ಉತ್ತೇಜಿಸಲು ಹೊಟೇಲ್ ಗಳು ಕೂಡ ಮುಂದಾಗಿದ್ದವು. ಅದೆಷ್ಟೋ ಜನ ಮತದಾನದ ದಿನ ರಜೆ ಇದ್ದರು ಕೂಡ ಮತದಾನ ಮಾಡುವುದಕ್ಕೇ ಆಸಕ್ತಿ ತೋರುವುದಿಲ್ಲ. ಹೀಗಾಗಿ ಕೆಲವೊಂದು ಹೊಟೇಲ್ ಗಳು ಉಚಿತ ಊಟದ ಆಫರ್ ನೀಡಿದ್ದವು. ಆ ರೀತಿಯ ಹೊಟೇಲ್ ಗಳಿಗೆ ಚುನಾವಣಾ ಆಯೋಗ‌ ಎಚ್ಚರಿಕೆ ನೀಡಿದೆ‌. ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದೆ.

ಚುನಾವಣಾ ದಿನಾಂಕ ಅನೌನ್ಸ್ ಆದಾಗಿನಿಂದ ಅಂದ್ರೆ ಮಾರ್ಚ್ 29ರಿಂದ ನೀತಿ ಸಂಹಿತೆ ಜಾರಿಯಲ್ಲಿದೆ. ನಾಳೆ ಮತದಾನ ಮಾಡಿ ಬಂದವರಿಗೆ ಊಟ, ಪಾನೀಯ ಉಚಿತ ಎಂದು ಹಲವು ಹೊಟೇಲ್ ಗಳು ಬೋರ್ಡ್ ಹಾಕಿದ್ದು, ಇದು ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ ಎನ್ನಲಾಗಿದೆ.

ಕೆಪವೊಂದು ಹೊಟೇಲ್, ರೆಸ್ಟೋರೆಂಟ್ ಗಳು ಕೂಡ ಮತದಾನ ಬಂದವರಿಗೆ ಆಫರ್ ನೀಡಲು ಮುಂದಾಗಿದ್ದರಿಂದ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದೆ. ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು ಕಾನೂನು ಕ್ರಮಕ್ಕೆ ಮುಂದಾಗಿದೆ. ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...