Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಪ್ರೊ.ಡಿ.ಅಂಜಿನಪ್ಪ ಒಬ್ಬ ಪ್ರತಿಭಾವಂತ, ಮಿತ ಭಾಷಿ, ನಿಷ್ಟುರತೆಯ ಸ್ವಭಾವದ ಅಪರೂಪದ ವ್ಯಕ್ತಿ : ಡಾ.ಶಿವಲಿಂಗಪ್ಪ ಮೀರಾಸಾಬಿಹಳ್ಳಿ

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 26  : ಪ್ರೊ.ಡಿ.ಅಂಜಿನಪ್ಪನವರ ಅಕಾಲಿಕ ನಿಧನ ಸಾಹಿತ್ಯ ಲೋಕಕ್ಕೆ ದೊಡ್ಡ ನಷ್ಟ ಎಂದು ಜಾನಪದ ವಿದ್ವಾಂಸ ಡಾ.ಮೀರಾಸಾಬಿಹಳ್ಳಿ ಶಿವಣ್ಣ ನೊಂದು ನುಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಎಂ.ಜಯಣ್ಣ ಚಾರಿಟಬಲ್ ಟ್ರಸ್ಟ್, ಅರುಂಧತಿ ಪ್ರಕಾಶನ, ಪ್ರೊ.ಡಿ.ಅಂಜಿನಪ್ಪ ಒಡನಾಡಿಗಳು ವಿದ್ಯಾರ್ಥಿ ಬಳಗ ಇವರುಗಳ ಸಂಯುಕ್ತಾಶ್ರಯದಲ್ಲಿ ರೋಟರಿ ಬಾಲಭವನದಲ್ಲಿ ಏರ್ಪಡಿಸಲಾಗಿದ್ದ ಪ್ರೊ.ಡಿ.ಅಂಜಿನಪ್ಪ ಜೀವ ಚಿಗುರಿನ ಧ್ಯಾನ ನುಡಿನಮನ,ಕೃತಿಗಳ ಅವಲೋಕನ, ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.

ಪ್ರೊ.ಡಿ.ಅಂಜಿನಪ್ಪ ಆರು ವರ್ಷಗಳ ಅವಧಿಯಲ್ಲಿ ಐದು ಕೃತಿಗಳನ್ನು ಪ್ರಕಟಿಸಿರುವುದು ಸುಲಭದ ಕೆಲಸವಲ್ಲ. ಅನಾರೋಗ್ಯಕ್ಕೆ ತುತ್ತಾಗಿ ಎಲ್ಲರನ್ನು ಅಗಲಿರುವುದು ಬೇಸರ ತಂದಿದೆ. ಅವರ ಅಪ್ರಕಟಿತ ಕೃತಿಗಳನ್ನು ಕುಟುಂಬದವರು ನೀಡಿದರೆ ಪ್ರಕಟಗೊಳಿಸುತ್ತೇನೆ. ನನಗೆ ಪರಮಾತ್ಮ ಶಿಷ್ಯನಾಗಿದ್ದ ಪ್ರೊ.ಡಿ.ಅಂಜಿನಪ್ಪ ನನ್ನ ಮೇಲೆ ಅಪಾರವಾದ ಪ್ರೀತಿ ಗೌರವವಿಟ್ಟುಕೊಂಡಿದ್ದ. ಅದ್ಬುತವಾದ ವ್ಯಕ್ತಿತ್ವ ಆತನದು. ಬೆಂಗಳೂರಿನ ಸಿ.ವಿ.ಜಿ.ಪಬ್ಲಿಕೇಷನ್ ಚಂದ್ರು ಜಿಲ್ಲೆಯ ಅನೇಕ ಲೇಖಕರ ಪುಸ್ತಕಗಳನ್ನು ಪ್ರಕಟಿಸಿದ್ದಾರೆಂದು ಶ್ಲಾಘಿಸಿದರು.

