ಎಸ್ ಎಂ ಕೃಷ್ಣ ಅವರು ಕೂಡ ಇದೆ ರೀತಿ ಮಾಡಿದ್ದರು.. ಆದ್ರೆ ಅವರ ಸ್ಥಿತಿ ಏನಾಯ್ತು : ಕುಮಾರಸ್ವಾಮಿ ಪ್ರಶ್ನೆ

suddionenews
1 Min Read

ಹಾಸನ: ರಾಜ್ಯದಲ್ಲಿ ಆಪರೇಷನ್ ಹಸ್ತದ ಸದ್ದು ಜೋರಾಗಿದೆ. ಲೋಕಸಭಾ ಚುನಾವಣೆಯನ್ನು ಟಾರ್ಗೆಟ್ ಇಟ್ಟುಕೊಂಡಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಿಂದ ಹಲವರನ್ನು ಕರೆ ತರುವ ಪ್ಲ್ಯಾನ್ ನಲ್ಲಿದೆ. ಈ ಆಪರೇಷನ್ ಹಸ್ತದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಚ್ ಡಿ ಕುಮಾರಸ್ವಾಮಿ, ಈ ಹಿಂದೆ ಎಸ್ ಎಂ ಕೃಷ್ಣ ಅವರ ಕಾಲದಲ್ಲೂ ಹೀಗೆ ಆಗಿತ್ತು. ಆದ್ರೆ ಈಗ ಅವರ ಪರಿಸ್ಥಿತಿ ಎಲ್ಲಿಗೆ ಬಂತು ನೋಡಿದ್ದೀರ ಅಲ್ವಾ ಎಂದಿದ್ದಾರೆ.

1990ರಿಂದಲೂ ಎಸ್ ಎಂ ಕೃಷ್ಣ ಅವರು ನಮ್ಮಿಂದ ಐದು ಜನ, ಬಿಜೆಪಿಯಿಂದ ಎಂಟತ್ತು ಜನರನ್ನು ಕರೆದುಕೊಂಡು ಹೋಗಿದ್ದರು. ನಂತರ ಅವರ ಸ್ಥಿತಿ ಎಲ್ಲಿಗೆ ಬಂತು. ನಂತರ ಬಿಜೆಪಿಯವರು ಆಪರೇಷನ್ ಕಮಲ ಮಾಡಿ 40 ಸೀಟ್ ಗೆ ತೃಪ್ತಿ ಪಡಬೇಕಾಯ್ತು. 2013-14ರಲ್ಲಿ ಸಿದ್ದರಾಮಯ್ಯ ಆಪರೇಷನ್ ಆಟವಾಡಿ 2018ರಲ್ಲಿ 78 ಕ್ಕೆ ಬಂದು ನಿಂತಿದ್ದರು. ಇತ್ತಿಚೀಗೆ ನಿಷ್ಠೆ ಎನ್ನುವುದು ಯಾವುದೇ ಪಕ್ಷಕ್ಕೂ ಉಳಿದಿಲ್ಲ. ಕೇವಲ ತಕ್ಷಣ ಸಿಗುವ ಅಧಿಕಾರಕ್ಕೆ ಮರುಳಾಗುತ್ತಾರೆ.

ಇನ್ಮು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿ, ಗ್ಯಾರಂಟಿ ಯೋಜನೆಯಿಂದ ಅದೆಷ್ಟು ಜನರಿಗೆ ಉಪಯೋಗವಾಗಿದೆ ಎಂದು ತಿಳಿಯುತ್ತಿಲ್ಲ. ಸಿಎಂ ಅದಾನಿ, ಅಂಬಾನಿಯವರ ಹಣವನ್ನು ಜನರಿಗೆ ಹಂಚುತ್ತೇನೆ ಎಂದಿದ್ದಾರೆ, ಆದರೆ ಗೃಹ ಜ್ಯೋತಿ ಹೆಸರಿನಲ್ಲಿ ಈಗಲೇ ಅನೇಕರಿಗೆ ಪಟ್ಟು ಬಿದ್ದಿದೆ. ಆಗಸ್ಟ್ ನಲ್ಲೇ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಆರಂಭವಾಗಿದೆ. ಯಾವುದೇ ಸಿದ್ಧತೆಗಳಿಲ್ಲದೆ ಅಘೊಷಿತವಾಗಿ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದರೆ. 120 ತಾಲೂಕಿನಲ್ಲಿ ಬರ ಪರಿಸ್ಥಿತಿ ಇದೆ ಎಂದ ಸರ್ಕಾರ ಗ್ಯಾರಂಟಿ ಯೋಜನೆಯ ವಿಜೃಂಭಣೆ ಬಿಟ್ಟು ರೈತರ ಬಗ್ಗೆ ಯೋಚನೆ ಮಾಡಲಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *