ಪ್ರಜ್ವಲ್ ರೇವಣ್ಣ ಮಾತಿನಿಂದ ಕಾಂಗ್ರೆಸ್ ಹೋಗುವ ಯೋಚನೆ ಬಿಡ್ತಾರಾ ಶಿವಲಿಂಗೇಗೌಡ..?

suddionenews
1 Min Read

 

 

ಹಾಸನ: ಜೆಡಿಎಸ್ ಶಿವಲಿಂಗೇಗೌಡ ಪಕ್ಷ ಬಿಟ್ಟು ಕಾಂಗ್ರೆಸ್ ಸೇರುವ ಪ್ಲ್ಯಾನ್ ನಲ್ಲಿದ್ದಾರೆ. ಈಗಾಗಲೇ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲೂ ಇದ್ದಾರೆ ಎನ್ನಲಾಗಿದೆ. ಇದೀಗ ಪ್ರಜ್ವಲ್ ರೇವಣ್ಣ ಮತ್ತೆ ಪರೋಕ್ಷವಾಗಿ ಶಿವಲಿಂಗೇಗೌಡ ಅವರಿಗೆ ಆಫರ್ ನೀಡಿದ್ದಾರೆ. ಜೆಡಿಎಸ್ ನಲ್ಲಿಯೇ ಉಳಿದುಕೊಂಡರೆ ನಮಗೆ ಸಂತೋಷ ಎಂದಿದ್ದಾರೆ.

ಹಾಸನದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ನಾವೂ ಅರಸೀಕೆರೆಗೆ ಇನ್ನು ಯಾವ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಹಾಲಿ ಶಾಸಕ ಶಿವಲಿಂಗೇಗೌಡ ನಾನಿನ್ನು ಜೆಡಿಎಸ್ ನಲ್ಲಿಯೇ ಇದ್ದೀನಿ ಅಂತ ಸದನದಲ್ಲಿ ಹೇಳಿದ್ದಾರೆ. ಹಾಸನ ಜಿಲ್ಲೆಯ ಎಲ್ಲಾ ಟಿಕೆಟ್ ಗಳನ್ನು ನಮ್ಮ ಕುಮಾರಣ್ಣನೇ ಅನೌನ್ಸ್ ಮಾಡುತ್ತಾರೆ. ನಾವೂ ಯಾರನ್ನು ಪಕ್ಷ ಬಿಟ್ಟು ಹೋಗಿ ಅಂತ ಹೇಳಿಲ್ಲ.

ಮುಂದಿನ ತಿಂಗಳು ಪಂಚರತ್ನ ರಥಯಾತ್ರೆ ಹಾಸನದಲ್ಲಿ ನಡೆಯಲಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಹಾಗೂ ಅರಸೀಕೆರೆ ಕ್ಷೇತ್ರದವರು ಶಾಸಕರಾಗುವ ತನಕ ಪ್ರಜ್ವಲ್ ರೇವಣ್ಣ ನಿದ್ದೆ ಮಾಡಲ್ಲ. ಯಾವತ್ತಿಗೂ ಶಿವಲಿಂಗಣ್ಣನನ್ನು ಆಚೆ ಹೋಗು ಅಂತ ಹೇಳಿಲ್ಲ. ಯಾರೇ ಅಭ್ಯರ್ಥಿ ಆಗಲಿ ಅವರ ಪರ ನಾವೂ ಕೆಲಸ ಮಾಡಬೇಕು. ಶಿವಲಿಂಗಣ್ಣ ಸದನದಲ್ಲಿ ಹೇಳಿದ್ದನ್ನೇ ಹೊರಗೆ ಬಂದು ಹೇಳಲಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks