ಸಹೋದರ ವಿಕ್ರಂ ಸಿಂಹ ಬಂಧನದ ಬಳಿಕ ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ಗರಂ

suddionenews
1 Min Read

ಸುದ್ದಿಒನ್, ಮೈಸೂರು, ಡಿಸೆಂಬರ್.31 : ಹಾಸನದಲ್ಲಿ ಮರಗಳ ಮಾರಣಹೋಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಅವರ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ವಿರುದ್ಧ ಗರಂ ಆಗಿದ್ದಾರೆ.

ಮಾನ್ಯ ಸಿದ್ದರಾಮಯ್ಯ ಅವರಿಗೆ ಸಾಷ್ಟಾಂಗ ನಮಸ್ಕಾರಗಳು. ಅವರನ್ನು ಶ್ಲಾಘನೆ ಮಾಡಬೇಕು ಎಂದುಕೊಂಡಿದ್ದೇನೆ. ತನ್ನ ಮಗನ ರಾಜಕೀಯ ಭವಿಷ್ಯ ಹಾಗೂ ಲೋಕಸಭೆಯಲ್ಲಿ ಮಗನನ್ನು ಗೆಲ್ಲಿಸಲು ಯಾರನ್ನು ಬೇಕಾದರೂ ತುಳಿಯುತ್ತಾರೆ. ಇದನ್ನ ಸಿದ್ದರಾಮಯ್ಯ ಅವರಿಂದ ಕಲಿಯಬೇಕು. ಇಂತಹ ತಂದೆ ಎಲ್ಲರಿಗೂ ಸಿಗುವುದಿಲ್ಲ. ನೀವೊಬ್ಬ ಬ್ರಿಲಿಯಂಟ್ ಫಾದರ್. ನಿಮ್ಮನ್ನು ಮೆಚ್ಚಿದೆ ನಾನು.

ನಿಮ್ಮನ್ನ ಮೆಚ್ಚಲು ಎರಡು ಕಾರಣಗಳಿವೆ. ಪ್ರತಾಪ್ ಸಿಂಹ ಅಡ್ಡಿಯಾಗುತ್ತಾರೆ ಎಂದು ಮುಗಿಸಲು ಮುಂದಾಗಿದ್ದಾರೆ. ನಿಮ್ಮಂತ ತಂದೆ ಪ್ರಪಂಚದಲ್ಲಿಯೇ ಸಿಗುವುದಿಲ್ಲ. ಎಲ್ಲಾ‌ಮಕ್ಕಳಿಗೂ ನಿಮ್ಮಂತ ತಂದೆ ಸಿಗುವುದಕ್ಕೆ ಸಾಧ್ಯವೇ ಇಲ್ಲ. ಮತ್ತೊಂದು ವಿಚಾರ ಅಂದ್ರೆ ನೀವೂ ಬ್ರಿಲಿಯಂಟ್ ಪೊಲಿಟಿಷಿಯನ್. ಬೆಳಗಾವಿಯಲ್ಲಿ ಹಿಂದುಳಿದ ಮಹಿಳೆಯನ್ನು ಬೆತ್ತಲೆ ಮೆರವಣಿಗೆ ಮಾಡಿದ್ದಾರೆ. ಆ ವಿಷಯವನ್ನು ಡೈವರ್ಟ್ ಮಾಡಲು‌ ನನ್ನ ವಿಚಾರ ಇಟ್ಟುಕೊಂಡಿದ್ದೀರಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಅವರನ್ನು ಪೊಲೀಸರು ಬಂಧಿಸಿದ ಬಳಿಕ ಅನಾರೋಗ್ಯಕ್ಕೆ ಈಡಾಗಿದ್ದಾರೆ. ಅರಣ್ಯ ಇಲಾಖೆ ಪೊಲೀಸರ ವಶದಲ್ಲಿರುವ ವಿಕ್ರಂ ಅವರಿಗೆ ಹೈಬಿಪಿ ಕಾಣಿಸಿಕೊಂಡಿದೆ. ಹಾಸನದ ವೈದ್ಯಕೀಯ ಭೋದಕ ಆಸ್ಪತ್ರೆಯಲ್ಲಿ ವಿಕ್ರಂ ಸಿಂಹ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಂದು ಗಂಟೆಗಳ ಕಾಲ ವಿಕ್ರಂ ಅವರಿಗೆ ರೆಸ್ಟ್ ಮಾಡಲು ಹೇಳಿದ್ದಾರೆ. ಬಳಿಕ ಮರಗಳ ಮಾರಣಹೋಮದ ವಿಚಾರಣೆ ನಡೆಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *