Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪ್ರೊ.ಡಿ.ಅಂಜಿನಪ್ಪ ಒಬ್ಬ ಪ್ರತಿಭಾವಂತ, ಮಿತ ಭಾಷಿ, ನಿಷ್ಟುರತೆಯ ಸ್ವಭಾವದ ಅಪರೂಪದ ವ್ಯಕ್ತಿ : ಡಾ.ಶಿವಲಿಂಗಪ್ಪ ಮೀರಾಸಾಬಿಹಳ್ಳಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 26  : ಪ್ರೊ.ಡಿ.ಅಂಜಿನಪ್ಪನವರ ಅಕಾಲಿಕ ನಿಧನ ಸಾಹಿತ್ಯ ಲೋಕಕ್ಕೆ ದೊಡ್ಡ ನಷ್ಟ ಎಂದು ಜಾನಪದ ವಿದ್ವಾಂಸ ಡಾ.ಮೀರಾಸಾಬಿಹಳ್ಳಿ ಶಿವಣ್ಣ ನೊಂದು ನುಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಎಂ.ಜಯಣ್ಣ ಚಾರಿಟಬಲ್ ಟ್ರಸ್ಟ್, ಅರುಂಧತಿ ಪ್ರಕಾಶನ, ಪ್ರೊ.ಡಿ.ಅಂಜಿನಪ್ಪ ಒಡನಾಡಿಗಳು ವಿದ್ಯಾರ್ಥಿ ಬಳಗ ಇವರುಗಳ ಸಂಯುಕ್ತಾಶ್ರಯದಲ್ಲಿ ರೋಟರಿ ಬಾಲಭವನದಲ್ಲಿ ಏರ್ಪಡಿಸಲಾಗಿದ್ದ ಪ್ರೊ.ಡಿ.ಅಂಜಿನಪ್ಪ ಜೀವ ಚಿಗುರಿನ ಧ್ಯಾನ ನುಡಿನಮನ,ಕೃತಿಗಳ ಅವಲೋಕನ, ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.

ಪ್ರೊ.ಡಿ.ಅಂಜಿನಪ್ಪ ಆರು ವರ್ಷಗಳ ಅವಧಿಯಲ್ಲಿ ಐದು ಕೃತಿಗಳನ್ನು ಪ್ರಕಟಿಸಿರುವುದು ಸುಲಭದ ಕೆಲಸವಲ್ಲ. ಅನಾರೋಗ್ಯಕ್ಕೆ ತುತ್ತಾಗಿ ಎಲ್ಲರನ್ನು ಅಗಲಿರುವುದು ಬೇಸರ ತಂದಿದೆ. ಅವರ ಅಪ್ರಕಟಿತ ಕೃತಿಗಳನ್ನು ಕುಟುಂಬದವರು ನೀಡಿದರೆ ಪ್ರಕಟಗೊಳಿಸುತ್ತೇನೆ. ನನಗೆ ಪರಮಾತ್ಮ ಶಿಷ್ಯನಾಗಿದ್ದ ಪ್ರೊ.ಡಿ.ಅಂಜಿನಪ್ಪ ನನ್ನ ಮೇಲೆ ಅಪಾರವಾದ ಪ್ರೀತಿ ಗೌರವವಿಟ್ಟುಕೊಂಡಿದ್ದ. ಅದ್ಬುತವಾದ ವ್ಯಕ್ತಿತ್ವ ಆತನದು. ಬೆಂಗಳೂರಿನ ಸಿ.ವಿ.ಜಿ.ಪಬ್ಲಿಕೇಷನ್ ಚಂದ್ರು ಜಿಲ್ಲೆಯ ಅನೇಕ ಲೇಖಕರ ಪುಸ್ತಕಗಳನ್ನು ಪ್ರಕಟಿಸಿದ್ದಾರೆಂದು ಶ್ಲಾಘಿಸಿದರು.

ಸಾಹಿತಿ ಹಾಗೂ ಚಿಂತಕರಾದ ಡಾ.ಶಿವಲಿಂಗಪ್ಪ ಮೀರಾಸಾಬಿಹಳ್ಳಿ ಮಾತನಾಡಿ ಪ್ರೊ.ಡಿ.ಅಂಜಿನಪ್ಪ ಒಬ್ಬ ಪ್ರತಿಭಾವಂತ ಮಿತ ಭಾಷಿ, ನಿಷ್ಟುರತೆಯ ಸ್ವಭಾವ. ಗಮನಾರ್ಹವಾದ ಹೊಸತನದ ವಿಮರ್ಶಕ. ಅವರ ಕೃತಿಗಳನ್ನು ಓದಿದಾಗ ಬರವಣಿಗೆಯ ಎಂತಹ ಸಾಮರ್ಥ್ಯ ಶಕ್ತಿ ಇತ್ತು ಎನ್ನುವುದು ಗೊತ್ತಾಗುತ್ತದೆ. ಮಿಮರ್ಶಕನಿಗೆ ಮುಕ್ತಾಯವಿಲ್ಲದ ಅಧ್ಯಯನ ಬೇಕು. ಬರಹಗಾರನಿಗೆ ಹಾಗೂ ವಿಮರ್ಶಕನಿಗೆ ಸಾಮಾಜಿಕ ಹೊಣೆಗಾರಿಕೆಯಿರಬೇಕು. ಕವಿ, ಲೇಖಕ ಕೃತಿಗಳನ್ನು ರಚಿಸಬೇಕಾದರೆ ಮುಖ್ಯವಾದ ಕಾರಣಗಳಿರುತ್ತವೆ. ವಿಮರ್ಶಯೆ ಪಥವನ್ನು ಪ್ರೊ.ಡಿ.ಅಂಜಿನಪ್ಪ ತಾನೇ ಸೃಷ್ಟಿಕೊಂಡವನು. ಸಮ ಸಮಾಜ ಸಾಮಾಜಿಕ ನ್ಯಾಯದ ಪರಿಕಲ್ಪನೆ ಕೃತಿಯಲ್ಲಿರಬೇಕು ಎಂದರು.

ಕೃತಿಗಳ ಅವಲೋಕನ ಹಾಗೂ ಕವನ ಸಂಕಲನ ಅರ್ಪಣೆ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಹಾಗೂ ಚಿಂತಕ ಪ್ರೊ.ಹೆಚ್.ಲಿಂಗಪ್ಪ ಮಾತನಾಡಿ
ಪ್ರೊ.ಡಿ.ಅಂಜಿನಪ್ಪ ವಿಮರ್ಶಯಲ್ಲಿ ಡಿ.ಆರ್.ನಾಗರಾಜ್‍ರವರಿಗೆ ಸರಿಗಟ್ಟುವಂತಹ ಪ್ರಮುಖರಾಗಿದ್ದರು. ಮೌನವಾಗಿದ್ದರೂ ಅಲ್ಪ ಕಾಲದಲ್ಲಿಯೇ ಅಗಾಧವಾದ ಸಾಹಿತ್ಯ ರಚಿಸುವಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ್ದಾರೆ. ಅವರು ಆಯ್ಕೆ ಮಾಡಿಕೊಂಡಿದ್ದು, ವಿಮರ್ಶೆ ಮತ್ತು ವೈಚಾರಿಕತೆ. ಮೈಸೂರಿನ ರೇವಯ್ಯ ಅರಿವೆಯವರ ಮುಂದಿನ ಭಾಗವಾಗಿದ್ದರು ಎಂದು ಗುಣಗಾನ ಮಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಸಾಹಿತಿ ಮೋದೂರು ತೇಜ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ತುಮಕೂರು ಜಿಲ್ಲೆ ಮಧುಗಿರಿಯ ಎಂ.ಆರ್.ಮಂಜುನಾಥ್ ಬಿ.ಎಂ.ಗುರುನಾಥ್ ಇವರುಗಳು ಮಾತನಾಡಿದರು.

ಜಿ.ಎಸ್.ಉಜ್ಜಿನಪ್ಪ, ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಡಾ.ಲೋಕೇಶ್ ಅಗಸನಕಟ್ಟೆ, ಪ್ರೊ.ಟಿ.ವಿ.ಸುರೇಶ್‍ಗುಪ್ತ ಇನ್ನು ಅನೇಕರು ಸಮಾರಂಭದಲ್ಲಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶಿಕ್ಷಕರ ಹಿತರಕ್ಷಣೆಗೆ ಕೈ ಸರ್ಕಾರ ಬದ್ಧ | ಕೊಟ್ಟ ಮಾತು ತಪ್ಪದ ಸಿಎಂ ಸಿದ್ದು :  ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್

ಚಿತ್ರದುರ್ಗ, ಮೇ 19 :  ಶಿಕ್ಷಕರ ಹಿತ ಕಾಯುವಲ್ಲಿ ಕಾಂಗ್ರೆಸ್ ಸರ್ಕಾರದ ಬದ್ಧತೆ, ದೃಢ ನಿರ್ಧಾರ ಪ್ರಶ್ನಾತೀತ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ತಾಲೂಕಿನ ಸೀಬಾರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್

ವಿ.ಪಿ ಅಕಾಡೆಮಿ ವತಿಯಿಂದ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ : ಡಾ.ರುದ್ರಮುನಿ

ಸುದ್ದಿಒನ್, ಚಿತ್ರದುರ್ಗ, ಮೇ. 19 : ಸಾಂಪ್ರದಾಯಿಕ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ನಗರದ ವಿ.ಪಿ ಅಕಾಡೆಮಿ ವತಿಯಿಂದ ಆಸಕ್ತ ಮಕ್ಕಳಿಗೆ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಸಾವಯವ ಕೃಷಿ ಪದ್ಧತಿಯು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ

ಶಿವಶಿಂಪಿ ಸಮಾಜಕ್ಕೆ 25 ವರ್ಷ | ಅದ್ದೂರಿಯಾಗಿ ಆಚರಣೆಗೆ ವಾರ್ಷಿಕ ಸಭೆಯಲ್ಲಿ ತೀರ್ಮಾನ

ಸುದ್ದಿಒನ್, ಚಿತ್ರದುರ್ಗ ಮೇ. 19 : ಚತ್ರದುರ್ಗ ಜಿಲ್ಲೆಯಲ್ಲಿ ಶಿವಶಿಂಪಿ ಸಮಾಜ ಪ್ರಾರಂಭವಾಗಿ ಈ ವರ್ಷಕ್ಕೆ 25 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದರಿಂದ ಈ ವರ್ಷ ಅದ್ದೂರಿಯಾಗಿ ಆಚರಣೆ ಮಾಡಲು ಇಂದು ನಡೆದ ಚಿತ್ರದುರ್ಗ ಜಿಲ್ಲಾ

error: Content is protected !!