ಬೆಂಗಳೂರು: ಕೊರೊನಾ ಹಗಣರದ ಬಗ್ಗೆ ಮಧ್ಯಂತರ ವರದಿ ಸಲ್ಲಿಕೆಯಾಗಿದೆ. ಈ ವರದಿಯಲ್ಲಿ ಶ್ರೀರಾಮುಲು ಅವರು ಆರೋಗ್ಯ ಸಚಿವರಾಗಿದ್ದಾಗ ಪಿಪಿಇ ಕಿಟ್ ಬಗ್ಗೆ ಕೇಳಿ ಬಂದ ಹಗರಣದ ಬಗ್ಗೆ ವರದಿ ನೀಡಲಾಗಿದೆ. ಈ ವರದಿಯನ್ನು ಜಸ್ಟೀಸ್ ಕುನ್ಹಾ ಆಯೋಗದಿಂದ ಪರಿಶೀಲನೆ ಮಾಡಿದ್ದು, ಬಿಎಸ್ವೈ ಹಾಗೂ ಶ್ರೀರಾಮು ವಿರುದ್ಧ ಪ್ರಾಸಿಕ್ಯೂಷನ್ ಗೆ ನೀಡಲು ಶಿಫಾರಸು ಮಾಡಿದೆ. 2020 ಖರೀದಿ ಸಂಬಂಧ ತನಿಖೆಯಾಗಬೇಕು ಎಂಬ ಬಗ್ಗೆ ಆಗ್ರಹ ಕೇಳಿ ಬರ್ತಾ ಇದೆ.
ಆದರೆ ಕೋವಿಡ್ ಕಾಲದ ಪೂರ್ಣ ಪ್ತಮಾಣದ ವರದಿಯನ್ನು ಈಗ ಸಲ್ಲಿಕೆ ಮಾಡಿಲ್ಲ. ಡಾ.ಸುಧಾಕರ್ ಅವಧಿಯ ಕಡತಗಳ ಪರಿಶೀಲನೆ ಇನ್ನು ಕೂಡ ಬಾಕಿ ಇದೆ. ಯಡಿಯೂರಪ್ಪ ಅವರ ಅವಧಿಯಲ್ಲಿ ಶ್ರೀರಾಮುಲು ಅವರು ಸಚಿವರಾಗಿದ್ದಾಗ ಏನೆಲ್ಲಾ ಆಯ್ತು ಎಂಬುದರ ವರದಿ ಮಾತ್ರ ರೆಡಿಯಾಗಿದೆ. ಈ ಮೂಲಕ ಬಿಎಸ್ವೈ ಹಾಗೂ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ ಗೆ ಶಿಫಾರಸು ಮಾಡಲಾಗಿದೆ. ಜಸ್ಟೀಸ್ ಜಾನ್ ಡಿ ಮೈಕಲ್ ಕುನ್ಹಾ ಆಯೋಗ ಶಿಫಾರಸು ಮಾಡಿದೆ.
ವರದಿಯಲ್ಲಿ, ಸ್ಥಳೀಯ ಕಂಪನಿಗಳಿಂದ 446 ರೂಪಾಯಿಗೆ ಪಿಪಿಇ ಕಿಟ್ ಖರೀದಿ ಮಾಡಲಾಗಿದೆ. ಚೀನಾ ಕಂಪನಿಗಳಿಂದ 2117 ರೂಪಾಯಿಗೆ ಪಿಪಿಇ ಕಿಟ್ ಖರೀದಿ ಮಾಡಲಾಗಿದೆ. ಅದೇ .ಅದರಿಯ, ಅದೇ ಗುಣಮಟ್ಟದ ಪಿಪಿಇ ಕಿಟ್ ಗಳನ್ನು ಚೀನಾ ಕಂಪನಿಗಳಿಂದ ಅಂದಿನ ಸರ್ಕಾರ ಖರೀದಿ ಮಾಡಿತ್ತು. ಪಿಪಿಇ ಕಿಟ್ ಖರೀದಿ ವೇಳೆ ದರದಲ್ಲು ಭಾರೀ ವ್ಯತ್ಯಾಸವಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಪಿಪಿಇ ಕಿಟ್ ಪೂರೈಕೆದಾರರಿಗೆ 14.21 ಕೋಟಿ ಅನಗತ್ಯವಾಗಿ ಲಾಭ ಮಾಡಿಕೊಡಲಾಗಿತ್ತು ಎಂಬ ಆರೋಪವೂ ಇದೆ. ಹೀಗಾಗಿ ಸರ್ಕಾರ ಈ ಕೇಸನ್ನು ಎಸ್ಐಟಿಯನ್ನು ರಚಿಸಿ ಅದಕ್ಕೆ ನೀಡಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















