ಚಿತ್ರದುರ್ಗ: ಈ ರೀತಿ ಕಲುಷಿತ ಮನಸ್ಥಿತಿ ಇದ್ದವರಿಂದ ಮಾತ್ರ ಈ ರೀತಿಯ ಶಬ್ಧ ಬರುವುದಕ್ಕೆ ಸಾಧ್ಯ. ಹಾಗಾದ್ರೆ ಅವರ ಮಠ ಜಾತಿ ಮಠ ಅಲ್ವಾ..? ಇವತ್ತು ಪಂಚಮಸಾಲಿ ಪೀಠಗಳು ಉಗಮ ಆಗುವುದಕ್ಕೆ ಕಾರಣವೇನು ಏಮಬುದನ್ನ ಆತ್ಮವಲೋಕನ ಮಾಡಬೇಕು. ಈ ರೀತಿ ಒಂದು ಪೀಠದ ಜಗದ್ಗುರುಗಳಾದವರು, ಜಾತಿ ಮಠಗಳಿಂದ ಸಮಾಜ ಕಲುಷಿತವಾಗಿದೆ ಎಂದು ಹೇಳುವುದಕ್ಕೆ ನೈತಿಕ ಹಕ್ಕಿಲ್ಲ ಅವರಿಗೆ ಎಂದು ರಂಭಾಪುರಿ ಶ್ರೀಗಳಿಗೆ ತಿರುಗೇಟು ನೀಡಿದ್ದಾರೆ.
ಇಂದು ರಾಜ್ಯದಲ್ಲಿರುವ ಪ್ರತಿಯೊಂದು ಮಠಗಳು ಜಾತಿ ಪೀಠಗಳಾಗಿ ಉಳಿದಿಲ್ಲ ಅವು. ಜಾತ್ಯಾತೀತ ತತ್ವಗಳನ್ನ ಅಳವಡಿಸಿಕೊಂಡಿದ್ದಾವೆ. ಬಸವಣ್ಣನವರ ಕಾಯಕ, ದಾಸೋಹ, ಶಿವಯೋಗ ತತ್ವವನ್ನು ಅಳವಡಿಸಿಕೊಂಡು ಎಲ್ಲಾ ಜಾತಿಯ ಮಕ್ಕಳಿಗೆ ಶಿಕ್ಷಣ, ಅರಿವನ್ನು ಕೊಡ್ತಾ ಇದ್ದಾರೆ. ಇವತ್ತು ಜಾತಿ ಪೀಠಗಳು ಆಗುವುದಕ್ಕೆ ಕಾತಣವೇನು. ನಮ್ಮ ಪಂಚಮಸಾಲಿ ಪೀಠ ಆಗುವುದಕ್ಕೆ ಕಾರಣವೇನು. 2003ನೇ ಇಸವಿಯಲ್ಲಿ ನಾವೂ ಬೇಡರ ಜಂಗಮ, ಎಸ್ಸಿಗಳು ಅಂತ ಹೇಳಿ ವಾಜಪೇಯಿ ಹಾಗೂ ಅಡ್ವಾಣಿ ಅವರ ಹತ್ತಿರ ಹೋಗಿ ಪತ್ರವನ್ನು ಕೊಟ್ಟು ನಾವೂ ಲಿಂಗಾಯತರಲ್ಲ, ದಲಿತರು, ಬೇಡರ ಜಂಗಮದವರು ಅಂತ ಪ್ರಮಾಣ ಪತ್ರ ಕೇಳಿದ್ದರು ಪಂಚಪೀಠದವರು.
ಅವರು ಇಡೀ ವೀರಶೈವ ಲಿಂಗಾಯತರಿಗೆ ಮೀಸಲಾತಿ ಕೇಳಲಿಲ್ಲ ಅವರು, ಕೇಳಿದ್ದು ನಮ್ಮ ಜನಾಂಗಕ್ಕೆ ಅಂತ. ಇವತ್ತು ನಮ್ಮ ಜೊತೆಗೆ ರಾಜ್ಯದ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷರಾದ ಸೋಮನಗೌಡ ಪಾಟೀಲ್ ಇದಾರೆ. ಅವರು ಕೂಡ ನಮ್ಮ ಪಂಚಮಸಾಲಿ ಪೀಠದ ಸ್ಥಾಪನೆಗೆ ಮೂಲ ಕಾರ್ಯಕರ್ತರು. ಇಡೀ ರಾಜ್ಯದಲ್ಲಿ ವೀರಶೈವ ಲಿಂಗಾಯತ ಒಳಪಂಗಡಗಳಲ್ಲಿ 80 ಪ್ರತಿಶತ ಹೆಚ್ಚಿರುವ ಸಮುದಾಯದ ಪೀಠಗಳು ಅಂದ್ರೆ ಅದು ಪಂಚಮಸಾಲಿ ಪೀಠಗಳು ಎಂದಿದ್ದಾರೆ.









