ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 13 : 1859ರ ಜೂನ್ 24ರಂದು ನಡೆದ ಸ್ಯಾಲ್ಪರಿನೋ ಯುದ್ದದ ಭೀಕರತೆಯನ್ನು ಕಂಡ ಸ್ವಿಸ್ ವ್ಯಾಪಾರಿ ಹೆನ್ರಿ ಡುನ್ಯಾoಟ್ ಅವರು ಯುದ್ಧದಲ್ಲಿ ಗಾಯಗೊಂಡ ಹಾಗೂ ತೊಂದರೆಗೊಳಾಗಾದ ಸೈನಿಕರಿಗೆ ನೆರವು ನೀಡುವ ಉದ್ದೇಶದಿಂದ ಅಂತರಾಷ್ಟ್ರೀಯ ಮಾನವೀಯ ಸೇವಾ ಚಳುವಳಿಗೆ ಬನಾದಿ ಹಾಕಿದರು. ನಂತರ 1864ರಲ್ಲಿ 12 ದೇಶಗಳೊಂದಿಗೆ ಒಪ್ಪಂದಕ್ಕೆ ಕಾರಣರಾದರು. ಈ ಹಿನ್ನೆಲೆಯಲ್ಲಿ ಜೀನಿವಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಗಾಯತ್ರಿ ಶಿವರಾಂ ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಎಸ್ ಜೆ ಎಂ ತಾಂತ್ರಿಕ ಮಹಾ ವಿದ್ಯಾಲಯ, ಯುವ ರೆಡ್ ಕ್ರಾಸ್ ಘಟಕ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ
ಜೀನಿವಾ ದಿನ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು
ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಜೊತೆಗೆ ರೆಡ್ ಕ್ರಾಸ್ ಸಂಸ್ಥೆಯ ಮಾನವೀಯತೆ, ನಿಷ್ಪಕ್ಷಪಾತ, ತಟಸ್ಥತೆ, ಸ್ವಾತಂತ್ರ್ಯ, ಸ್ವಯಂಪ್ರೇರಿತ ಸೇವೆ, ಏಕತೆ ಮತ್ತು ಸಾರ್ವತ್ರಿಕತೆ ಕುರಿತು ತಿಳಿಸಿದರು.
ಎಸ್ ಜೆ ಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಪಿ ಬಿ ಭರತ್ ಮಾತನಾಡಿ, ಯುವಕರು ಸಾಮಾಜಿಕ ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಂಡು ತಮ್ಮ ಗುರಿಯತ್ತ ಸಾಗಬೇಕೆಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿ ಎಸ್ ವೀರೇಶ್, ನಿರ್ದೇಶಕರಾದ ಶಿವರಾಂ, ಯುವ ರೆಡ್ ಸಂಯೋಜಕರಾದ ಶ್ರೀನಿವಾಸ್ ಮಳಲಿ, ನೀಲಕಂಠಪ್ಪ ಟಿ, ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಡಾ ಈ ನಿರಂಜನ್, ಶ್ರೀಮತಿ ಪಲ್ಲವಿ, ಪ್ರೊ. ಶಶಿಧರ್ ಎ. ಸಿ, ಬೀಬಿ ಆಜೀರ, ಹಬೀಯಾ ಮುಂತಾದವರು ಉಪಸ್ಥಿತರಿದ್ದರು.









