ಅವರ ಬಗ್ಗೆ ಮಾತಾಡಿದ್ರೆ ಸತ್ತ ಹಾವನ್ನು ಬಡಿದೆಬ್ಬಿಸಿದಂತೆ : ಸುಧಾಕರ್ ವಿರುದ್ಧ ಕೆಂಪಣ್ಣ ಆರೋಪ

1 Min Read

ಚಿಕ್ಕಬಳ್ಳಾಪುರ: ಅಂತರ ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಅವರು ಇದೀಗ ಮತ್ತೊಂದು ಸ್ಪೋಟಕ ಆರೋಪ ಮಾಡಿದ್ದಾರೆ. ಅದು ಮಾಜಿ ಸಚಿವ ಡಾ. ಸುಧಾಕರ್ ವಿಚಾರವಾಗಿ ಈ ಆರೋಪ ಮಾಡಿದ್ದಾರೆ. ಸುಧಾಕರ್ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹೇಳುತ್ತಿದ್ದರು. ತಾಕತ್ ಇದ್ದರೆ ಕೇಸ್ ಹಾಕಿ ಎಂದಿದ್ದೆ.

ಮಾಜಿ ಸಚಿವ ಸುಧಾಕರ್ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದಾರೆ. ಸುಧಾಕರ್ ವಿಷಯ ಈಗ ಮಾತನಾಡಿ ಪ್ರಯೋಜನವಿಲ್ಲ. ಯಾಕಂದ್ರೆ ಅವರು ಈಗ ಸೋತು ಸುಣ್ಣವಾಗಿದ್ದಾರೆ. ಈಗ ಅವರನ್ನು ಮಾತನಾಡಿಸಿದರೆ ಸತ್ತ ಹಾವನ್ನು ಹೊಡೆದು ಎಬ್ಬಿಸಿದಂತೆ ಆಗುತ್ತದೆ.

ನನ್ನ ಮೇಲೆ ಅವರು ಈವರೆಗೂ ಯಾವ ಮೊಕದ್ದಮೆಯನ್ನು ಹಾಕಿಲ್ಲ. ನಾವೂ ವೈಯಕ್ತಿಕವಾಗಿ ಏನೇನು ಸಮಸ್ಯೆಗಳನ್ನು ಎದುರಿಸಿದ್ದೇವೆ ಅನ್ನೋದು ನಮಗೆ ಮಾತ್ರ ಗೊತ್ತು. ಇಂದು ಸುಧಾಕರ್ ಬಗ್ಗೆ ನಾನು ಏನು ಮಾತನಾಡುವುದಿಲ್ಲ ಎಂದಿದ್ದಾರೆ.

ಇನ್ನು ಗುತ್ತುಗೆದಾರ ಕೆಂಪಣ್ಣ ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದರು. ಈ ವಿಚಾರವನ್ನು ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ವಿರೋಧ ಮಾಡಿತ್ತು. ದೊಡ್ಡ ಚರ್ಚೆಯೇ ಆಗಿತ್ತು. ಇದೀಗ ಸುಧಾಕರ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *