ರಾಧೆ ಶ್ಯಾಮ್ ಅಪ್ಡೇಟ್ ಕೊಟ್ಟಿಲ್ಲ ಅಂತ ಡೆತ್ ಬರೆದು ಸೂಸೈಡ್ ಮಾಡಿಕೊಂಡ ಅಭಿಮಾನಿ..!

ಅಭಿಮಾನ ಅನ್ನೋದು ಒಮ್ಮೊಮ್ಮೆ ಅತಿರೇಕಕ್ಕೆ ಹೋಗಿರುತ್ತೆ. ನೆಚ್ಚಿನ ನಟ ನಟಿಯರ ಸಿನಿಮಾ ರಿಲೀಸ್ ದಿನ ಅಭಿಮಾನಿಗಳಿಗೆ ಹಬ್ಬ. ಸೆಲಬ್ರೇಷನ್ ಕೂಡ ಜೋರಾಗಿರುತ್ತೆ. ಆ ಖುಷಿ, ಆ ಸಂಭ್ರಮ ಇದ್ರೆ ನೋ ಪ್ರಾಬ್ಲಮ್. ಆದ್ರೆ ಅಭಿಮಾನ ಕೆಲವೊಬ್ಬರಲ್ಲಿ ಅಷ್ಟಕ್ಕೆ ಮುಗಿಯಲ್ಲ. ಹುಚ್ಚುತನದ ಅಭಿಮಾನವೂ ಇರುತ್ತೆ. ಪ್ರಭಾಸ್ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದು ಸಿನಿಮಾದ ಅಪ್ಡೇಟ್ ಸಿಕ್ಕಿಲ್ಲ ಅನ್ನೋ ಕಾರಣಕ್ಕೆ.

ಈ ಸಂಬಂಧ ಡೆತ್ ನೋಟ್ ಕೂಡ ಬರೆದಿರುವ ಅಭಿಮಾನಿ, ಸಿನಿಮಾದ ಬಗ್ಗೆ ಯಾವುದೇ ಅಪ್ಡೇಟ್ ನೀಡುತ್ತಿಲ್ಲ ಎಂದು ಯುವಿ ಕ್ರಿಯೇಷನ್ಸ್ ತಂಡ ಹಾಗೂ ಚಿತ್ರದ ನಿರ್ದೇಶಕ ರಾಧಾ ಕೃಷ್ಣ ವಿರುದ್ಧ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಡೆತ್ ನೋಟ್ ನಲ್ಲಿ, ನಾನು ನನ್ನ ಜೀವನದಲ್ಲಿ ಇಲ್ಲಿಯವರೆಗೂ ಯಾವುದೇ ರೀತಿಯ ಪತ್ರವನ್ನು ಬರೆದಿಲ್ಲ. ಆದ್ರೆ ನೆಚ್ಚಿನ ನಟ ಪ್ರಭಾಸ್ ಚಿತ್ರಕ್ಕಾಗಿ ಡೆತ್ ನೋಟ್ ಬರೆದಿದ್ದೇನೆ. ಬಹಳ ದಿನಗಳಿಂದ ರಾಧೆ ಶ್ಯಾಮ್ ಅಪ್ಡೇಟ್ ಗಾಗಿ ಕಾಯುತ್ತಿದ್ದೇನೆ‌. ಆದ್ರೆ ಚಿತ್ರತಂಡ ಮಾತ್ರ ಇದಕ್ಕೆ ಸ್ಪಂದಿಸುತ್ತಿಲ್ಲ. ನನ್ನ ಸಾವನ್ನ ನೋಡಿದ ಮೇಲಾದರೂ ಚಿತ್ರತಂಡ ಇದಕ್ಕೆ ಸ್ಪಂದಿಸುತ್ತದೆಯಾ ಎಂದು ನೋಡೋಣಾ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ.

ಇನ್ನು ರಾಧೆ ಶ್ಯಾಮ್ ಸಿನಿಮಾ ಅಪ್ಡೇಟ್ ಗಾಗಿ ಅದಾಗಲೇ ಸೋಷಿಯಲ್ ಮೀಡಿಯಾದಲ್ಲೂ ಟ್ರೆಂಡ್ ಕ್ರಿಯೇಟ್ ಆಗಿತ್ತು. ಅದಾದ ಬಳಿಕ ಚಿತ್ರತಂಡ ಕೂಡ ಜನವರಿ 14ಕ್ಕೆ ಸಿನಿಮಾ ರಿಲೀಸ್ ಬಗ್ಗೆ ದಿನಾಂಕ ಘೋಷಿಸಿದೆ. ಈ ಮಧ್ಯೆ ಅಭಿಮಾನಿಯೊಬ್ಬ ಈ ರೀತಿ ಸಾವು ತಂದುಕೊಂಡಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *