ಇಂದು ರೆಬಲ್ ಸ್ಟಾರ್ ಅಂಬರೀಶ್ ಅವರ ಐದನೇ ವರ್ಷದ ಪುಣ್ಯ ಸ್ಮರಣೆ. ಇಂದು ಅಭಿಷೇಕ್ ಅಂಬರೀಶ್ ಅವರ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಕೂಡ ರಿಲೀಸ್ ಆಗಿದೆ. ಬ್ಯಾಡ್ ಮ್ಯಾನರ್ಸ್ ಸಿನಿಮಾ ರಾಜ್ಯಾದ್ಯಂತ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ.
ಮಂಡ್ಯದಲ್ಲಂತು ಬ್ಯಾಡ್ ಮ್ಯಾನರ್ಸ್ ಸಿನಿಮಾಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಸಿನಿಮಾ ರಿಲೀಸ್, ಅಂಬರೀಶ್ ಅವರ ಪುಣ್ಯ ಸ್ಮರಣೆಯ ಜೊತೆಗೆ ಕನ್ನಡದ ಹಬ್ಬವನ್ನು ಆಚರಿಸಲಾಗಿದೆ. ಊರಿಗೆ ಊರೇ ಸಂಭ್ರಮದಲ್ಲಿದ್ದು, ಚಿತ್ರಮಂದಿರದಲ್ಲಿ ಅಭಿಷೇಕ್ ಅಂಬರೀಶ್ ಅವರ 63 ಅಡಿ ಕಟೌಟ್ ಹಾಕಲಾಗಿದೆ.
ದುನಿಯಾ ಸೂರಿ ನಿರ್ದೇಶನ ಎಂದಾಗಲೇ ಸಿಕ್ಕಾಪಟ್ಟೆ ನಿರೀಕ್ಷೆ ಇರುತ್ತೆ. ಮಾಸ್ ಸಿನಿಮಾಗಳಿಗೇನೆ ಖ್ಯಾತಿ ಪಡೆದಿರುವ ಸೂರಿ, ಅಭಿಷೇಕ್ ಮೂಲಕ ರಾ ರೌಡಿಸಂ ಹೇಳಿದ್ದಾರೆ. ಬ್ಯಾಡ್ ಮ್ಯಾನರ್ಸ್’ ಸಿನಿಮಾದಲ್ಲಿ ಅಭಿಷೇಕ್ ಅವರ ಪಾತ್ರ ‘ರೆಬೆಲ್’ ಆಗಿದೆ. ಟಗರು’ ಸಿನಿಮಾ ಮಾಡಿದ ಸೂರಿ ಅವರು ಸಕ್ಸಸ್ ಕಂಡಿದ್ದರು. ಅದೇ ರೀತಿಯ ಸೂತ್ರವನ್ನು ಅವರು ‘ಪಾಪ್ಕಾರ್ನ್ ಮಂಕಿ ಟೈಗರ್’ ಚಿತ್ರದಲ್ಲೂ ಪ್ರಯತ್ನಿಸಿದ್ದರು. ಈಗ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದಲ್ಲೂ ಅದು ಮರುಕಳಿಸಿದೆ.