ಸಾಹಿತಿ ಹಾಗೂ ಚಿಂತಕರಾದ ಡಾ.ಶಿವಲಿಂಗಪ್ಪ ಮೀರಾಸಾಬಿಹಳ್ಳಿ ಮಾತನಾಡಿ ಪ್ರೊ.ಡಿ.ಅಂಜಿನಪ್ಪ ಒಬ್ಬ ಪ್ರತಿಭಾವಂತ ಮಿತ ಭಾಷಿ, ನಿಷ್ಟುರತೆಯ ಸ್ವಭಾವ. ಗಮನಾರ್ಹವಾದ ಹೊಸತನದ ವಿಮರ್ಶಕ. ಅವರ ಕೃತಿಗಳನ್ನು ಓದಿದಾಗ ಬರವಣಿಗೆಯ ಎಂತಹ ಸಾಮರ್ಥ್ಯ ಶಕ್ತಿ ಇತ್ತು ಎನ್ನುವುದು ಗೊತ್ತಾಗುತ್ತದೆ. ಮಿಮರ್ಶಕನಿಗೆ ಮುಕ್ತಾಯವಿಲ್ಲದ ಅಧ್ಯಯನ ಬೇಕು. ಬರಹಗಾರನಿಗೆ ಹಾಗೂ ವಿಮರ್ಶಕನಿಗೆ ಸಾಮಾಜಿಕ ಹೊಣೆಗಾರಿಕೆಯಿರಬೇಕು. ಕವಿ, ಲೇಖಕ ಕೃತಿಗಳನ್ನು ರಚಿಸಬೇಕಾದರೆ ಮುಖ್ಯವಾದ ಕಾರಣಗಳಿರುತ್ತವೆ. ವಿಮರ್ಶಯೆ ಪಥವನ್ನು ಪ್ರೊ.ಡಿ.ಅಂಜಿನಪ್ಪ ತಾನೇ ಸೃಷ್ಟಿಕೊಂಡವನು. ಸಮ ಸಮಾಜ ಸಾಮಾಜಿಕ ನ್ಯಾಯದ ಪರಿಕಲ್ಪನೆ ಕೃತಿಯಲ್ಲಿರಬೇಕು ಎಂದರು.

ಕೃತಿಗಳ ಅವಲೋಕನ ಹಾಗೂ ಕವನ ಸಂಕಲನ ಅರ್ಪಣೆ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಹಾಗೂ ಚಿಂತಕ ಪ್ರೊ.ಹೆಚ್.ಲಿಂಗಪ್ಪ ಮಾತನಾಡಿ
ಪ್ರೊ.ಡಿ.ಅಂಜಿನಪ್ಪ ವಿಮರ್ಶಯಲ್ಲಿ ಡಿ.ಆರ್.ನಾಗರಾಜ್‍ರವರಿಗೆ ಸರಿಗಟ್ಟುವಂತಹ ಪ್ರಮುಖರಾಗಿದ್ದರು. ಮೌನವಾಗಿದ್ದರೂ ಅಲ್ಪ ಕಾಲದಲ್ಲಿಯೇ ಅಗಾಧವಾದ ಸಾಹಿತ್ಯ ರಚಿಸುವಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ್ದಾರೆ. ಅವರು ಆಯ್ಕೆ ಮಾಡಿಕೊಂಡಿದ್ದು, ವಿಮರ್ಶೆ ಮತ್ತು ವೈಚಾರಿಕತೆ. ಮೈಸೂರಿನ ರೇವಯ್ಯ ಅರಿವೆಯವರ ಮುಂದಿನ ಭಾಗವಾಗಿದ್ದರು ಎಂದು ಗುಣಗಾನ ಮಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಸಾಹಿತಿ ಮೋದೂರು ತೇಜ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ತುಮಕೂರು ಜಿಲ್ಲೆ ಮಧುಗಿರಿಯ ಎಂ.ಆರ್.ಮಂಜುನಾಥ್ ಬಿ.ಎಂ.ಗುರುನಾಥ್ ಇವರುಗಳು ಮಾತನಾಡಿದರು.

ಜಿ.ಎಸ್.ಉಜ್ಜಿನಪ್ಪ, ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಡಾ.ಲೋಕೇಶ್ ಅಗಸನಕಟ್ಟೆ, ಪ್ರೊ.ಟಿ.ವಿ.ಸುರೇಶ್‍ಗುಪ್ತ ಇನ್ನು ಅನೇಕರು ಸಮಾರಂಭದಲ್ಲಿದ್ದರು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...