Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೊಳಕಾಲ್ಮೂರು ಪೊಲೀಸರ ಕಾರ್ಯಾಚರಣೆ : 09 ಮಂದಿ ಅಂತರ್ ರಾಜ್ಯ ನಿಧಿ ಕಳ್ಳರ ಬಂಧನ

---Advertisement---

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 23 : ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಐತಿಹಾಸಿಕ ಸ್ಥಳಗಳಾದ ಅಶೋಕನ ಶಿಲಾ ಶಾಸನ, ಜಟಿಂಗರಾಮೇಶ್ವರ, ಶ್ರೀ ನುಂಕಮಲೆಸಿದ್ದೇಶ್ವರ ದೇವಸ್ಥಾನದಂತಹ ಪುರಾತನ ಸ್ಥಳಗಳಲ್ಲಿ ಪುರಾತನ ನಿಧಿ, ಶಾಸನ, ವಿಗ್ರಹಗಳನ್ನ ಕಳುವು ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಕರ್ನಾಟಕ-ಆಂದ್ರಪ್ರದೇಶ-ತಮಿಳುನಾಡು ರಾಜ್ಯದವರಾದ 09 ಮಂದಿ ಅಂತರ್ ರಾಜ್ಯ ನಿಧಿ ಕಳ್ಳರನ್ನು ಮೊಳಕಾಲ್ಮೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಚಿತ್ರದುರ್ಗ ಜಿಲ್ಲೆಯವರಾದ

1] ತಿಮ್ಮರಾಜು ತಂದೆ ಮರಿಸ್ವಾಮಿ ಭೈರಾಪುರ ಗ್ರಾಮ, ಮೊಳಕಾಲ್ಮೂರು ತಾಲೂಕು,
2] ರಾಮಾಂಜಿನಿ ತಂದೆ ಪಾತಯ್ಯ, 45 ವರ್ಷ, ತೆಂಗಿನಗೌರಸಮುದ್ರ ಗ್ರಾಮ, ಮೊಳಕಾಲ್ಮೂರು ತಾಲ್ಲೂಕು,
3] ಟಿ.ಸಣ್ಣಪ್ಪ ತಂದೆ ತಿಮ್ಮಣ್ಣ, ಸುಮಾರು 60 ವರ್ಷ, ಗುಂಡೂರು ಗ್ರಾಮ, ಮೊಳಕಾಲ್ಮೂರು ಟೌನ್.
4] ಮೈಲಾರಪ್ಪ ತಂದೆ ಈರನಾಗಪ್ಪ, ಸುಮಾರು 52 ವರ್ಷ, ಬೊಮ್ಮಲಿಂಗೇನಹಳ್ಳಿ, ಗ್ರಾಮ, ಮೊಳಕಾಲ್ಮೂರು ತಾಲ್ಲೂಕು,

ತಮಿಳುನಾಡಿನ
5] ವೇಣು ತಂದೆ ಜಿ,ಗೋಪಾಲಪ್ಪ, 38 ವರ್ಷ, ಕೃಷ್ಣಗಿರಿ ಜಿಲ್ಲೆ,
6] ಎಂ.ಆರ್.ಮಂಜುನಾಥ ತಂದೆ ಮುನಿಯಪ್ಪ, ಸುಮಾರು 42 ವರ್ಷ, ಪ್ಲಂಬರ್, ತಳಿಕೊತ್ತೂಯಾರ್‌, ಕೃಷ್ಣಗಿರಿ ಜಿಲೆ,
7] ಎಂ.ಆನಂದ ತಂದೆ ಮುತ್ತಪ್ಪ, ಸುಮಾರು 36 ವರ್ಷ ಡ್ರೈವರ್ ಕೆಲಸ, ಎನ್.ಕೊತ್ತೂರು, ಕೃಷ್ಣಗಿರಿ ಜಿಲ್ಲೆ,

ಮತ್ತು ತೆಲಂಗಾಣದ
8] ಸಲ್ಕಾಪುರಂ ಶ್ರೀನಿವಾಸಲು ತಂದೆ ಸಲ್ಕಾಪುರ ತಿಮ್ಮಯ್ಯ, ಸುಮಾರು 45 ವರ್ಷ, ಚಿನ್ನೋನಿಪಲ್ಲಿ, ತೆಲಂಗಾಣ ರಾಜ್ಯ.
9] ವೆಂಕಟೇಶ ತಂದೆ ಮಲ್ಲದಣ್ಯ, ಸುಮಾರು 40 ವರ್ಷ, ಚಿನ್ನೋನಿಪಲ್ಲಿ ಎಂದು ಗುರುತಿಸಲಾಗಿದೆ.

ಇವರೆಲ್ಲರೂ ನಿನ್ನೆ (ಮಾರ್ಚ್. 22 ರಂದು ) ಭೈರಾಪುರ-ಹಿರೇಕೆರೆಹಳ್ಳಿ, ಗ್ರಾಮಗಳ ಮಧ್ಯದಲ್ಲಿರುವ ವಿಭೂತಿ ಗುಡ್ಡದಲ್ಲಿ ಇನ್ನೊವಾ ಕಾರಿನಲ್ಲಿ ಉಪಕರಣಗಳನ್ನಿಟ್ಟುಕೊಂಡು ಅನುಮಾನಾಸ್ಪದವಾಗಿ ಗುಡ್ಡಗಳ ಸುತ್ತಾ-ಮುತ್ತಾ, ತಿರುಗಾಡುತ್ತಾ ಭೂಮಿಯನ್ನು ಶೋಧಿಸುತ್ತಿದ್ದರು. ಸ್ಥಳಿಯರು ನೀಡಿದ ಖಚಿತವಾದ ಮಾಹಿತಿ ಮೇರೆಗೆ ಮೊಳಕಾಲ್ಮೂರು ಪೊಲೀಸರು ಬಂಧಿಸಿ ಅವರಿಂದ ಇನ್ನೋವಾ ಕಾರ್, ಜನರೇಟರ್, ಡ್ರಿಲ್ಲಿಂಗ್ ಮಿಶಿನ್, 20 ಮೀಟರ್ ಉದ್ದದ ವೈರ್, ನಾಲ್ಕು ಪ್ಲಾಸ್ಟಿಕ್ ಪುಟ್ಟಿ, ಮೂರು ಸಲಿಕೆ ಯನ್ನು ವಶಪಡಿಸಿಕೊಂಡಿದ್ದಾರೆ.

ಈ ಅಂತರ್ ರಾಜ್ಯ ನಿಧಿಗಳ್ಳರನ್ನು ಪತ್ತೆಹಚ್ಚಲು
ಚಳ್ಳಕೆರೆ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ
ರಾಜಣ್ಣ, ಟಿ.ಬಿ, ಮೊಳಕಾಲ್ಮೂರು ವೃತ್ತ ನಿರೀಕ್ಷಕರಾದ ವಸಂತ ವಿ ಅಸೋದೆರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಗಳಾದ ಈರೇಶ, ಮತ್ತು, ಪಾಂಡುರಂಗ ಮತ್ತು ಸಿಬ್ಬಂದಿಯವರನ್ನು ತಂಡವನ್ನು ರಚಿಸಲಾಗಿರುತ್ತದೆ. ಈ ತಂಡವನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ
ರಂಜಿತ್ ಕುಮಾರ್ ಬಂಡಾರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಸ್ವಾಮಿ, ಜಿ.ಎಸ್. ರವರು ಪ್ರಶಂಶಿಸಿರುತ್ತಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment