ಬೆಂಗಳೂರು : ವಿಷ್ಣುವರ್ಧನ್ ಸಮಾಧಿ ಅಭಿಮಾನ್ ಸ್ಟುಡಿಯೋದಲ್ಲಿ ಇದ್ದದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಅಂದಿನಿಂದ ಸ್ಮಾರಕ ಮಾಡಬೇಕು ಅಂತ ಅಭಿಮಾನಿಗಳು ಸಾಕಷ್ಟು ಹೋರಾಟ ಮಾಡಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ. ಕಡೆಗೆ ಸಮಾಧಿಯನ್ನೇ ಸಂಪೂರ್ಣವಾಗಿ ನೆಲಸಮ ಮಾಡಿದ್ದರು. ಈ ಘಟನೆಗೆ ಇಡೀ ಅಭಿಮಾನಿ ಬಳಗ ನೊಂದುಕೊಂಡಿದೆ. ಮತ್ತೆ ಕಾನೂನು ಹೋರಾಟ ಶುರು ಮಾಡಿದ್ದಾರೆ. ಇದೀಗ ಅಭಿಮಾನ್ ಸ್ಟುಡಿಯೋ ಸಂಬಂಧ ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದೆ.

ಅಭಿಮಾನ್ ಸ್ಟುಡಿಯೋದ ಇಡೀ ಜಾಗವನ್ನ ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ನಿರ್ಧಾರ ಮಾಡಿದೆ. ಸ್ಟುಡಿಯೋ ಇರುವಂತ ಜಾಗ ಅರಣ್ಯ ಅಂತ ಘೋಷಣೆ ಮಾಡಿದೆ. ಈ ಸಂಬಂಧ ಬೆಂಗಳೂರು ಡಿಸಿಗೆ ಐಎಫ್ಎಸ್ ಅಧಿಕಾರಿಯಿಂದ ಪತ್ರ ರವಾನೆಯಾಗಿದೆ. ಇದು ಅರಣ್ಯಕ್ಕೆ ಸೇರಿದ ಭೂಮಿ ಎಂದು ಆ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ಬಾಲಣ್ಣ ಕುಟುಂಬದವರು ಈ ಸಂಬಂಧ ಹೈಡ್ರಾಮವನ್ನೇ ಮಾಡಿದ್ದರು. ಒಬ್ಬರು ಜಾಗ ಕೊಟ್ಟರೆ ಇನ್ನೊಬ್ಬರು ಬಂದು ಕೇಸ್ ಹಾಕ್ತಾ ಇದ್ದರು. ಇದೀಗ ರಾಜ್ಯ ಸರ್ಕಾರ ಮಧ್ಯ ಪ್ರವೇಶ ಮಾಡಿದೆ. ಆ ಪತ್ರದಲ್ಲಿ 1970ರಲ್ಲಿ ಬಾಲಕೃಷ್ಣ ಅವರಿಗೆ ಭೂಮಿ ಮಂಜೂರಾಗಿತ್ತು. ಬಾಲಕೃಷ್ಣ ಅವರುಗೆ ಸ್ಟುಡಿಯೋ ನಿರ್ಮಾಣ ಮಾಡಿ ಅಂತ 20 ಎಕರೆ ಜಾಗವನ್ನು ಮಂಜೂರು ಮಾಡಿತ್ತು ಸರ್ಕಾರ. ಷರತ್ತಿನಂತೆ ಐದು ವರ್ಷದೊಳಗೆ ಅಲ್ಲಿ ಸ್ಟುಡಿಯೋ ನಿರ್ಮಾಣ ಮಾಡಬೇಕಿತ್ತು. ಆದರೆ ಅದು ಆಗಿರಲಿಲ್ಲ. 20 ವರ್ಷಗಳವರೆಗೆ ಯಾವುದೇ ಪರಭಾರೆ ಮಾಡುವಂತಿರಲಿಲ್ಲ. ಆದ್ರೆ ಬಾಲಕೃಷ್ಣ ಕುಟುಂಬ 12 ಎಕರೆಯನ್ನು ಮಾರಾಟ ಮಾಡಿತ್ತು. ಸರ್ಕಾರದ ನಿಯಮವನ್ನು ಉಲ್ಲಂಘನೆ ಮಾಡಿದೆ. ಇದೀಗ ರಾಜ್ಯ ಸರ್ಕಾರ ಸಂಪೂರ್ಣವಾಗಿ ಮುಟ್ಟುಗೋಕು ಹಾಕಿಕೊಂಡಿದೆ.














