ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936
ಚಿತ್ರದುರ್ಗ ನಗರದ ಪಶ್ಚಿಮ ಭಾಗದಲ್ಲಿ ಹೊಳಲ್ಕೆರೆ ರಸ್ತೆಯಲ್ಲಿ ಇರುವ ಶ್ರೀ ಬರಗೇರಮ್ಮದೇವಿ ದೇವಾಲಯವು ಅತ್ಯಂತ ಪ್ರಾಚೀನವಾದ ನಗರದ ನವದುರ್ಗೆಯಲ್ಲಿ ಒಂದಾದ ದೇವರಾಗಿದೆ. ಈ ಸ್ಥಳವು ನೇರಲಗೊಂದಿ ಕಂದಾಯ ಗ್ರಾಮವಾಗಿದ್ದರೂ ಇಂದು ನಗರದ ಒಂದು ಪ್ರಮುಖ ಪ್ರದೇಶವಾಗಿದೆ. ಇಲ್ಲಿರುವ ಸ್ವಚ್ಛಂದ ವಾತಾವರಣ, ಎದುರಿಗೆ ಕಾಣುವ ವಿಶಾಲವಾಗಿ ಹರಡಿರುವ ಕೋಟೆ ಬೆಟ್ಟ ಪ್ರದೇಶ, ಗಿಡ ಮರಗಳ ತಂಪಾದ ಆಹ್ಲಾದಕರ ವಾತಾವರಣವು ಆಧ್ಯಾತ್ಮಿಕ ಶಾಂತಿಗೆ ನೆಲೆಯಾಗಿದೆ.
ಚಿತ್ರದುರ್ಗದ ಕೋಟೆಯ ಹೊರವಲಯದಲ್ಲಿ ಇರುವ ದೇವಾಲಯಗಳಲ್ಲಿ ಈ ದೇವರ ದೇವಾಲಯ ಅತ್ಯಂತ ಪ್ರಮುಖವಾದುದು. ಈ ದೇವಾಲಯ 16ನೇ ಶತಮಾನಕ್ಕೆ ಸೇರಿದುದು ಎಂದು ಇತಿಹಾಸ ತಜ್ಞರಾದ ಪ್ರೊಫೆಸರ್ ಲಕ್ಷ್ಮಣ್ ತೆಲಗಾವಿ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಚಿತ್ರದುರ್ಗದ ಕೋಟೆಯನ್ನು ಮುತ್ತಿಗೆ ಹಾಕಲು ಬಂದ ಶ್ರೀರಂಗಪಟ್ಟಣದ hyder ಸೇನೆಯು ಈ ದೇವಾಲಯದ ಬಳಿಯಲ್ಲಿ ಬೀಡು ಬಿಟ್ಟಿದ್ದರ ಬಗ್ಗೆ ದಾಖಲೆ ದೊರೆಯುತ್ತದೆ. ದೇವಾಲಯಕ್ಕೆ ಸಾವಿರಾರು ಭಕ್ತರು ಪ್ರತಿ ಮಂಗಳವಾರ ಶುಕ್ರವಾರ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ, ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ಹಾಗೂ ಮಳೆ ಅಲಂಕಾರ ನಡೆಯುತ್ತದೆ. ಮಾನಸಿಕ ಖಿನ್ನತೆ,ಮಾಟ ಗಾಳಿ ಸೋಂಕು… ಇನ್ನಿತರ ಸಮಸ್ಯೆಗಳಿಗೆ ಪರಿಹಾರ ಹಾಗೂ ಮುಕ್ತಿ ಪಡೆಯಲು ದೇವಾಲಯದ ಹೊರಭಾಗದಲ್ಲಿ ಭಕ್ತರು ದಿನಗಟ್ಟಲೆ ಉಳಿದುಕೊಳ್ಳುತ್ತಾರೆ.
ಈ ದೇವಿಯು ಅತ್ಯಂತ ಪ್ರಭಾವಶಾಲಿಯಾಗಿದ್ದು ಮನಸ್ಸಿನ ಆಸೆಗಳನ್ನು ಈಡೇರಿಸುವ ಖ್ಯಾತಿ,ತಮ್ಮ ಕೆಲಸಗಳು ಆಗುವ ಬಗ್ಗೆ ದೇವರಿಂದ ಭಕ್ತರು ಹೂವನ್ನು ಪ್ರಸಾದ ರೂಪದಲ್ಲಿ ಹೇಳಿಕೆ ಪಡೆಯುತ್ತಾರೆ.ಪ್ರತಿವರ್ಷ ದೇವಾಲಯದ ಮುಂಭಾಗದಲ್ಲಿ ಸಿಡಿ ಉತ್ಸವ ಕೆಂಡೋತ್ಸವ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗುತ್ತದೆ. ಚಿತ್ರದುರ್ಗ ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತರು ತಮ್ಮ ಮನೆಯಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವ ಮುಂಚೆ ಈ ದೇವರ ದರ್ಶನ ಪಡೆಯುತ್ತಾರೆ ಹಾಗೂ ಉತ್ಸವ ಮೂರ್ತಿಯನ್ನು ತಮ್ಮ ಮನೆಗೆ ಕರೆದು ಪೂಜಿಸುತ್ತಾರೆ.
ಗರ್ಭಗೃಹದಲ್ಲಿ ದೇವಿಯ ಜೊತೆಗೆ ವೀರಗಲ್ಲು ಸಹ ಇದ್ದು ಅದನ್ನು ಪೂಜಿಸಲಾಗುತ್ತದೆ. ದೇವಾಲಯದ ಎದುರು ಭಾಗದಲ್ಲಿ ನಾಗರಕಲ್ಲುಗಳು ಹಾಗೂ ಮಹಾಸತಿ ಕಲ್ಲುಗಳನ್ನು ಪ್ರತಿಷ್ಠಾಪಿಸಲಾಗಿದ್ದು ಪೂಜಿಸಲಾಗುತ್ತದೆ. ದೇವಾಲಯದ ಹತ್ತಿರದಲ್ಲಿ ಮದುವೆ ಮುಂತಾದ ಶುಭ ಸಮಾರಂಭಗಳು ಜರುಗುತ್ತವೆ. ಬಂದ ಭಕ್ತರಿಗೆ ಪ್ರಸಾದವನ್ನು ಅನ್ನ ಸಂತರ್ಪಣೆ ವ್ಯವಸ್ಥೆ ಇರುತ್ತದೆ.
ಎಲ್ಲಾ ಧಾರ್ಮಿಕ ಆಚರಣೆಗಳು ಹಾಗೂ ಹಬ್ಬಗಳನ್ನು ಈ ದೇವಾಲಯದ ಈ ವಿಶೇಷವಾಗಿ ಅದ್ದೂರಿಯಾಗಿ ನಡೆಸಲಾಗುತ್ತದೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್