Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪೆನ್ ಡ್ರೈವ್ ಲೀಕ್ ಮಾಡಿದ್ದು ಪ್ರಜ್ವಲ್ ರೇವಣ್ಣ ಕಾರು ಡ್ರೈವರ್..? ದೇವರಾಜೇಗೌಡ ಹೇಳಿದ್ದೇನು..?

Facebook
Twitter
Telegram
WhatsApp

ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಇರುವ ಪೆನ್ ಡ್ರೈವ್ ಈಗಾಗಲೇ ಸಾಕಷ್ಟು ಜನರ ಕೈಗೆ ಸಿಕ್ಕಿದೆ. ಮೂರು ಸಾವಿರಕ್ಕೂ ಹೆಚ್ಚು ವಿಡಿಯೋಗಳು ಇವೆ ಎನ್ನಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೂ ವಹಿಸಿದೆ. ತನಿಖೆ ಕೂಡ ನಡೆಯುತ್ತಿದೆ. ಇದರ ನಡುವೆ ಈ ವಿಡಿಯೋಗಳು ಮೊದಲಿಗೆ ಸಿಕ್ಕಿದ್ಯಾರಿಗೆ..? ಲೀಕ್ ಆಗಿದ್ದು ಹೇಗೆ ಎಂಬ ಪ್ರಶ್ನೆಗಳು ಎದುರಾಗಿದ್ದವು. ಅದಕ್ಕೆಲ್ಲಾ ಉತ್ತರ ವಕೀಲ ದೇವರಾಜೇಗೌಡ ನೀಡಿದ್ದಾರೆ. ಈ ಮೊದಲು ಹೆಚ್ ಡಿ ರೇವಣ್ಣ ಅವರಿಗೆ ದೇವರಾಜೇಗೌಡ ಅವರು ಪೆನ್ ಡ್ರೈವ್ ವಿಚಾರವಾಗಿ ಎಚ್ಚರಿಕೆ ನೀಡಿದ್ದರು. ಎಲ್ಇಡಿ ಹಾಕಿ, ಅದರಲ್ಲಿ ವಿಡಿಯೋ ತೋರಿಸಲಾ. ಆಗ ಗೊತ್ತಾಗುತ್ತೆ ಯಾರು ಡರ್ಟಿ ಫೆಲೋ ಎಂದಿದ್ದರು.

ಪೆನ್ ಡ್ರೈವ್ ವಿಚಾರವಾಗಿ‌ಮಾತನಾಡಿರುವ ದೇವರಾಜೇಗೌಡ, ಈ ವಿಡಿಯೋ ವಿಚಾರ 2023ರಲ್ಲಿಯೇ ಬಂದಿತ್ತು. ಆದರೆ ಪ್ರಜ್ವಲ್ ರೇವಣ್ಣ ಕೋರ್ಟ್ ನಲ್ಲಿ ಸ್ಟೇ ತಂದಿದ್ದರು. ಅವರ ಕಾರು ಚಾಲಕನಾಗಿದ್ದ ಕಾರ್ತಿಕ್ ಮೇಲೂ ಸ್ಟೇ ತಂದಿದ್ದರು. ಕಾರ್ತಿಕ್ ನನ್ನ ಬಳಿ ಬಂದು ವಕಾಲತ್ತು ಹಾಕಿ ಎಂದಿದ್ದ, ಆ ವಿಡಿಯೋ ಇರಯವ ಪೆನ್ ಡ್ರೈವ್ ಕೂಡ ಕೊಟ್ಟಿದ್ದ. ಆ ವಿಡಿಯೋಗಳನ್ನು ನಾನು ನೋಡಿದ್ದೆ. ಸಾಕಷ್ಟು ವಿಡಿಯೋಗಳು ಅದರಲ್ಲಿ ಇತ್ತು. ಯಾರ್ಯಾರಿಗೆ ಈ ವಿಡಿಯೋ ಕೊಟ್ಟಿದ್ದೀಯಾ ಎಂದಾಗ, ಡಿಕೆ ಶಿವಕುಮಾರ್, ಡಿಕೆ ಸುರೇಶ್ ಸೇರಿದಂತೆ ಕಾಂಗ್ರೆಸ್ ಹಲವು ನಾಯಕರಿಗೆ ಕೊಟ್ಟಿದ್ದೀನಿ ಎಂದಿದ್ದ.

ಆದರೆ ಕಾಂಗ್ರೆಸ್ ಲೀಡರ್ ಎರಡು ತಿಂಗಳಾದರೂ ಏನು ಮಾಡಿರಲಿಲ್ಲ. ಇದನ್ನ ರಾಜಕೀಯವಾಗಿ ಯಾವಾಗ ಬಳಕೆ ಮಾಡಬೇಕು ಎಂಬುದು ನನಗೆ ಗೊತ್ತಿದೆ ಎಂದು ಕಾರ್ತಿಕ್ ಹೇಳಿದ್ದ. ಈ ವಿಚಾರ ಮೋದಿ, ಅಮಿತಾ ಅವರಿಗೆ ಪತ್ರದ ಮುಖೇನ, ಮೇಲ್ ಮುಖೇನ ತಲುಪಿಸಲಾಗಿತ್ತು. ಆದರೆ ಮೇಲ್ ಸೆಮಡಮ್ ಆಗಿಲ್ಲ. ವಿಜಯೇಂದ್ರ ಅವರಿಗೂ ಪತ್ರದ ಮೂಲಕ ತಲುಪಿಸಿತ್ತಾದರೂ ಅವರಿಗೆ ಪತ್ತ ತಲುಪಿಲ್ಲ ಎಂದಿದ್ದಾರೆ.

ಕಾರ್ತಿಕ್ ಬಹಳ ವರ್ಷಗಳ ಕಾಲ ಪ್ರಜ್ವಲ್ ರೇವಣ್ಣ ಕಾರು ಚಾಲಕನಾಗಿದ್ದ. ಇತ್ತಿಚೆಗೆ ರೇವಣ್ಣ ಫ್ಯಾಮಿಲಿಗೂ ಕಾರ್ತಿಕ್ ಗೂ ಜಗಳ ನಡೆದಿತ್ತು. ತಮ್ಮ 13 ಎಕರೆ ಜಮೀನಿಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ಕೂಡ ನೀಡಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!