ತುಮಕೂರು: ಹೈಕಮಾಂಡ್ ನಾಯಕರ ಮತಗಳ್ಳತನದ ಹೋರಾಟಕ್ಕೆ ರಾಜಣ್ಣ ವಿರುದ್ಧವಾಗಿ ಮಾತಾಡಿದ್ದರ ಪರಿಣಾಮ ಸಚಿವ ಸ್ಥಾನವನ್ನ ಕಳೆದುಕೊಳ್ಳಬೇಕಾಯ್ತು. ಸಚಿವ ಸ್ಥಾನ ಹೋದರು ಕೂಡ ತುಮಕೂರಿನಲ್ಲಿ ಅವರಿಗಿರುವ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ಇಂದು ಶ್ರೀದೇವಿ ಕಾಲೇಜಿನಲ್ಲಿ ಕಾರ್ಯಕ್ರಮ ಒಂದರಲ್ಲಿ ಮಾತನಾಡುತ್ತಾ, ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಶಾಕಿಂಗ್ ಹೇಳಿಕೆಯನ್ನ ಹೊರ ಹಾಕಿದ್ದಾರೆ.
ಸಿದ್ದರಾಮಯ್ಯ ಅವರು 2013ರಲ್ಲಿ ಇದ್ದವರೆ ಬೇರೆ, ಈಗಿರುವ ಸಿದ್ದರಾಮಯ್ಯ ಅವರೇ ಬೇರೆ. ಅವರಿಗೆ ಬೇರೆ ಏನು ಒತ್ತಡಗಳಿವೆಯೋ ಏನೋ ಗೊತ್ತಿಲ್ಲ. ನನಗಿರುವ ಮಾಹಿತಿ ಪ್ರಕಾರ ಒಂದಷ್ಟು ಒತ್ತಡ ಇದೆ. ಸಿದ್ದರಾಮಯ್ಯ ಅವರ ಪುಣ್ಯದ ಕಾರ್ಯಕ್ರಮ ಅಂದ್ರೆ ಅದು ಅನ್ನಭಾಗ್ಯ ಕಾರ್ಯಕ್ರಮ ಎಂದು ಅಲ್ಲಿಯೂ ಕೊಂಡಾಡಿದ್ದಾರೆ.
ಕೆ.ಎನ್.ರಾಜಣ್ಣ ಅಂದ್ರೆ ಸಿಎಂ ಸಿದ್ದರಾಮಯ್ಯ ಅವರಿಗೆ ತುಂಬಾ ಆಪ್ತರು. ಹೈಕಮಾಂಡ್ ಸಚಿವ ಸ್ಥಾನದಿಂದ ತೆಗೆಯುವಂತೆ ಹೇಳಿದಾಗಲೂ, ಎಲ್ಲವನ್ನು ಸರಿ ಮಾಡುವುದಕ್ಕೆ ಸಿದ್ದರಾಮಯ್ಯ ಅವರು ಪ್ರಯತ್ನ ಮಾಡಿದ್ದರು ಎಂಬ ಮಾತಿದೆ. ಆದರೂ ಯಾವುದು ವರ್ಕ್ ಆಗಲಿಲ್ಲ, ಕಡೆಗೆ ಸಚಿವ ಸ್ಥಾನಕ್ಕೆ ಕುತ್ತು ಬಂತು. ಇದರ ಹೊರತಾಗಿಯೂ ರಾಜಣ್ಣ, ಸದಾ ಕಾಲ ಸಿದ್ದರಾಮಯ್ಯ ಅವರ ಪರವಾಗಿಯೇ ನಿಂತಿದ್ದಾರೆ. ಅವರ ಯೋಜನೆಗಳನ್ನ ಕೊಂಡಾಡಿದ್ದಾರೆ. ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಯಾರಾದ್ರೂ ಮಾತಾಡಿದ್ರೆ ಅಲ್ಲಿ ರಾಜಣ್ಣ ಧ್ವನಿ ಎತ್ತಿ ಮಾತಾಡ್ತಾ ಇದ್ರು. ಸಿಎಂ ಸ್ಥಾನ ಬದಲಾವಣೆ ಅಂದ್ರೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಇವರು ಚರ್ಚೆ ಶುರು ಮಾಡ್ತಾ ಇದ್ರು. ಹೀಗಾಗಿಯೇ ಡಿಕೆಶಿ ಬಣಕ್ಕೆ ರಾಜಣ್ಣ ಅಂದ್ರೆ ಕೊಂಚ ಬೇಸರ. ಇದೀಗ ಸಿಎಂ ಸಿದ್ದರಾಮಯ್ಯ ಅವರ ವಿಚಾರಕ್ಕೆ ರಾಜಣ್ಣ ಈ ರೀತಿ ಮಾತನಾಡಿದ್ದಾರೆ. ಒತ್ತಡದಿಂದ ಬದಲಾಗಿರಲು ಬಹುದು ಎಂಬ ರೀತಿ ಹೇಳಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.












