Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯತ್ನಾಳ್ ಬರೋದು ಬೇಡ ಅಂತ ವಿಜಯೇಂದ್ರ ಏನು ಹೇಳಿಲ್ಲರೀ : ಶ್ರೀರಾಮುಲು

---Advertisement---

 

ಬಾಗಲಕೋಟೆ: ಶಾಸಕ ಯತ್ನಾಳ್ ಅವರು ಹಿಂದೂ ಹುಲಿ ಅಂತಾನೇ ಫೇಮಸ್ ಆಗಿದ್ದಾರೆ. ಸದ್ಯ ಬಿಜೆಪಿಯಲ್ಲಿ ಇಲ್ಲ. ಆ ಬಗ್ಗೆ ಶ್ರೀರಾಮುಲು ಮಾತನ್ನಾಡಿದ್ದಾರೆ. ಬಹಳ ಮಂದಿ ಆ ರೀತಿ ಇದ್ದಾರೆ. ಬಿಜಾಪುರ, ಬಾಗಲಕೋಟೆ ಅಖಂಡ ಜಿಲ್ಲೆಗಳು. ಯಾರೂ ಇಲ್ಲ ಅಂತ ಅಲ್ಲ. ಈ ಭಾಗದಲ್ಲಿ ಅವರು ನಮ್ಮ ನಾಯಕರಿದ್ದಾರೆ, ಬನ್ನಿ ಅನ್ನೋದರಲ್ಲಿ ತಪ್ಪೇನಿದೆ. ಈಗ ಕರಾವಳಿ ಭಾಗದಲ್ಲಿ ಬೇರೆಯವರು ಕೇಳ್ತಾರಾ..? ಅಲ್ಲಿಗೆ ಬರ್ಲಿ ಅಂತಾರಾ ಎಂದು ಪ್ರಶ್ನೆ ಮಾಡಿದ್ದಾರೆ.

ನಾವೆಲ್ಲಾ ಸೇರಿ ಹಿಂದುತ್ವ ಉಳಿಸುವ ಕೆಲಸವಾಗಬೇಕು. ಮುಂದಿನ ದಿನಗಳಲ್ಲಿ ಭಾಗವತ್ ಧ್ಚಜವನ್ನು ಬಾಗಲಕೋಟೆಯಲ್ಲಿ ಹಾರಿಸೋಣಾ. ಈಗ ಬಿಜೆಪಿ ಕಮಲವನ್ನ ಬಾಗಲಕೋಟೆಯಲ್ಲಿ ಅರಳಿಸೋಣ. ಅಂದು ಕೂಡ ನಾವೂ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ನಮ್ಮ ನಾಯಕರೆಂದು ಒಪ್ಪಿಕೊಂಡಿದ್ದೇವೆ. ಇಂದು ಕೂಡ ಅವರು ನಮ್ಮ ನಾಯಕರೇ ಆದರೆ ಬೇರೆ ಬೇರೆ ಕಾರಣಗಳಿಂದ ಅವರು ಪ್ರಚಾರಕ್ಕೆ ಹೋಗೋದಾ ಬೇಡ್ವಾ ಅಂತ ಯೋಚಿಸುತ್ತಿರುವ ಕಾರಣ, ನಮ್ಮ ಬೇರೆ ಬೇರೆ ಕಾರ್ಯಕರ್ತರು ಅವರನ್ನು ಪ್ರಚಾರಕ್ಕೆ ಕರೆಯುತ್ತಿರುವ ಕಾರಣ, ಅವರು ಬಂದರೆ ನಮಗೆ ಒಂದು ರೀತಿಯ ಶಕ್ತಿಯೇ ಸರಿ.

ನಮ್ಮ ರಾಜ್ಯಾಧ್ಯಕ್ಷರಿಗೆ ಆ ರೀತಿ ಎಲ್ಲಾ ಏನು ಇಲ್ಲ. ಇವರು ಬರಬಾರದು, ಅವರು ಬರಬಾರದು ಎಂಬುದೆಲ್ಲ ಇಲ್ಲ. ಇಲ್ಲಿ ಸಂಗಮ ಸೇರಿದೆ. ಬಿಜೆಪಿಯಲ್ಲಿರುವ ಎಲ್ಲರೂ ಸೇರಿ ಇಲ್ಲಿ ಚುನಾವಣೆ ಮಾಡ್ತಾ ಇದ್ದೇವೆ. ನಮ್ಮ ಮನಸ್ಸಲ್ಲಿ, ನಮ್ಮ ಅಧ್ಯಕ್ಷರ ಮನಸ್ಸಲ್ಲಿ, ಇಲ್ಲಿ ಇರುವ ಎಲ್ಲರ ಮನಸ್ಸಲ್ಲೂ ಯತ್ನಾಳ್ ಅವರು ಬಂದರೆ ಪಾರ್ಟಿಗೆ ಲಾಭ ಆಗುತ್ತೆ ಅನ್ನೋದೆ ಇರುವುದು ಎಂಬ ಮಾತನ್ನ ಹೇಳಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...