Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅನಧಿಕೃತ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಬೇಡಿ : ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಎಚ್ಚರಿಕೆ

Facebook
Twitter
Telegram
WhatsApp

ಚಿತ್ರದುರ್ಗ. ಏ.29: ಚಿತ್ರದುರ್ಗ ತಾಲ್ಲೂಕಿನ ಹಲವು ಕಡೆ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸರ್ಕಾರದಿಂದ ಸೂಕ್ತ ಮಾನ್ಯತೆ ಪಡೆಯದೆ ಶಾಲೆ ನಡೆಸುತ್ತಿವೆ. ದಯಮಾಡಿ ಪೋಷಕರು ಹೊಸದಾಗಿ ಶಾಲೆಗೆ ಮಕ್ಕಳನ್ನು ಸೇರಿಸುವಾಗ ಅಥವಾ ಒಂದು ಶಾಲೆಯಿಂದ ಇನ್ನೊಂದು ಶಾಲೆ ಮಕ್ಕಳನ್ನು ದಾಖಲಿಸುವಾಗ ಎಚ್ಚರಿಕೆಯನ್ನು ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷನ್ ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ರಾಜ್ಯ ಪಠ್ಯಕ್ರಮದ 77, ಸಿಬಿಎಸ್‌ಸಿ ಪಠ್ಯಕ್ರಮದ 05 ಮತ್ತು ಸಿ.ಐ.ಎಸ್.ಸಿ.ಇ ಪಠ್ಯಕ್ರಮದ 3 ಶಾಲೆಗಳು ಅಧಿಕೃತವಾಗಿ ನೊಂದಣಿಯಾಗಿವೆ. ಈ ಶಾಲೆಗಳ ಹೆಸರು, ಆಡಳಿತ ಮಂಡಳಿ ವಿಳಾಸ, ಶಾಲಾ ವಿಳಾಸ, ಡೈಸ್ ಸಂಖ್ಯೆ, ನೊಂದಣಿ ಪಡೆದ ವರ್ಷ, ನೊಂದಣಿ ಪಡೆದ ಮಾಧ್ಯಮ, ಮಾನ್ಯತೆ ನವೀಕರಣ, ಅನುಮತಿ ಪಡೆದ ತರಗತಿಗಳು, ಪಠ್ಯಕ್ರಮ ವಿವರಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರ ತಿಳುವಳಿಕೆಗಾಗಿ ಪ್ರಕಟ ಮಾಡಲಾಗಿದೆ.

ಈ ಶಾಲೆಗಳನ್ನು ಹೊರತುಪಡಿಸಿ ಇತರೆ ಯಾವುದೇ ಶಾಲೆಗಳಿಗೆ ಪೋಷಕರು ಮಕ್ಕಳನ್ನು ದಾಖಲಿಸಿದಲ್ಲಿ ಶಾಲಾ ಶಿಕ್ಷಣ ಇಲಾಖೆ ಯಾವುದೇ ರೀತಿಯಾ ಜವಾಬ್ದಾರಿಯಾಗಿರುವುದಿಲ್ಲ. ಆಯಾ ಪೋಷಕರೇ ಜವಾಬ್ದಾರಿಯಾಗಿರುತ್ತಾರೆ. ಆದ್ದರಿಂದ ಪೋಷಕರು ಅಧಿಕೃತವಾಗಿ ಮಾನ್ಯತೆ ಪಡೆದ ಶಾಲೆಗಳ ಬಗ್ಗೆ ಮಾಹಿತಿ ಪಡೆದು ಮಕ್ಕಳನ್ನು ದಾಖಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ನಾಗಭೂಷಣ್ ಕೋರಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೊಳಕಾಲ್ಮೂರು| ಆಸ್ಪತ್ರೆಯಲ್ಲಿ ಕರೆಂಟ್ ಕಟ್, ಮೇಣದಬತ್ತಿ ಹಚ್ಚಿ ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯರು

  ಸುದ್ದಿಒನ್, ಮೊಳಕಾಲ್ಮೂರು, ಮೇ. 21 : ಮಳೆ ಬಂದಾಗ ಒಂದಷ್ಟು ಸಮಸ್ಯೆಗಳಾಗುವುದು ಸಾಮಾನ್ಯ. ವಿದ್ಯುತ್ ಸಮಸ್ಯೆ, ರಸ್ತೆಗಳ ಕುಸಿತ, ನೀರು ತುಂಬಿಕೊಳ್ಳುವುದು. ಇದೆಲ್ಲದಕ್ಕೂ ಮುಂಜಾಗ್ರತ ಕ್ರಮ ತೆಗೆದುಕೊಳ್ಳಲೆಂದೆ ಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿರುತ್ತದೆ.

High Blood Pressure : ಅಧಿಕ ರಕ್ತದೊತ್ತಡ ಎಷ್ಟು ಅಪಾಯಕಾರಿ ಗೊತ್ತಾ ?

ಸುದ್ದಿಒನ್ : ಅಧಿಕ ರಕ್ತದೊತ್ತಡ ಎನ್ನುವುದು ಒಂದು ರೀತಿಯ ಸೈಲೆಂಟ್ ಕಿಲ್ಲರ್ ಇದ್ದಂತೆ. ಈ ಸಮಸ್ಯೆ ಇದ್ದರೆ ಪ್ರತಿದಿನ ವೈದ್ಯರ ಸಲಹೆಯಂತೆ ಔಷಧಿ ತೆಗೆದುಕೊಳ್ಳಬೇಕು. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಈ ರಾಶಿಯವರು ಏನೇ ಪ್ರಯತ್ನಿಸಿದರು ಸೋಲುಗಳ ಮೇಲೆ ಸೋಲು ಏಕೆ? ಇದಕ್ಕೆಲ್ಲ ಕಾರಣವೇನು?

ಈ ರಾಶಿಯವರು ಏನೇ ಪ್ರಯತ್ನಿಸಿದರು ಸೋಲುಗಳ ಮೇಲೆ ಸೋಲು ಏಕೆ? ಇದಕ್ಕೆಲ್ಲ ಕಾರಣವೇನು? ಮಂಗಳವಾರ ರಾಶಿ ಭವಿಷ್ಯ -ಮೇ-21,2024 ನರಸಿಂಹ ಜಯಂತಿ ಸೂರ್ಯೋದಯ: 05:46, ಸೂರ್ಯಾಸ್ತ : 06:39 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ

error: Content is protected !!