Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಲರಾಮನ ಹಣೆಗೆ ಸೂರ್ಯತಿಲಕ : ಅದ್ಬುತ ದೃಶ್ಯಕ್ಕೆ ಸಾಕ್ಷಿಯಾದ ಅಯೋಧ್ಯೆ : ವಿಡಿಯೋ ನೋಡಿ…!

Facebook
Twitter
Telegram
WhatsApp

ಸುದ್ದಿಒನ್ : ದೇಶಾದ್ಯಂತ ಜನರು ಶ್ರೀ ರಾಮನವಮಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ.  ಈ ಬಾರಿಯ ರಾಮನವಮಿ ಬಹಳ ವಿಶೇಷ. ಏಕೆಂದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಂತರ ಇದೇ ಮೊದಲ ರಾಮನವಮಿಯನ್ನು ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಬಾಲರಾಮನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ಸಮಯದಲ್ಲಿ ಸ್ವತಃ ಸೂರ್ಯದೇವನೇ ರಾಮಲಾಲನಿಗೆ ಅಭಿಷೇಕ ಮಾಡಿದ್ದಾನೆ. ಈ ಕ್ಷಣವನ್ನು ನೋಡಿ ಇಡೀ ದೇಶವೇ ಪುಳಕಿತವಾಗಿದೆ. ದೇವಾಲಯದ ನಿರ್ಮಾಣದ ಅಂಗವಾಗಿ, ಅದ್ಭುತ ತಂತ್ರಜ್ಞಾನದ ಸಹಾಯದಿಂದ ರಚಿಸಲಾದ ವಿಜ್ಞಾನಿಗಳ ಪ್ರಯತ್ನವು ಫಲಪ್ರದವಾಗಿದೆ. ಸೂರ್ಯ ತಿಲಕ ಬಾಲರಾಮನಿಗೆ ಹಣೆಗೆ ಮುತ್ತಿಟ್ಟ ಕ್ಷಣವನ್ನು ಇಡೀ ರಾಷ್ಟ್ರವೇ ನೇರಪ್ರಸಾರದಲ್ಲಿ ನೋಡಿ ಕಣ್ತುಂಬಿಕೊಂಡಿದೆ. ಶ್ರೀರಾಮನವಿಯ ಇಂದಿನ ದಿನ ಸರಿಯಾಗಿ 12 ಗಂಟೆಗೆ ರಾಮಲಾಲನ ಹಣೆಯ ಮೇಲೆ ಸೂರ್ಯನ ಕಿರಣಗಳು ಬಿದ್ದು ಅಭಿಷೇಕವಾಯಿತು. ರಾಮಮಂದಿರದಲ್ಲಿ ನಡೆಯುತ್ತಿರುವ ರಾಮನವಮಿ ಆಚರಣೆಯ ನೇರ ಪ್ರಸಾರವನ್ನು ಮಾಡಲಾಯಿತು.

ರಾಮನವಮಿ ಪ್ರಯುಕ್ತ ರಾಮಮಂದಿರಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ರಾಮ ನವಮಿಯಂದು ಬೆಳಗಿನ ಜಾವ 3.30ಕ್ಕೆ ರಾಮಮಂದಿರದ ಬಾಗಿಲು ಭಕ್ತರಿಗೆ ತೆರೆಯಲಾಗಿತ್ತು. ರಾತ್ರಿ 11ರವರೆಗೆ ಭಕ್ತರಿಗೆ ರಾಮನ ದರ್ಶನಕ್ಕೆ ದೇವಸ್ಥಾನ ಟ್ರಸ್ಟ್ ವ್ಯವಸ್ಥೆ ಮಾಡಿದೆ. ಈ ಹಿನ್ನೆಲೆಯಲ್ಲಿ ದೇಗುಲದಲ್ಲಿ ಭಕ್ತರ ದಂಡೇ ಸೇರಿತ್ತು.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಶ್ರೀ ರಾಮ ನವಮಿ ಉತ್ಸವದ ನೇರ ಪ್ರಸಾರವನ್ನು ಏರ್ಪಡಿಸಿತ್ತು. ರಾಮ ಮಂದಿರದಲ್ಲಿ ರಾಮನವಮಿ ಆಚರಣೆಯ ನೇರ ಪ್ರಸಾರಕ್ಕಾಗಿ ಅಯೋಧ್ಯೆ ಮುನ್ಸಿಪಲ್ ಕಾರ್ಪೊರೇಷನ್ ಅಯೋಧ್ಯೆಯಾದ್ಯಂತ ಸುಮಾರು 100 ಎಲ್ಇಡಿ ಪರದೆಗಳನ್ನು ಅಳವಡಿಸಿತ್ತು.  ಅದರಲ್ಲಿ ಭಕ್ತರು ರಾಮನವಮಿ ಆಚರಣೆಗಳನ್ನು ನೇರವಾಗಿ ವೀಕ್ಷಿಸಬಹುದು. ಇದಲ್ಲದೆ, YouTube ಸೇರಿದಂತೆ ಟ್ರಸ್ಟ್‌ನ X ಖಾತೆಯಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ಸಹ ಮಾಡಲಾಗಿತ್ತು.

ಟ್ರಸ್ಟ್ ಹೊರಡಿಸಿದ ನಿಯಮಗಳು ಈ ಕೆಳಗಿನಂತಿವೆ.

– ಏಪ್ರಿಲ್ 16-18ರ ನಡುವೆ ರಾಮಲಾಲ ದರ್ಶನ, ಆರತಿಗಾಗಿ ವಿಶೇಷ ಪಾಸ್ ಬುಕ್ಕಿಂಗ್ ರದ್ದುಗೊಳಿಸಲಾಗಿದೆ.

– ಎಲ್ಲಾ ಭಕ್ತರು ರಾಮಮಂದಿರವನ್ನು ಪ್ರವೇಶಿಸಲು ಇತರ ಭಕ್ತರು (ವಿಐಪಿ ಭಕ್ತರು ಸಹ) ಅದೇ ನಿಯಮಗಳನ್ನು ಅನುಸರಿಸಬೇಕು.

– ಭಕ್ತರು ಇಂದು ರಾತ್ರಿ 11 ಗಂಟೆಯವರೆಗೆ ರಾಮಮಂದಿರಕ್ಕೆ ಬಂದು ರಾಮನ ದರ್ಶನ ಪಡೆಯಬಹುದು.

– ರಾಮಲಾಲಾ ದೇವಸ್ಥಾನವು ಇಂದು ಸುಮಾರು 20 ಗಂಟೆಗಳ ಕಾಲ ಭಕ್ತರಿಗೆ ತೆರೆದಿರುತ್ತದೆ.

– ದರ್ಶನದ ಸಮಯದಲ್ಲಿ ಭಕ್ತರು ತಮ್ಮ ಮೊಬೈಲ್ ಫೋನ್ ಮತ್ತು ಬೆಲೆಬಾಳುವ ವಸ್ತುಗಳನ್ನು ತರಬಾರದು ಎಂದು ಭಕ್ತರಿಗೆ ಸೂಚಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಂದು ಟೀಂ ಇಂಡಿಯಾದ ಉಪನಾಯಕನಾಗಿದ್ದ ಕೆ ಎಲ್ ರಾಹುಲ್ ಈ ಬಾರಿ ತಂಡದಿಂದಾನೇ ಔಟ್..!

ಟ20 ವೇಳೆ ಶ್ವಕಪ್ ಟೂರ್ನಿಗೆ ಆಟಗಾರರನ್ನು ಆಯ್ಕೆ ಮಾಡಲಾಗಿದ್ದಿ, ಕನ್ನಡಿಗ ಕೆ ಎಲ್ ರಾಹುಲ್ ಗೆ ಸ್ಥಾನವನ್ನೇ ನೀಡಿಲ್ಲ. ತಂಡಿದಿಂದ ಹೊರಗೆ ಉಳಿದಿದ್ದಾರೆ. ಈ ಬಾರಿಯ ಐಪಿಎಲ್ ಮ್ಯಾಚ್ ನೆಲ್ಲಾ ಯಾರೆಲ್ಲಾ ಉತ್ತಮ ಪ್ರದರ್ಶ‌

ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ಹಾಗೂ ರೇವಣ್ಣರಿಗೆ ನೋಟೀಸ್ ನೀಡಿದ ಎಸ್ಐಟಿ..!

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್ಐಟಿ ತನಿಖೆ ನಡೆಸುತ್ತಿದೆ. ವಿಡಿಯೋದಲ್ಲಿ ಗುರುತು ಸಿಕ್ಕವರನ್ನು ಕರೆಸಿ , ವಿಚಾರಣೆ ನಡೆಸುತ್ತಿದ್ದಾರೆ. ರಾಜಕೀಯ ನಾಯಕರ ಕೆಸೆರೆಚಾಟದ ನಡುವೆ ತನಿಖೆ ತೀವ್ರಗೊಂಡಿದೆ. ಎಡಿಜಿಪಿ ಬಿಜಯ್

ಚಿತ್ರದುರ್ಗ | ಮೇ 1ರಂದು ವಿದ್ಯುತ್ ವ್ಯತ್ಯಯ

ಚಿತ್ರದುರ್ಗ. ಏ.30: ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ ಪಂಡರಹಳ್ಳಿ ಲೈನ್‍ನ ಟ್ಯಾಪಿಂಗ್ ಪಾಯಿಂಟ್‍ನಿಂದ ಪಂಡರಹಳ್ಳಿ 66/11 ಕೆವಿ ವಿ.ವಿ ಕೇಂದ್ರದವರೆಗೆ ಡ್ರೇಕ್ ಕಂಡಕ್ಟರ್ ಬಳಸಿ ಉದ್ದೇಶಿತ 66 ಕೆವಿ ಲೈನ್ ಮತ್ತು ಕೊಯೊಟ್ ಕಂಡಕ್ಟರ್ ಬಳಸಿ

error: Content is protected !!